ನವದೆಹಲಿ: ಈಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನ ಕ್ಯೂಟ್ ಜೋಡಿ ದೀಪಿಕಾ- ರಣವೀರ್ ಅವರು ಶುಕ್ರವಾರ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ದೀಪಿಕಾ ಅವರು ದೈವ ಭಕ್ತೆಯಾಗಿದ್ದು ತಮ್ಮ ಯಾವುದೇ ಚಿತ್ರ ಬಿಡುಗಡೆ ಅಥವಾ ಚಿತ್ರೀಕರಣದ ಸಂದರ್ಭದಲ್ಲಿ ದೇವರ ಮೊರೆ ಹೋಗುತ್ತಿದ್ದರು. ಈ ನಿಟ್ಟಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಿನ್ನೆಲೆ ನವ ವಧು ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.
ಇಟಲಿಯಲ್ಲಿ ಅದ್ಧೂರಿ ವಿವಾಹ ನಡೆದ ಬಳಿಕ ದೀಪ್ ವೀರ್ ಅವರ ಮೊದಲ ಆರತಕ್ಷತೆ ಬೆಂಗಳೂರಿನಲ್ಲಿ ನಂತರ ಮುಂಬೈನಲ್ಲಿ ನಡೆಯಿತು. ಡಿಸೆಂಬರ್ 1ರಂದು ಮುಂಬೈನಲ್ಲಿ ಇವರ ಕೊನೆಯ ಆರತಕ್ಷತೆ ನಡೆಯಲಿದೆ.
ಇಟಲಿಯಲ್ಲಿ ದೀಪ್ ವೀರ್ ಅದ್ಧೂರಿ ವಿವಾಹವು ನವೆಂಬರ್ 14ರಂದು ಕೊಂಕಣಿ ಸಂಪ್ರದಾಯದಂತೆ ಹಾಗೂ 15ರಂದು ಸಿದ್ಧಿ ಸಂಪ್ರದಾಯದಂತೆ ನಡೆದಿದೆ. ಈ ಸಂಭ್ರಮದಲ್ಲಿ ದೀಪ್ ವೀರ್ ಹತ್ತಿರ ಸಂಬಂಧಿಗಳಿಗೆ ಮಾತ್ರ ಆಹ್ವಾನವನ್ನು ನೀಡಲಾಗಿತ್ತು.