News Karnataka Kannada
Sunday, May 05 2024
ಮನರಂಜನೆ

ʼಅಜಂತಾ-ಎಲ್ಲೋರಾ ಚಲನಚಿತ್ರೋತ್ಸವʼ: ʻಜಾವೇದ್ ಅಖ್ತರ್ʼಗೆ ಗೌರವ

New Project 2023 12 19t125331.108
Photo Credit : News Kannada

ಮುಂಬೈ: ಅಜಂತಾ-ಎಲ್ಲೋರಾ ಚಲನಚಿತ್ರೋತ್ಸವದಲ್ಲಿ ಹಿರಿಯ ಗೀತರಚನೆಕಾರ-ಚಿತ್ರಕಥೆಗಾರ ಜಾವೇದ್ ಅಖ್ತರ್ ಅವರಿಗೆ ʻಪದ್ಮಪಾಣಿ ಜೀವಮಾನ ಸಾಧನೆ ಪ್ರಶಸ್ತಿʼಯನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿದುಬಂದಿದೆ.

ಹಿಂದಿ ಚಿತ್ರರಂಗದ ಕ್ಲಾಸಿಕ್‌ಗಳಾದ “ಜಂಜೀರ್”, “ದೀವಾರ್”, “ಶೋಲೆ”, “ಡಾನ್”, “ಕಾಲಾ ಪತ್ತರ್” ಮತ್ತು “ಮಿಸ್ಟರ್ ಇಂಡಿಯಾ” ಗಳ ಸಹ-ಲೇಖಕರಾದ ಅಖ್ತರ್ ಅವರನ್ನು ಭಾರತೀಯ ಚಲನಚಿತ್ರೋದ್ಯಮಕ್ಕೆ ನೀಡಿದ ಕೊಡುಗೆಗಾಗಿ ಗೌರವಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಜನವರಿ 3, 2024 ರಂದು ಛತ್ರಪತಿ ಸಂಭಾಜಿನಗರದ ಎಂಜಿಎಂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ರುಕ್ಮಿಣಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಅಜಂತಾ-ಎಲ್ಲೋರಾ ಚಲನಚಿತ್ರೋತ್ಸವದ ಆಯೋಜನಾ ಸಮಿತಿಯ ಅಧ್ಯಕ್ಷ ನಂದಕಿಶೋರ್ ಕಗ್ಲಿವಾಲ್ ಮತ್ತು ಮುಖ್ಯ ಮಾರ್ಗದರ್ಶಕ ಅಂಕುಶರಾವ್ ಕದಂ ಈ ಘೋಷಣೆ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು