ಬೆಂಗಳೂರು: ನಟ ಜಗ್ಗೇಶ್ ಕ್ಯಾನ್ಸರ್ನಿಂದ ಬಳಲುತ್ತಿರುವ ಕನ್ನಡದ ಗಾಯಕ, ಸಂಗೀತ ನಿರ್ದೇಶಕ ಎಲ್.ಎನ್.ಶಾಸ್ತ್ರಿ ಅವರ ಆರ್ಥಿಕ ಸಹಾಯಕ್ಕೆ ನೆರವಾಗಿದ್ದಾರೆ.
‘ನಾನು ಅಭಿನಯಿಸಿರುವ ಚಿತ್ರಗಳಿಗೆ ಈ ಮಹನೀಯರು ಗೀತೆಗಳನ್ನು ಹಾಡಿದ್ದಾರೆ. ಅವರ ಅನಾರೋಗ್ಯದ ಸುದ್ದಿ ಕೇಳಿ ದುಃಖವಾಯಿತು. ದೇವರಂತಹ ಮನುಷ್ಯನಿಗೆ ಈ ಪರೀಕ್ಷೆ ಏಕೆ?, ರಾಯರ ದಯೆ ಇವರ ಮೇಲಿರಲಿ. ನಾನು ಅವರಿಗೆ ನೆರವಾಗುವೆ. ಈ ವಿಷಯವಾಗಿ ಸಂಬಂಧಪಟ್ಟವರ ಜತೆ ಮಾತನಾಡಿದ್ದೇನೆ’ ಎಂದು ಈ ಕುರಿತು ನಟ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ.
ಅಜಗಜಾಂತರ’ ಸಿನಿಮಾ ಮೂಲಕ 1996ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಎಲ್.ಎನ್.ಶಾಸ್ತ್ರಿ ಅವರು ಈ ವರೆಗೆ ಮೂರು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದು, ಸ್ಟಾರ್ ನಟರ ಹಲವಾರು ಸೂಪರ್ ಹಿಟ್ ಹಾಡುಗಳಿಗೆ ದನಿಯಾಗಿದ್ದು, ಇದೀಗ ಶಾಸ್ತ್ರಿ ಅವರು ಆಸ್ಪತ್ರೆಗೆ ದಾಖಲಾಗಿದ್ದು, ನಡೆದಾಡಲೂ ಸಾಧ್ಯವಾಗದೆ ಹಾಸಿಗೆ ಹಿಡಿದಿದ್ದಾರೆ.