News Karnataka Kannada
Thursday, May 16 2024
ಮನರಂಜನೆ

ಎಸ್ಪಿಬಿ ಎಂದಿಗೂ ಮರೆಯಲಾಗದ ಗಾಯಕ: ನಾಗತಿಹಳ್ಳಿ

Photo Credit :

ಎಸ್ಪಿಬಿ ಎಂದಿಗೂ ಮರೆಯಲಾಗದ ಗಾಯಕ: ನಾಗತಿಹಳ್ಳಿ

ಮಂಡ್ಯ: ಗಾನಮಾಂತ್ರಿಕ ಎಸ್‍ಪಿಬಿ ಅವರ ಮಾತೃಭಾಷೆ ಕನ್ನಡ ಅಲ್ಲದಿದ್ದರೂ ಸಹ ಕನ್ನಡಭಾಷೆ ಬಗ್ಗೆ ಅಪಾರ ಗೌರವವಿಟ್ಟುಕೊಂಡಿದ್ದರು. ಅವರನ್ನು ಎಂದಿಗೂ ಮರೆಯಲಾಗದು ಎಂದು ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.

ನಗರದ ಕರ್ನಾಟಕ ಸಂಘದ ಕುವೆಂಪು ಬಯಲು ರಂಗ ಮಂದಿರದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ, ಕರ್ನಾಟಕ ಸಂಘ, ಮಂಡ್ಯ ಮತ್ತು ಕರಾವಳಿ ಸಾಂಸ್ಕೃತಿಕ ಒಕ್ಕೂಟ ಆಯೋಜಿಸಿದ್ದ ಡಾ.ಎಸ್.ಪಿ.ಬಿ. ನೆನಪು-ಗೀತಾರ್ಪಣೆ ಕಾರ್ಯಕ್ರಮದಲ್ಲಿ ಗಾಯಕ, ನಿವೃತ್ತ ಅಬಕಾರಿ ಅಧಿಕಾರಿ ವೆಂಕಟೇಶ್‍ಮೂರ್ತಿ ಶಿರೂರ ಅವರನ್ನು ಅಭಿನಂದಿಸಿ ಮಾತನಾಡಿದರು.

ಮಾತೃ ಭಾಷೆ ಇವರದ್ದಾಗದಿದ್ದರೂ ಸಹ ಕನ್ನಡದ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದ ಖ್ಯಾತ ಗಾಯಕ ಎಸ್.ಪಿ.ಬಿ. ಅವರು ಇಂದಿಗೂ ಪ್ರಸ್ತುತವಾಗಿ ನಿಲ್ಲುತ್ತಾರೆ ಎಂದು ನುಡಿದರು.

ಕೊರೋನಾ ಎಲ್ಲರ ಬದುಕು ಮತ್ತು ಆಸೆಯನ್ನು ಕಿತ್ತುಕೊಂಡಿದೆ. ಪ್ರಸ್ತುತದಲ್ಲಿ ಕೊಂಚ ಕೊಂಚ ಕಡಿಮೆಯಾಗುತ್ತಿದೆ. ಆದರೂ ಇದು ದೇಶಕ್ಕೆ ಅಪ್ಪಳಿಸಿದ ರೀತಿ ನೆನಪಿಸಿಕೊಂಡರೆ ಭಯವಾಗುತ್ತದೆ. ಎಂತಹ ಮಹನೀಯರು ಮತ್ತು ಅಮಾಯಕರನ್ನು ಬಲಿ ತೆಗೆದುಕೊಂಡ ಕೊರೋನಾ ಬೇಗ ನಾಶವಾಗಲಿ ಎಂಬುದು ನನ್ನ ಆಶಯವಾಗಿದೆ ಎಂದರು.

ಸಂಗೀತದ ನೆಪವಿದ್ದರೆ ಮಾತ್ರ ಎಲ್ಲವನ್ನೂ ಸಾಧಿಸುವ ಹಂಬಲ ಹೆಚ್ಚುತ್ತದೆ. ಏಕೆಂದರೆ, ಮನಸ್ಸು ಶಾಂತವಾಗಿರುತ್ತದೆ. ಸಂಗೀತದಲ್ಲಿ ಯಶಸ್ಸು ಸಾಧಿಸಿದವರನ್ನು ನೆನಪಿಸಿಕೊಂಡು, ಅದೇ ಹಾದಿಯಲ್ಲಿ ಸಾಗುತ್ತಿರುವ ಕಿರಿಯ ಸಂಗೀತ ಸಾಧಕರನ್ನು ಸನ್ಮಾನಿಸುವುದು ಉತ್ತಮ ಕೆಲಸವಾಗಿದೆ. ಅದರಲ್ಲಿ ಎಸ್‍ಪಿಬಿ ಅವರನ್ನು ಸ್ಮರಿಸುವ ಕೆಲಸ ಅವಿಸ್ಮರಣೀಯ ಎಂದು ಹೊಗಳಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗಾಯಕ, ನಿವೃತ್ತ ಅಬಕಾರಿ ಅಧಿಕಾರಿ ವೆಂಕಟೇಶ್‍ಮೂರ್ತಿ ಶಿರೂರ, ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸುತ್ತಿರುವುದು ಹೆಮ್ಮೆ ತರಿಸಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು