News Karnataka Kannada
Friday, May 03 2024
ಬಾಲಿವುಡ್

ಕಾಶ್ಮೀರ ಫೈಲ್ಸ್ ಸಿನಿಮಾ ಶ್ಲಾಘಿಸಿದ ಅಭಿಷೇಕ್ ಬಚ್ಚನ್: ಧನ್ಯವಾದ ಹೇಳಿದ ಅಗ್ನಿಹೋತ್ರಿ 

Abhishek Bacchan
Photo Credit :

ದಿ ಕಾಶ್ಮೀರ ಫೈಲ್ಸ್‌ ಸಿನಿಮಾ ಬಿಡುಗಡೆಯಾದಾಗಿನಿಂದಲೂ ಸಾಕಷ್ಟು ಜನ ಮನ್ನಣೆ ಗಳಿಸಿದ್ದು, ಅನೇಕ ಬಾಲಿವುಡ್ ತಾರೆಯರು ರಾಜಕಾರಣಿಗಳು ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ಬಾಲಿವುಡ್‌ ನಟ ಅಭಿಷೇಕ್ ಬಚ್ಚನ್ ಕೂಡ ಸಿನಿಮಾಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ದಿ ಕಾಶ್ಮೀರ ಫೈಲ್ಸ್‌ ಸಿನಿಮಾದ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ  ಅವರು ಅಭಿಷೇಕ್‌ ಬಚ್ಚನ್‌ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. 90ರ ದಶಕದಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧವನ್ನು ಆಧರಿಸಿದ ಸಿನಿಮಾ ಇದಾಗಿದೆ. ಈ ಸಿನಿಮಾ ಚೆನ್ನಾಗಿಲ್ಲ ಅಥವಾ ಕೆಟ್ಟ ಸಿನಿಮಾ ಎಂದು ಹೇಳುವ ಯಾರನ್ನೂ ಕೂಡ ನಾನು ಭೇಟಿಯಾಗಿಲ್ಲ ಎಂದು ಅಭಿಷೇಕ್‌ ಹೇಳಿದ್ದಾರೆ.

ಪ್ರಸ್ತುತ ಕಾಶ್ಮೀರ್ ಫೈಲ್ಸ್ ಸಿನಿಮಾ 236 ಕೋಟಿ ರೂಪಾಯಿ ಗಳಿಸಿದೆ ಮತ್ತು ಬಾಕ್ಸ್ ಆಫೀಸ್‌ನ್ನು ಇನ್ನೂ ಕೊಳ್ಳೆ ಹೊಡೆಯುತ್ತಲೇ ಇದೆ. ಟೈಮ್ಸ್ ನೌ ಜೊತೆಗಿನ ಸಂವಾದದಲ್ಲಿ ಅಭಿಷೇಕ್ ಬಚ್ಚನ್ ಅವರು ಕಾಶ್ಮೀರ ಫೈಲ್ಸ್ ಸಿನಿಮಾವನ್ನು ಶ್ಲಾಘಿಸಿದರು. ರಾಜಕೀಯ ಸಮಸ್ಯೆಗಳಿಗೆ ಚಲನಚಿತ್ರಗಳು ಪರಿಹಾರವಾಗಬಹುದೇ ಎಂದು ಕೇಳಿದಾಗ, ಜೂನಿಯರ್ ಬಚ್ಚನ್, ” ಪ್ರತಿಯೊಬ್ಬ ವ್ಯಕ್ತಿಯು ಚಿತ್ರವನ್ನು ಹೇಗೆ ಅರ್ಥೈಸುತ್ತಾನೆ ಎಂಬುದರ ಮೇಲೆ ಇದು ಅವಲಂಬಿತವಾಗಿದೆ. ನಿಮ್ಮ ಉದ್ದೇಶಗಳು ಸರಿಯಾಗಿರಬೇಕು, ನಿಮ್ಮ ಉದ್ದೇಶಗಳು ಸ್ಪಷ್ಟವಾಗಿದ್ದರೆ, ಎಲ್ಲವೂ ಚೆನ್ನಾಗಿರುತ್ತದೆ. ಸಿನಿಮಾ ಚೆನ್ನಾಗಿದ್ದರೆ ಜನ ಅದನ್ನು ನೋಡಿಯೇ ನೋಡುತ್ತಾರೆ ಎಂದು ಅವರು ಹೇಳಿದರು.

ನೀವು ಕಾಶ್ಮೀರ ಫೈಲ್‌ಗಳ ಬಗ್ಗೆ ಮಾತನಾಡುತ್ತಿದ್ದೀರಿ. ಅದರ ಮೂಲ ಏನು? ಕಳೆದ ಎರಡು-ಮೂರು ದಿನಗಳಿಂದ ನಾವು ಅದನ್ನು ಚರ್ಚಿಸುತ್ತಿದ್ದೇವೆ. ನೀವು ಏನು ಹೇಳುತ್ತೀರಿ, ನೀವು ಏನಾದರೂ ಹೇಳಿ, ನೀವು ಅದನ್ನು ರಾಜಕೀಯಗೊಳಿಸಲು ಬಯಸುತ್ತೀರಿ, ಅದನ್ನು ಕೋಮುವಾದ ಮಾಡಲು ಬಯಸುತ್ತೀರಿ. ಅದು ನಿಮ್ಮ ವಾಕ್ ಮತ್ತು ಅಭಿಪ್ರಾಯ ಸ್ವಾತಂತ್ರ್ಯ, ಆದರೆ ಚಿತ್ರ ಚೆನ್ನಾಗಿರದಿದ್ದರೆ, ಅದು ಕೆಲಸ ಮಾಡುತ್ತಿರಲಿಲ್ಲ, ಅದು ಕೆಲಸ ಮಾಡುವುದಕ್ಕೆ ಬೇರೆ ಯಾವುದೇ ಕಾರಣವಿಲ್ಲ, ನಾವು ಹಲವಾರು ಇತರ ಅರ್ಥಗಳು ಮತ್ತು ಅಲೆಗಳ ಪರಿಣಾಮಗಳನ್ನು ತೆಗೆದುಕೊಳ್ಳಬಹುದು. ಆದರೆ ಈ ಸಿನಿಮಾದ ಹಿಟ್ ಆಗಲು ಅದೊಂದು ಒಳ್ಳೆಯ ಚಿತ್ರವಾಗಿರಬೇಕು ಎಂದು ಅವರು ಹೇಳಿದರು.

ಸಿನಿಮಾ ನೋಡಿಲ್ಲವಾದ್ದರಿಂದ ಈ ಬಗ್ಗೆ ಪ್ರತಿಕ್ರಿಯಿಸಲಾರೆ ಎಂದ ಅವರು, ಇದುವರೆಗೆ ಯಾರೂ ಈ ಚಿತ್ರ ಚೆನ್ನಾಗಿಲ್ಲ ಎಂದು ಹೇಳಿಲ್ಲ ಎಂದು ಹೇಳಿದ್ದಾರೆ. ಅದು ಸಿನಿಮಾದ ಏಕೈಕ ಸತ್ಯ. ಒಂದು ಚಲನಚಿತ್ರವು ವ್ಯವಹಾರದ ದೃಷ್ಟಿಯಿಂದ ಚೆನ್ನಾಗಿ ಕೆಲಸ ಮಾಡಿದರೆ, ಅದು ಉತ್ತಮ ಚಿತ್ರವಾಗಿರಬೇಕು. ಇಲ್ಲದಿದ್ದರೆ ಅದು ಕೆಲಸ ಮಾಡುವುದಿಲ್ಲ ಎಂದು ಹೇಳಿದರು.

ಕಾಶ್ಮೀರ ಫೈಲ್ಸ್ ಸಿನಿಮಾವೂ 1990ರಲ್ಲಿ ಕಾಶ್ಮೀರ ದಂಗೆಯ ಸಮಯದಲ್ಲಿ ಕಾಶ್ಮೀರಿ ಪಂಡಿತರ ನರಮೇಧದ (The Kashmir Genocide) ಕತೆಯನ್ನು ಆಧರಿಸಿದೆ. ಇದೊಂದು ನಿಜ ವಿಷಯ ಆಧರಿತ ಸಿನಿಮಾವಾಗಿದ್ದು, ಸಿನಿಮಾದಲ್ಲಿ ಕಾಶ್ಮೀರಿ ಪಂಡಿತರ ನೋವು, ಸಂಕಟ, ಹೋರಾಟ ಮತ್ತು ಆಘಾತದ ಹೃದಯ ವಿದ್ರಾವಕ ಸ್ಥಿತಿಯನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. ಇದು ಪ್ರಜಾಪ್ರಭುತ್ವ, ಧರ್ಮ, ರಾಜಕೀಯ ಮತ್ತು ಮಾನವೀಯತೆಯ ಬಗ್ಗೆ ಪ್ರಶ್ನೆ ಮಾಡುತ್ತದೆ. ಅಭಿಷೇಕ್ ಬಚ್ಚನ್ ಪ್ರಸ್ತುತ ದಾಸ್ವಿ ಎಂಬ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು