ಬೀದರ್,ಮಾ.12: ಬಸವ ಉತ್ಸವ-2023ರ ಅಂಗವಾಗಿ ಬಸವಕಲ್ಯಾಣದ ಥೇರ ಮೈದಾನದ ಮುಖ್ಯ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಹಲವಾರು ಸಂಸ್ಕೃತಿಕ ಕಾರ್ಯಕ್ರಮಗಳಾದ ವಚನ ಗಾಯನ, ಬಸವಣ್ಣನವರ ವಚನ ನೃತ್ಯ, ಹಾರ್ಮೋನಿಯಂ ಸೋಲೋ, ಬಸವಣ್ಣನವರ ನೃತ್ಯ ಸೇರಿದಂತೆ ವಿವಿಧ ಕಲಾ ತಂಡಗಳಿಂದ ಆಕರ್ಷಕವಾಗಿ ಪ್ರದರ್ಶನ ನೀಡಿದವು.
ಶಿವಾನಂದ ಮಂದೇವಾಲ ಅವರು ವಚನ ಗಾಯನ ನೀಡಿದರು. ನಾಗಭೂಷಣ ಮತ್ತು ತಂಡ ಬೆಂಳೂರು ಇವರ ವೇದಪ್ರೀಯ ಶಿವನಲ್ಲ ನಾದಪ್ರೀಯ ಶಿವನಲ್ಲ, ಭಕ್ತಿಪ್ರೀಯ ನಮ್ಮ ಕೂಡಲ ಸಂಗಮ ದೇವ ಎಂಬ ಗೀತ ಗಾಯನ ಆಕರ್ಷಕವಾಗಿತ್ತು. ರಾಜೇಂದ್ರಸಿಂಗ ಪವಾರ ಮತ್ತು ತಂಡದಿಂದ ಹಾರ್ಮೋನಿಯಮ್ ಸೋಲೋ ನಡೆಸಿಕೊಟ್ಟರು. ರಾಮಲು ಗಾದಗಿ ತಂಡದಿಂದ ಬಸವಣ್ಣನವರು ಕುರಿತು ವಚನ ಗಾಯನ ನೀಡಿದರು. ರೇಖಾ ಅಪ್ಪಾರಾವ ಸೌದಿ ಮತ್ತು ಸಂಗಡಿಗರಿಂದ ಕೂಡಲ ಸಂಗಮ ದೇವ, ಈ ಕನ್ನಡ ಹೆಣ್ಣನ್ನು ಮರಿಬೇಡ, ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ, ಕರುನಾಡ ತಾಯಿ ಸದಾ ಚಿನ್ಮಯಿ, ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಹಾಡುಗಳನ್ನು ಸುಮಧುರವಾಗಿ ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
ಗಾಯಕರಾದ ರಘು ದೀಕ್ಷಿತ ಅವರ ಸೋರುತಿಹದು ಮನೆಯ ಮಾಳಿಗೆ, ಕೊಡಗನ ಕೋಳಿ ನುಂಗಿತ್ತಾ ಸೇರಿದಂತೆ ಇತರೆ ಹಾಡುಗಳಿಗೆ ಬಸವಕಲ್ಯಾಣ ಜನತೆ ತಲೆದೂಗುವಂತೆ ಮಾಡಿದರು. ಹೀಗೆ ಹಲವಾರು ಕಲಾವಿದರು ಸಂಸ್ಕೃತಿಕ ರಸದೌತಣವನ್ನು ಬಸವಕಲ್ಯಾಣದ ಜನತೆಗೆ ಉಣಬಡಿಸಿದರು.
ವಿದ್ಯಾರ್ಥಿಗಳು ಪ್ರಕಟಿಸುವ ಸಂಶೋಧನಾ ಬರಹಗಳು ಉನ್ನತ ವೇತನ ಶ್ರೇಣಿಯ ವೃತ್ತಿ ಅವಕಾಶಗಳನ್ನು ಪಡೆದುಕೊಳ್ಳುವಲ್ಲಿ ಉಪಯುಕ್ತವಾಗುತ್ತವೆ ಎಂದು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್…
ದ್ವಿತೀಯ ಪಿಯುಸಿಯ ಎರಡನೇ ಪರೀಕ್ಷೆ ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷೆಗಳ ಪಲಿತಾಂಶ ನಂತರವೇ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶವನ್ನು…
ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆಯ ದಿನದಂದು ಬೇಜವಾಬ್ದಾರಿತನದಿಂದ ವರ್ತಿಸಿ…
ಬನಹಟ್ಟಿ ಪಟ್ಟಣದಲ್ಲಿ ಕೆರೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಹಲವು ದಿನಗಳಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಇದರಿಂದ ರೈತರು ಭೂಮಿ ಹದ ಮಾಡುವ ಕೆಲಸಕ್ಕೆ ಮುಂದಡಿ ಇಟ್ಟಿದ್ದಾರೆ.
ಇಲ್ಲಿನ ಕವರ್ಧಾದಲ್ಲಿ ಪಿಕಪ್ ವಾಹನ ಪಲ್ಟಿಯಾಗಿ 15 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ತನಿಖೆ ನಡೆಸುತ್ತಿದ್ದಾರೆ.