ಕೋಲಾರ: ನಟ, ನಿರ್ದೇಶಕ, ಕೊರಿಯೋಗ್ರಾಫರ್ ಪ್ರಭುದೇವ ಅವರು ಆಸ್ತಿ ಖರೀದಿ ಸಲುವಾಗಿ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಉಪನೋಂದಣಾಧಿಕಾರಿ ಕಚೇರಿಗೆ ಆಗಮಿಸಿ ಸಹಿ ಮಾಡಿ, ಫೋಟೋ ಕೊಟ್ಟು ತೆರಳಿದ್ದಾರೆ.
ತಾಲ್ಲೂಕು ಕಚೇರಿ ಎದುರು ಕಾರ್ನಲ್ಲಿ ಇಳಿದ ಪ್ರಭುದೇವ ಮಾಸ್ಕ್ ಹಾಗೂ ಕ್ಯಾಪ್ ಧರಿಸಿ ಬಂದು ಅಚ್ಚರಿ ಮೂಡಿಸಿದ್ದರು.
ಇನ್ನೂ ಪ್ರಭುದೇವ ಬರೋದರ ಕುರಿತು ಮೊದಲೇ ಅಧಿಕಾರಿಗಳಿಗೆ ಗೌಪ್ಯತೆ ಕಾಪಾಡಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆದರೆ ನಟ ಬರೋದನ್ನು ಕಾದು ಕುಳಿತಿದ್ದ ಕೆಲ ಅಭಿಮಾನಿಗಳು ಅವರ ಫೋಟೋ ತೆಗೆದುಕೊಂಡು ಖುಷಿಪಟ್ಟಿದ್ದಾರೆ.
ಕರ್ನಾಟಕದವರೇ ಆದ ಪ್ರಭುದೇವ ಅವರು ಹೆಚ್ಚು ಫೇಮಸ್ ಆಗಿದ್ದು ತಮಿಳು ಚಿತ್ರರಂಗದಲ್ಲಿ. ನೃತ್ಯ ನಿರ್ದೇಶನದ ಜೊತೆಗೆ ಹೀರೋ ಆಗಿಯೋ ಅವರು ಬೇಡಿಕೆ ಸೃಷ್ಟಿಸಿಕೊಂಡರು. ನಿರ್ದೇಶಕನಾಗಿ ಬಾಲಿವುಡ್ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.