ಭಾವನಾತ್ಮಕ ಮಾತ್ರವಲ್ಲದೆ, ಹಾಸ್ಯ, ಗಂಭೀರತೆಯ ಪಾತ್ರಗಳಲ್ಲಿ ಕಾಣಿಸಿಕೊಂಡು ಚಿತ್ರರಸಿಕರ ಮನಸೆಳೆದಿರುವ ಹಿರಿಯ ನಟ ದತ್ತಾತ್ರಯ ಪ್ರೇಕ್ಷಕರ ಪ್ರೀತಿಯ ದತ್ತಣ್ಣ ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್, ಹಾರರ್ ಕಥಾವಸ್ತು ಹೊಂದಿದ ಅಜ್ಜ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟೈಟಲ್ ಅಜ್ಜ ಎಂದಾದ ಮೇಲೆ ಇದರಲ್ಲಿ ಪ್ರಮುಖ ಪಾತ್ರದಲ್ಲಿ ದತ್ತಣ್ಣ ಇರುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಬೆಂಗಳೂರು ಸೇರಿದಂತೆ ಹಲವೆಡೆ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇದೀಗ ಕೊಡಗಿನಲ್ಲಿ ತಳವೂರಿದ್ದು ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದೆ. ಮಡಿಕೇರಿ ಸೇರಿದಂತೆ ನಾಲ್ಕುನಾಡು ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದ್ದು, ಮಡಿಕೇರಿಯ ವಕೀಲ ನಂಜಪ್ಪ ಹಾಗೂ ಅಶ್ವಿನಿ ಜ್ಯುವೆಲ್ಲರಿಯ ಸುರೇಶ್ ಅವರ ಮನೆಯಲ್ಲೂ ಚಿತ್ರೀಕರಣ ನಡೆಸಲಾಗಿದೆ. ಕೊಡಗಿನ ಕೆಲವರಿಗೆ ಈ ಸಿನಿಮಾದಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ನೀಡಿರುವುದು ವಿಶೇಷವಾಗಿದೆ.
ತಾಳತ್ಮನೆಯ ಲತೇಶ್ ಪೂಜಾರಿ ಖಳನಾಯಕನ ಪಾತ್ರ, ಪತ್ರಕರ್ತರಾದ ಕುಡೆಕಲ್ ಸಂತೋಷ್ಗೆ ಕಂಟ್ರಾಕ್ಟರ್, ಚಂಡಿರ ಮನೋಜ್ ಸಹ ಕಂಟ್ರಾಕ್ಟರ್, ಚೆರಿಯಮನೆ ಗಾಯತ್ರಿ ವಿದ್ಯಾಥರ್ಿ, ನರ್ಸರಿ ವಸಂತ ವಕೀಲ ಹೀಗೆ ವಿವಿಧ ಪಾತ್ರಗಳನ್ನು ನೀಡಲಾಗಿದೆ. ಜೂ.24ರಂದು ಚಿತ್ರೀಕರಣ ಆರಂಭವಾಗಿದ್ದು, ಜೂ.29ರವರೆಗೆ ಚಿತ್ರೀಕರಣ ಮಡಿಕೇರಿಯಲ್ಲಿ ನಡೆಯಲಿದೆ ಎನ್ನಲಾಗಿದೆ. ನಿರ್ವಹಿಸುತ್ತಿದ್ದಾರೆ. ಮೈಸೂರಿನ ವಕೀಲ ಕೆ.ಪಿ. ಚಿದಾನಂದ ನಿಮರ್ಾಪಕರಾಗಿದ್ದು ಮಹದೇಶ್ವರ ಆರ್ಟ್ಸ್ ಕಂಬೈನ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ನಿರ್ಮಾಪಕರ ಪುತ್ರಿ ಪ್ರಥ್ವಿಶ್ರೀ ಕೂಡ ನಟಿಸುತ್ತಿದ್ದು, ಅಜ್ಜ ದತ್ತಣ್ಣ ಅವರಿಗೆ ಮೊಮ್ಮಗಳಾಗಿದ್ದಾಳೆ. ದತ್ತಣ್ಣ ಮತ್ತು ಈಕೆಯ ಪಾತ್ರದ ಸುತ್ತಲಿನ ಸನ್ನಿವೇಶಗಳ ಚಿತ್ರೀಕರಣ ಮಡಿಕೇರಿಯಲ್ಲಿ ನಡೆಯುತ್ತಿದ್ದು, ಪಾಳು ಬಂಗಲೆಯೊಳಗಿನ ನಿಗೂಢ ಸನ್ನಿವೇಶವನ್ನು ಚಿತ್ರೀಕರಿಸಲಾಗಿದೆ.
ಹಿರಿಯ ನಿರ್ದೇಶಕ ವೇಮಗಲ್ ಜಗನ್ನಾಥ್ರಾವ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಕ್ಯಾಮರಾಮನ್ ರಾಜು ಸಿರಾಳ್ಕೊಪ್ಪ ಅವರು ಜೀವ ತುಂಬುತ್ತಿದ್ದಾರೆ. ತಾರಾಗಣದಲ್ಲಿ ದೀಪಕ್, ಪ್ರವೀಣ್, ನಾಯಕಿಯರಾದ ಮಾಧುರಿ, ಅಶ್ವಿನಿ ಸೇರಿದಂತೆ ಹಲವರು ಕಾಣಿಸಿಕೊಳ್ಳುತ್ತಿದ್ದಾರೆ.