News Karnataka Kannada
Monday, May 20 2024
ಮನರಂಜನೆ

ವೈಜನಾಥ್ ಬಿರಾದಾರ್ ನಟನೆಗೆ ಮೆಚ್ಚಿ ಪ್ರಶಂಸಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

Photo Credit :

ವೈಜನಾಥ್ ಬಿರಾದಾರ್ ನಟನೆಗೆ ಮೆಚ್ಚಿ ಪ್ರಶಂಸಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

ಒಬ್ಬ ನಟನಿಗೆ ಪಾತ್ರ ಯಾವುದಾದರೇನು, ಅದಕ್ಕೆ ಜೀವ ತುಂಬಿಸುವಂತೆ ನಡೆಸುವುದು ಅತಿ ಅಗತ್ಯ. ಚಿಕ್ಕ ಪಾತ್ರವನ್ನು ತನ್ನ ಅಭಿನಯ ಕೌಶಲ್ಯಗಳಿಂದ ಮೆರೆಯುವಂತೆ ಮಾಡುವ ಸಾಮರ್ಥ್ಯ ಓರ್ವ ಕಲಾವಿದನಲ್ಲಿ ಮಾತ್ರ ಇರುತ್ತದೆ. ಇಂತಹದೇ ಧ್ಯೇಯವನ್ನು ಇರಿಸಿಕೊಂಡಿರುವ ವೈಜನಾಥ್ ಬಿರಾದಾರ್, “ಪಾತ್ರ ಯಾವುದಾದರೇನು, ಅದಕ್ಕೆ ಜೀವ ತುಂಬಿ ನಟಿಸುವುದಷ್ಟೇ ನನ್ನ ಕೆಲಸ” ಎನ್ನುವುದು ಅವರ ಮಾತು.

ಕನ್ನಡಿಗರ ಮನದಲ್ಲಿ ಹಾಸ್ಯನಟರಾಗಿ ಬೇರೂರಿರುವ ನಂಬಿರುವ ವೈಜನಾಥ್​ ಬಿರಾದರ್​ ಅವರು ಗಿರೀಶ್​​ ಕಾಸರವಳ್ಳಿ ನಿರ್ದೇಶನದ ಕನಸೆಂಬ ಕುದುರೆಯನೇರಿ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದು, ಅದಕ್ಕಾಗಿ ಸ್ಪೇನ್​ನ ಮ್ಯಾಡ್ರಿಡ್​ನಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಎಂಬ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅವರ ಅತ್ಯುತ್ತಮ ನಟನೆಗೆ ಕನ್ನಡಿಯಂತೆ ಹಲವಾರು ಪಾತ್ರಗಳು ಮೂಡಿಬಂದಿದೆ. 350ಕ್ಕೂ ಹೆಚ್ಚು ಚಿತ್ರಗಳ ಮೂಲಕ ಭಿಕ್ಷುಕ, ಕುಡುಕ, ಬಡವ ಮೊದಲಾದ ಪಾತ್ರಗಳಿಂದ ರಸಿಕರನ್ನು ರಂಜಿಸುವ ಕನ್ನಡಿಗರ ನೆಚ್ಚಿನ ಹಾಸ್ಯ ಕಲಾವಿದರಿಗಿರುವ ಬಿರಾದರ್ ಗೆ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿರುವ ವಿಚಾರ ತಿಳಿದು ಬಾಲಿವುಡ್ ನ ಖ್ಯಾತ ನಟ ಅಮಿತಾಭ್​ ಬಚ್ಚನ್​ ಇತ್ತೀಚೆಗಷ್ಟೆ ಕರೆ ಮಾಡಿ, ಶುಭಾಶಯ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು