ಈ ವಾರ ಎರಡು ಸಿನಿಮಾಗಳು ತೆರೆ ಕಾಣಲಿವೆ. ಈ ಎರಡು ಚಿತ್ರಗಳು ಹಾರರ್ ಮತ್ತು ಥ್ರಿಲ್ಲರ್ ಗಳಾಗಿವೆ. ಎಸ್ಎಲ್ವಿ ಸಿನಿಮಾ ಅಡಿಯಲ್ಲಿ ನಿರ್ಮಾಣಗೊಂಡಿರುವ ಸಿನಿಮಾ ಶಾಲಿನಿಯಾದರೆ, ಶ್ರೀ ಸ್ವರ್ಣ ರಥ ಬ್ಯಾನರ್ ಅಡಿಯಲ್ಲಿ ಹಾರರ್ ಹಾಗೂ ಥ್ರಿಲ್ಲರ್ ಅನುಭವ ನೀಡುವ ಸಿನಿಮಾ ಕರ್ವವಾಗಿದೆ.
ಶಾಲಿನಿ ಸಾಮಾಜಿಕ ಕಳಕಳಿಯೊಂದಿಗೆ ಹಾರರ್ ಮತ್ತು ಮನರಂಜನೆ ಬೆರೆಸಿರುವ ಚಿತ್ರ. ಅತ್ಯಾಚಾರದಂಥ ಘೋರ ಪಾತಕಗಳನ್ನೆಸಗುವವರ ವಿರುದ್ಧದ ಕಥೆಯಾಗಿದೆ. ಈ ಚಿತ್ರದ ನಿರ್ಮಾಪಕರು ಕೆ ಶ್ರೀನಿವಾಸ್ ಪ್ಲಾಸ್ಟರ್ ಆಫ್ ಪ್ಯಾರಿಸ್ ಉದ್ಯಮದಿಂದ ಸಿನಿಮಾಕ್ಕೆ ಬಂದಿದ್ದಾರೆ.
ಅತ್ಯಾಚಾರವೆಸಗಿದ ನೀಚರು ನ್ಯಾಯಾಲಯದಿಂದ ಮುಕ್ತಿ ಪಡೆದು ಶಿಕ್ಷೆಯಿಂದ ಪಾರಾಗಬಹುದು. ಆದರೆ `ಶಾಲಿನಿ’ಯಿಂದ ತಪ್ಪಿಸಿಕೊಳ್ಳುವುದು ಮಾತ್ರ ಅಸಾಧ್ಯ. ತಪ್ಪು ಮಾಡಿದವರಿಗೆ ಶಿಕ್ಷೆ ಗ್ಯಾರೆಂಟಿ. ಇದು ಶಾಲಿನಿ ಚಿತ್ರದ ಮುಖ್ಯ ಅಂಶ.
`ಶಾಲಿನಿ’ ಮಲ್ಲಿಕಾರ್ಜುನ್ ಅವರ ಚೊಚ್ಚಲ ನಿದರ್ೆಶನದ ಸಿನಿಮಾ. ಪುನೀತ್, ಅರವಿಂದ್, ಸಂತೋಷ್, ಅನ್ವಿತ, ಪ್ರೇಮ, ಕಾವ್ಯ, ಶೋಭರಾಜ್, ಮನದೀಪ್ ರಾಯ್, ಅಪೂರ್ವ, ಕಿಲ್ಲರ್ ವೆಂಕಟೇಶ್ ಮುಂತಾದವರು ತಾರಾಗಣದಲ್ಲಿದ್ದಾರೆ. ಶ್ಯಾಮ್ ಸಿಂಧೂರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಮಧುರ ಅವರ ಸಂಗೀತವಿದೆ. ಶಿವ ಪ್ರಸಾದ್ ಸಂಕಲನ, ಅಲ್ಟಿಮೇಟ್ ಶಿವು ಸಾಹಸ ಇದೆ.
ಇನ್ನೂ ಕರ್ವ ಸಿನಿಮಾದ ಬಗ್ಗೆ ಹೇಳುವುದಾದರೆ, ಥ್ರಿಲ್ಲರ್ ಅನುಭವ ನೀಡುವ ಸಿನಿಮಾ ಇದಾಗಿದೆ. ಬಿಡಿಸಲಾಗದ ರಹಸ್ಯದ ಸುತ್ತ ಚಿತ್ರ ಸಾಗುತ್ತದೆ. ಎರಡು ಆಯಾಮಗಳಲ್ಲಿ ನಿರ್ದೇಶಕ ನವನೀತ್ ಅವರು ಕಥೆ ಹೇಳುತ್ತಾ ಹೋಗುತ್ತಾರೆ ಚಿತ್ರದ ಕೆಲವು ದೃಶ್ಯಗಳನ್ನು ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡಲಾಗಿದೆ.
ಕನ್ನಡದಲ್ಲಿ 6-5=2 ಚಿತ್ರ ನಿರ್ಮಾಣ ಮಾಡಿ ದೊಡ್ಡ ಯಶಸ್ಸನ್ನು ಪಡೆದ ನಿರ್ಮಾಪಕ ಕೃಷ್ಣ ಚೈತನ್ಯ ಈ ಸಿನಿಮಾವನ್ನು ಶ್ರೀ ಸ್ವರ್ಣ ರಥ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಆರ್ಜೆ ರೋಹಿತ್, ತಿಲಕ್, ದೇವರಾಜ್, ಅನೀಶ, ಅನು, ವಿಜಯ್, ಚಂದು ಅಲ್ಲದೆ ಬಹು ಮುಖ್ಯ ತಿರುವಿನಲ್ಲಿ ಹೆಸರಾಂತ ನಾಯಕಿ ಪೂನಂ ಅವರ ಅತಿಥಿ ಪಾತ್ರವಿದೆ. ಶ್ರೀನಿವಾಸ್ ಪ್ರಭು, ಸಿದ್ಲಿಂಗು ಶ್ರೀಧರ್, ಪದ್ಮಜ ರಾವ್ ಸಹ ತಾರಾಬಳಗದಲ್ಲಿದ್ದಾರೆ.
ರವಿ ಬಸ್ರೂರ್ ಅವರ ಹಿನ್ನಲೆ ಸಂಗೀತ, ಮೋಹನ್ ಅವರ ಛಾಯಾಗ್ರಹಣ, ಡಿಫರೆಂಟ್ ಡ್ಯಾನಿ ಅವರ ಸಾಹಸ, ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಈ ಚಿತ್ರಕ್ಕೆ ಒದಗಿಸಿದ್ದಾರೆ.