ಬೆಂಗಳೂರು: ಕನ್ನಡ ಚಲನಚಿತ್ರ ನಿರ್ದೇಶಕ ಹಾಗೂ ನಟ ಬೂದಾಳ್ ಕೃಷ್ಣಮೂರ್ತಿ ಅನಾರೋಗ್ಯದ ಕಾರಣದಿಂದ ಶನಿವಾರ ಬೆಳಗ್ಗೆ ನಿಧನರಾದರು.
1949 ರಲ್ಲಿ ಚಿತ್ರದುರ್ಗದಲ್ಲಿ ಜನಿಸಿದ ಬೂದಾಳ್ ಕೃಷ್ಣಮೂರ್ತಿ, ಬೂತಯ್ಯನ ಮಗ ಅಯ್ಯಾ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು. ಆನಂತರ, ‘ಎರಡು ದಂಡೆಯ ಮೇಲೆ’, ‘ಒಲವಿನ ಕಾಣಿಕೆ’, ‘ಸೀತಾಂಜನೇಯ’, ‘ಶುಭಲಗ್ನ’, ‘ಲಂಚ ಸಾಮ್ರಾಜ್ಯ’ ಸೇರಿದಂತೆ ಮುಂತಾದ ಚಿತ್ರಗಳನ್ನು ಬೂದಾಳ್ ನಿರ್ದೇಶಿಸಿದ್ದರು.
ಇಷ್ಟ ಅಲ್ಲದೆ ‘ಪ್ರೊಫೆಸರ್’, ‘ಶ್ರೀಗಂಧ’, ‘ಅರಿಶಿನ ಕುಂಕುಮ’, ‘ಬಲ್ ನನ್ಮಗ’, ‘ಪ್ರಜಾಶಕ್ತಿ’, ‘ನಿರ್ಣಯ’, ‘ಆರ್ಯಭಟ’ ಮುಂತಾದ ಚಿತ್ರಗಳಲ್ಲಿ ಬೂದಾಳ್ ಕೃಷ್ಣಮೂರ್ತಿ ನಟಿಸಿದ್ದರು.
72 ವರ್ಷದ ಬೂದಾಳ್ ಕೃಷ್ಣಮೂರ್ತಿ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ವರದಿಗಳು ತಿಳಿಸುತ್ತವೆ.