ಒಬ್ಬ ನಟನಿಗೆ ಪಾತ್ರ ಯಾವುದಾದರೇನು, ಅದಕ್ಕೆ ಜೀವ ತುಂಬಿಸುವಂತೆ ನಡೆಸುವುದು ಅತಿ ಅಗತ್ಯ. ಚಿಕ್ಕ ಪಾತ್ರವನ್ನು ತನ್ನ ಅಭಿನಯ ಕೌಶಲ್ಯಗಳಿಂದ ಮೆರೆಯುವಂತೆ ಮಾಡುವ ಸಾಮರ್ಥ್ಯ ಓರ್ವ ಕಲಾವಿದನಲ್ಲಿ ಮಾತ್ರ ಇರುತ್ತದೆ. ಇಂತಹದೇ ಧ್ಯೇಯವನ್ನು ಇರಿಸಿಕೊಂಡಿರುವ ವೈಜನಾಥ್ ಬಿರಾದಾರ್, “ಪಾತ್ರ ಯಾವುದಾದರೇನು, ಅದಕ್ಕೆ ಜೀವ ತುಂಬಿ ನಟಿಸುವುದಷ್ಟೇ ನನ್ನ ಕೆಲಸ” ಎನ್ನುವುದು ಅವರ ಮಾತು.
ಕನ್ನಡಿಗರ ಮನದಲ್ಲಿ ಹಾಸ್ಯನಟರಾಗಿ ಬೇರೂರಿರುವ ನಂಬಿರುವ ವೈಜನಾಥ್ ಬಿರಾದರ್ ಅವರು ಗಿರೀಶ್ ಕಾಸರವಳ್ಳಿ ನಿರ್ದೇಶನದ ಕನಸೆಂಬ ಕುದುರೆಯನೇರಿ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದು, ಅದಕ್ಕಾಗಿ ಸ್ಪೇನ್ನ ಮ್ಯಾಡ್ರಿಡ್ನಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಎಂಬ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅವರ ಅತ್ಯುತ್ತಮ ನಟನೆಗೆ ಕನ್ನಡಿಯಂತೆ ಹಲವಾರು ಪಾತ್ರಗಳು ಮೂಡಿಬಂದಿದೆ. 350ಕ್ಕೂ ಹೆಚ್ಚು ಚಿತ್ರಗಳ ಮೂಲಕ ಭಿಕ್ಷುಕ, ಕುಡುಕ, ಬಡವ ಮೊದಲಾದ ಪಾತ್ರಗಳಿಂದ ರಸಿಕರನ್ನು ರಂಜಿಸುವ ಕನ್ನಡಿಗರ ನೆಚ್ಚಿನ ಹಾಸ್ಯ ಕಲಾವಿದರಿಗಿರುವ ಬಿರಾದರ್ ಗೆ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿರುವ ವಿಚಾರ ತಿಳಿದು ಬಾಲಿವುಡ್ ನ ಖ್ಯಾತ ನಟ ಅಮಿತಾಭ್ ಬಚ್ಚನ್ ಇತ್ತೀಚೆಗಷ್ಟೆ ಕರೆ ಮಾಡಿ, ಶುಭಾಶಯ ತಿಳಿಸಿದ್ದಾರೆ.