ಪವರ್ ಸ್ಟಾರ್ ಅಪ್ಪು ಅಭಿನಯದ “ಪವರ್” ಚಿತ್ರದಲ್ಲಿ ಖಳನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗಿ, “ಜೈ ತುಳುನಾಡ್” ಚಿತ್ರದ ಮೂಲಕ ತುಳು ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡಿ ತನ್ನ ಸ್ಟೈಲಿಶ್ ಲುಕ್ ಮತ್ತು ಮಾಸ್ ಮ್ಯಾನರಿಸಂನಿಂದ ನೋಡುಗನ ಎದೆಗಯೊಳಗೆ ಕಿಚ್ಚು ಹೊತ್ತಿಸಿದ ಸಿಂಗಂ ಅವಿನಾಶ್ ಶೆಟ್ಟಿ “ನ್ಯೂಸ್ ಕನ್ನಡ”ದ ಮಾತಿನ ಬೋನಿನೊಳಗೆ ಬಂಧಿಯಾದ ಕ್ಷಣ.
1.ಜೈ ತುಳುನಾಡ್ ಚಿತ್ರದಲ್ಲಿ ಸಿಂಗಂ ಆಗಿ ಘರ್ಜಿಸಿದ ಮೇಲೆ ಎಲ್ಲಿ ಹೋಗಿದ್ರಿ?
ಜೈ ತುಳುನಾಡ್ ಸಿನೆಮಾದ ಸಿಂಗಂ ಪಾತ್ರಕ್ಕೆ ನಾನು ಎಲ್ಲಾ ರೀತಿಯ ಪೂರ್ವ ತಯಾರಿಗಳನ್ನು ಮಾಡಿಕೊಂಡಿದ್ದೆ. ಅಂದುಕೊಂಡ ಪ್ರಕಾರ ಸಿನೆಮಾ ಸೂಪರ್ ಹಿಟ್ ಆಗ್ಬೇಕಿತ್ತು ಆದ್ರೆ ಡೈರೆಕ್ಟರ್ ಎಡವಿದ್ರಿಂದ ಸಿನೆಮಾ ಆಡಿಯನ್ಸ್ ಗೆ ರೀಚ್ ಆಗಿಲ್ಲ. ಆಮೇಲೆ ಸ್ಯಾಂಡಲ್ ವುಡ್ ನಿಂದ ಒಂದೆರಡು ಆಫರ್ ಗಳು ಬಂದಿದ್ದವು ಹಾಗಾಗಿ ಅಲ್ಲಿ ಬ್ಯುಸಿಯಾಗೋದೆ.
2.ನೀವು ನಟಿಸಿರುವ “ಬದ್ಮಾಷ್” ಸಿನೆಮಾದ ಬಗ್ಗೆ ಹೇಳಿ?
ಬದ್ಮಾಷ್ ಸಿನೆಮಾದಲ್ಲಿ ನನ್ನದು ಸೂರ್ಯ ಭಾಯಿ ಅನ್ನುವ ನೆಗೆಟಿವ್ ಕ್ಯಾರೆಕ್ಟರ್. ಸ್ಪೆಷಲೀ ತುಂಬಾನೇ ಖುಶಿಕೊಟ್ಟ ಪಾತ್ರ. ಬದ್ಮಾಷ್ ಟೀಂ ಟೆಕ್ನಿಕಲಿ ತುಂಬಾ ಪವರ್ ಫುಲ್ ಆಗಿರೋದ್ರಿಂದ ಸಿನೆಮಾ ತುಂಬಾ ಅದ್ಭುತವಾಗಿ ಬಂದಿದೆ. ಸಿನೆಮಾದ ಬಗ್ಗೆ ಈಗಾಗಲೇ ತುಂಬಾ ಎಕ್ಸ್ ಪೆಕ್ಟೇಷನ್ಸ್ ಕ್ರಿಯೇಟ್ ಆಗಿದೆ. ಅಕ್ಟೋಬರ್ ನಲ್ಲಿ ರಿಲೀಸ್ ಆಗ್ತಿದೆ.
3.ಮತ್ತೆ ತುಳು ಸಿನೆಮಾಕ್ಕೆ ಯಾವಾಗ ಬರ್ತೀರಾ?
ಈಗಾಗಲೇ ಒಂದೆರಡು ಆಫರ್ಸ್ ಗಳು ತುಳುವಿನಿಂದ ಬಂದಿದ್ದವು ಆದರೆ ಕಥೆ ಇಷ್ಟ ಆಗದ ಕಾರಣ ರಿಜೆಕ್ಟ್ ಮಾಡಿಬಿಟ್ಟೆ. ಒಂದೊಳ್ಳೆ ಟೀಂ ಗಾಗಿ ಕಾಯ್ತಾ ಇದ್ದೇನೆ. ಮತ್ತೊಂದು ಹೊಸ ಸಿನೆಮಾದ ಮಾತುಕತೆ ನಡೀತಿದೆ. ಎಲ್ಲಾ ಅಂದುಕೊಂಡಂತೆ ಆದರೆ ವರ್ಷದ ಕೊನೆಗೆ ಹೊಸ ತುಳು ಚಿತ್ರ ಸೆಟ್ಟೇರಲೂಬಹುದು.
4.ಹೊಸ ಆಫರ್ಸ್ ಏನಾದರೂ…
ತೆಲುಗು ಸಿನೆಮಾವೊಂದು ಶುರುವಾಗ್ಬೇಕಿತ್ತು. ಇದರಲ್ಲಿ ಸ್ಟಾರ್ ಹೀರೋ ಜೊತೆ ನನ್ನದು ಸೆಕೆಂಡ್ ಲೀಡ್ ಕ್ಯಾರೆಕ್ಟರ್. ಕಾರಣಾಂತರಗಳಿಂದ ಡಿಲೇ ಆಗಿದೆ. ಜೊತೆಗೆ ಕನ್ನಡ ಮತ್ತು ತುಳು ಸಿನೆಮಾಗಳ ಮಾತುಕತೆ ನಡೀತಿದೆ.
5.ಅವಿನಾಶ್ ಶೆಟ್ಟಿಯವರಿಗೆ ಎಂತಹ ಪಾತ್ರಗಳು ಅಂದ್ರೆ ಇಷ್ಟ?
ಯಾವುದೇ ಪಾತ್ರವಾದರೂ ಸೈ ಅದಕ್ಕೆ ಜೀವ ತುಂಬೋದು ಕಲಾವಿದನಾದ ನನ್ನ ಕೆಲಸ. ಸ್ಪೆಷಲೀ ಹೇಳ್ಬೇಕಂದ್ರೆ ನಂಗೆ ಮಾಸ್ ಫೀಲ್ ಇರುವ ಪಾತ್ರಗಳು ಇಷ್ಟ ಅದ್ರಲ್ಲೂ “ಉಗ್ರಂ”, “ರಥಾವರ” ಸಿನೆಮಾದಲ್ಲಿ ಶ್ರೀ ಮುರಳಿಯವರು ಮಾಡಿದ ಪಾತ್ರಗಳು ಸಖತ್ ಇಷ್ಟ.
6.ಸಿನೆಮಾರಂಗದಲ್ಲಿ ನಿಮಗೆ ಸ್ಪೂರ್ತಿ…
ಹೃತಿಕ್ ರೋಷನ್ ಅವರಿಂದ ತುಂಬಾನೇ inspire ಆಗಿದ್ದೆ. ಕನ್ನಡದ ವಿಷಯಕ್ಕೆ ಬಂದರೆ ಅಪ್ಪು ಸರ್ ತುಂಬಾ ಇಷ್ಟ ಅವರಿಂದ ಕಲಿಯುವಂಥದ್ದು ತುಂಬಾನೇ ಇದೆ. ಜೊತೆಗೆ ಯಶ್ ಕೂಡ ತುಂಬಾ ಫೇವರಿಟ್.