ಮುಂಬೈ : ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಆಗಿರುವ ರಾಮಲಲ್ಲಾ ಮೂರ್ತಿಯ ಬಗ್ಗೆ ಕಂಗನಾ ರನೌತ್ ಅವರು ಮೆಚ್ಚುಗೆಯ ಮಾತನಾಡಿದ್ದಾರೆ. ಅದರಲ್ಲೂ ಮೂರ್ತಿಯನ್ನು ಕೆತ್ತನೆ ಮಾಡಿರುವ ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್ ಸಾಧನೆಯನ್ನು ಹೊಗಳಿದ್ದಾರೆ.
ಅರುಣ್ ಯೋಗಿರಾಜ್ ಅವರು ಎಷ್ಟು ಸುಂದರವಾದ ರಾಮ ಲಲ್ಲಾ ಮೂರ್ತಿಯನ್ನು ಕೆತ್ತನೆ ಮಾಡಿದ್ದಾರೆ. ಅವರಿಗೆ ರಾಮನ ಆಶೀರ್ವಾದ ಸಿಕ್ಕಿದೆ. ಶ್ರೀರಾಮನನ್ನೇ ಕಣ್ತುಂಬಿಕೊಂಡ ಸದಾವಕಾಶ ಅವರಿಗೆ ಲಭಿಸಿದೆ ನಗುಮೊಗದ ರಾಮಲಲ್ಲಾ ಮೂರ್ತಿಯನ್ನು ನೋಡಿದರೆ ಆನಂದವಾಗುತ್ತದೆ ಎಂದಿದ್ದಾರೆ.
ರಾಮಲಲ್ಲಾ ಮೂರ್ತಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ಕಂಗನಾ, ನಾನು ಬಾಲ್ಯದಿಂದಲೂ ಶ್ರೀರಾಮ ಹೀಗೆಯೇ ಇದ್ದಾನೆ ಎಂದು ಭಾವಿಸಿದ್ದೆ. ರಾಮಲಲ್ಲಾ ಮೂರ್ತಿಯು ಇಂದು ನನ್ನ ಕಲ್ಪನೆಗಳೊಂದಿಗೆ ಜೀವಂತವಾಗಿದೆ.
ರಾಮಲಲ್ಲಾ ಮೂರ್ತಿ ಎಷ್ಟೊಂದು ಸುಂದರವಾಗಿದ್ದು, ಎಲ್ಲರ ಹೃದಯವನ್ನು ಗೆದ್ದಿದೆ. ಕಲ್ಲಿನಲ್ಲಿ ಸುಂದರವಾದ ದೇವರ ಮೂರ್ತಿಯನ್ನು ಕೆತ್ತನೆ ಮಾಡಲು ಅರುಣ್ ಯೋಗಿರಾಜ್ ಅವರ ಮೇಲೆ ಸಾಕಷ್ಟು ಒತ್ತಡಗಳಿತ್ತು. ಆದರೆ ಅವರ ಮುಂದೆ ಸ್ವತಃ ರಾಮನೇ ಕಾಣಿಸಿಕೊಂಡು ಆಶೀರ್ವಾದ ಮಾಡಿದ್ದಾರೆ ಎಂದಿದ್ದಾರೆ.