ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶೂಟಿಂಗ್ ಇಲ್ಲದ ಸಮಯದಲ್ಲಿ ಗೆಳೆಯರ ಜೊತೆ ಲಾಂಗ್ ರೈಡ್ ಹೋಗುವುದು ಎಲ್ಲರಿಗೂ ಗೊತ್ತೇ ಇರುವ ವಿಷಯ. ಈ ಮಧ್ಯೆ ದರ್ಶನ್ ಮತ್ತು ಅವರ ಬೆಳಕ ದಾರಿಯಲ್ಲಿ ಗಿಡಗಳನ್ನು ನೆಡುವ ಮೂಲಕ “ಗ್ರೀನ್ ಇಂಡಿಯಾ ಚಾಲೆಂಜ್’ನಲ್ಲಿ ಭಾಗವಹಿಸಿದೆ.
ಸದ್ಯ ದರ್ಶನ್ “ಗ್ರೀನ್ ಇಂಡಿಯಾ ಚಾಲೆಂಜ್’ ಪೂರ್ಣಗೊಳಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದು, ದರ್ಶನ್ ಪರಿಸರ ಕಾಳಜಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
“ಗ್ರೀನ್ ಇಂಡಿಯಾ’ ಚಾಲೆಂಜ್ನಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ನಟರಾದ ಚಿಕ್ಕಣ್ಣ, ಪ್ರಜ್ವಲ್ ದೇವರಾಜ್, ಯಶಸ್ ಸೂರ್ಯ, ಪನ್ನಗಾಭರಣ ಮೊದಲಾದವರು ದರ್ಶನ್ ಅವರಿಗೆ ಸಾಥ್ ನೀಡಿದ್ದಾರೆ.