News Karnataka Kannada
Thursday, May 09 2024
ಮನರಂಜನೆ

ಕ್ಯಾನ್ಸರ್‌ನಿಂದ ಬಳಲುತ್ತಿರುವ ಗಾಯಕನ ಆರ್ಥಿಕ ಸಹಾಯಕ್ಕೆ ಮುಂದಾದ ನಟ ಜಗ್ಗೇಶ್‌

Photo Credit :

ಕ್ಯಾನ್ಸರ್‌ನಿಂದ ಬಳಲುತ್ತಿರುವ ಗಾಯಕನ ಆರ್ಥಿಕ ಸಹಾಯಕ್ಕೆ ಮುಂದಾದ ನಟ ಜಗ್ಗೇಶ್‌

ಬೆಂಗಳೂರು: ನಟ ಜಗ್ಗೇಶ್‌ ಕ್ಯಾನ್ಸರ್‌ನಿಂದ ಬಳಲುತ್ತಿರುವ ಕನ್ನಡದ ಗಾಯಕ, ಸಂಗೀತ ನಿರ್ದೇಶಕ ಎಲ್.ಎನ್.ಶಾಸ್ತ್ರಿ ಅವರ ಆರ್ಥಿಕ ಸಹಾಯಕ್ಕೆ ನೆರವಾಗಿದ್ದಾರೆ.

‘ನಾನು ಅಭಿನಯಿಸಿರುವ ಚಿತ್ರಗಳಿಗೆ ಈ ಮಹನೀಯರು ಗೀತೆಗಳನ್ನು ಹಾಡಿದ್ದಾರೆ. ಅವರ ಅನಾರೋಗ್ಯದ ಸುದ್ದಿ ಕೇಳಿ ದುಃಖವಾಯಿತು. ದೇವರಂತಹ ಮನುಷ್ಯನಿಗೆ ಈ ಪರೀಕ್ಷೆ ಏಕೆ?, ರಾಯರ ದಯೆ ಇವರ ಮೇಲಿರಲಿ. ನಾನು ಅವರಿಗೆ ನೆರವಾಗುವೆ. ಈ ವಿಷಯವಾಗಿ ಸಂಬಂಧಪಟ್ಟವರ ಜತೆ ಮಾತನಾಡಿದ್ದೇನೆ’ ಎಂದು ಈ ಕುರಿತು ನಟ ಜಗ್ಗೇಶ್‌ ಪ್ರತಿಕ್ರಿಯಿಸಿದ್ದಾರೆ.

ಅಜಗಜಾಂತರ’ ಸಿನಿಮಾ ಮೂಲಕ 1996ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಎಲ್.ಎನ್.ಶಾಸ್ತ್ರಿ ಅವರು ಈ ವರೆಗೆ ಮೂರು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದು, ಸ್ಟಾರ್ ನಟರ ಹಲವಾರು ಸೂಪರ್ ಹಿಟ್ ಹಾಡುಗಳಿಗೆ ದನಿಯಾಗಿದ್ದು, ಇದೀಗ ಶಾಸ್ತ್ರಿ ಅವರು ಆಸ್ಪತ್ರೆಗೆ ದಾಖಲಾಗಿದ್ದು, ನಡೆದಾಡಲೂ ಸಾಧ್ಯವಾಗದೆ ಹಾಸಿಗೆ ಹಿಡಿದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು