News Karnataka Kannada
Friday, May 17 2024
ಬಾಲಿವುಡ್

ಅನಂತ ಅಂಬಾನಿ ಮದುವೆ ಕಾರ್ಯಕ್ರಮಲ್ಲಿ ರಾಮ್‌ಚರಣ್‌ಗೆ ಶಾರುಕ್‌ ಖಾನ್‌ ಅವಮಾನ ?

Photo Credit : News Kannada

ಜಾಮ್‌ನಗರ: ಬಾಲಿವುಡ್ ನಟ ಶಾರುಕ್‌ ಖಾನ್‌ ಮೇಲೆ ಟಾಲಿವುಡ್ ನಟ ರಾಮ್‌ಚರಣ್‌ ತೇಜ್‌ ಅಭಿಮಾನಿಗಳು ಮುನಿಸಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಟನನ್ನು ಶಾರುಕ್‌ ‘ಇಡ್ಲಿ ವಡಾ ರಾಮ್‌ಚರಣ್‌ ಕಹಾ ಹೇ ತು’ ಎಂದು ಕರೆದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಅನಂತ ಅಂಬಾನಿ -ರಾಧಿಕಾ ಮರ್ಜೆಂಟ್ ಮದುವೆಪೂರ್ವ ಕಾರ್ಯಕ್ರಮಲ್ಲಿ ತೆಲುಗಿನ ಜನಪ್ರಿಯ ಹಾಡು ‘ನಾಟು ನಾಟು’ ಹಾಡಿಗೆ ಬಾಲಿವುಡ್‌ ನಟರಾದ ಶಾರುಖ್‌ ಖಾನ್‌, ಸಲ್ಮಾನ್ ಖಾನ್‌, ಅಮೀರ್ ಖಾನ್‌ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಶಾರುಕ್‌, ರಾಮ್‌ಚರಣ್‌ ಅವರನ್ನು ವೇದಿಕೆ ಮೇಲೆ ಬರುವಂತೆ ಆಹ್ವಾನಿಸಿದ್ದರು.

ಈ ಕುರಿತ ವಿಡಿಯೊವೊಂದನ್ನು ರಾಮ್‌ ಚರಣ್‌ ಅಭಿಮಾನಿಗಳು ಹಂಚಿಕೊಂಡಿದ್ದು, ರಾಮ್‌ಚರಣ್‌ ಅವರನ್ನು ವೇದಿಕೆಗೆ ಕರೆಯುವ ವೇಳೆ ಶಾರುಕ್‌ ಅನೇಕ ಪದಗಳನ್ನು ಬಳಸಿರುವುದು ಕಾಣಬಹುದಾಗಿದೆ. ಈ ವೇಳೆ ಒಂದು ಕಡೆ ಅವರು ‘ಇಡ್ಲಿ’ ಎಂಬ ಪದವನ್ನು ಬಳಸಿರುವುದು ಅಸ್ಪಷ್ಟವಾಗಿ ಕೇಳಿಸುತ್ತದೆ.

ಶಾರುಕ್ ಅವರ ಇಡ್ಲಿ- ವಡಾ ಹೇಳಿಕೆಗೆ ರಾಮ್‌ಚರಣ್ ಅವರ ಮೇಕಪ್‌ ಆರ್ಟಿಸ್ಟ್ ಝಿಬಾ ಹಾಸನ್ ಕಿಡಿಕಾರಿದ್ದಾರೆ. ‘ರಾಮ್‌ಚರಣ್‌ನಂತಹ ಶ್ರೇಷ್ಠ ನಟರನ್ನು ಅಗೌರವದಿಂದ ಕಾಣುವುದು ಸರಿಯಲ್ಲ. ಇದಾದ ಬೆನ್ನಲ್ಲೇ ಆ ಸ್ಥಳದಿಂದ ನಾನು ಹೊರ ಬಂದೆ’ ಎಂದು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು