ನವದೆಹಲಿ: ದಕ್ಷಿಣ ಭಾರತದ ಚಿತ್ರಗಳು ದೇಶ ವಿದೇಶಗಳಲ್ಲಿ ಹಿಟ್ ಆದ ಬಳಿಕ ಹಿಂದಿ ಚಿತ್ರರಂಗ ಏಕೋ ಮಂಕಾದಂತೆ ಕಾಣುತ್ತಿದೆ. ಇದೇ ವಿಚಾರ ಅಲ್ಲಿನ ನಟ, ನಿರ್ದೇಶಕರ ಕಣ್ಣು ಕೆಂಪಗಾಗುವಂತೆ ಮಾಡಿದೆ. ಕೆಜಿಎಫ್ , ಪುಷ್ಪ ಸೇರಿದಂತೆ ದಕ್ಷಿಣದ ಹಲವು ಚಿತ್ರಗಳು ವಿಶ್ವದೆಲ್ಲೆಡೆ ಕಮಾಲ್ ಮಾಡಿ ಗಳಿಕೆಯಲ್ಲಿಯೂ ವಿಶ್ವದಾಖಲೆ ಮಾಡಿವೆ. ಇದೀಗ ದಕ್ಷಿಣ ಭಾರತದ ಚಿತ್ರರಂಗದ ಕುರಿತು ನಿರ್ಮಾಪಕ ಕರಣ್ ಜೋಹರ್ ಕಿಡಿಕಾರಿದ್ದಾರೆ.
ವಿ ಆರ್ ಯುವ’ ಹೆಸರಿನ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಕರಣ್ ಜೋಹರ್, ದಕ್ಷಿಣ ಭಾರತದ ಸಿನಿಮಾಗಳಿಂದ ‘ಕೆಟ್ಟ ಹೀರೋಯಿಸಂ’ ಅನ್ನು ಬಾಲಿವುಡ್ ಎರವಲು ಪಡೆದುಕೊಂಡಿದೆ” ಎಂದಿದ್ದಾರೆ. ”ಕೆಟ್ಟ ಹೀರೋಯಿಸಂ’, ಅಥವಾ ಅತಿಯಾದ ಪುರುಷ ಪ್ರಾಧಾನ್ಯತೆಯುಳ್ಳ ಸಿನಿಮಾಗಳನ್ನು ಮಾಡುವುದು ಬಾಲಿವುಡ್ನ ನಿಜವಾದ ಜಾಯಮಾನವಲ್ಲ.
ಇದನ್ನು ನಾವು ದಕ್ಷಿಣ ಭಾರತ ಚಿತ್ರರಂಗದಿಂದ ಎರವಲು ಪಡೆದಿದ್ದೇವೆ. ‘ಕೆಜಿಎಫ್’, ‘ಪುಷ್ಪ’ ಮಾದರಿಯ ಸಿನಿಮಾಗಳು ಸೂಪರ್ ಹಿಟ್ ಆದ ಬೆನ್ನಲ್ಲೆ ಇಲ್ಲಿಯೂ ಅದೇ ಮಾದರಿಗಳನ್ನು ನಿರ್ಮಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಬಾಲಿವುಡ್ನವರು ಅದನ್ನು ಕೆಟ್ಟ ರೀತಿಯಾಗಿ ನಕಲು ಮಾಡುತ್ತಿದ್ದಾರೆ” ಎಂದಿದ್ದಾರೆ.