News Karnataka Kannada
Thursday, May 09 2024
ಕ್ಯಾಂಪಸ್

ಉಜಿರೆ: ಪತ್ರಿಕೋದ್ಯಮಕ್ಕೆ ವೃತ್ತಿ ಒಲವು ಮುಖ್ಯ

Ujire: Career orientation is important for journalism
Photo Credit : News Kannada

ಉಜಿರೆ: ಎಸ್.ಡಿ. ಎಂ ಕಾಲೇಜಿನ ಸ್ನಾತಕೋತ್ತರಕೇಂದ್ರದಲ್ಲಿ ಪ್ರಥಮ ವರ್ಷದ ಎಂ.ಸಿ.ಜೆ ವಿದ್ಯಾರ್ಥಿಗಳಿಗೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಖ್ಯಾತ  ಕ್ರೈಂ ರಿಪೋರ್ಟರ್‌ಸುನಿಲ್ ಧರ್ಮಸ್ಥಳ ವೃತ್ತಿ ಕುರಿತು ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಪೋಲಿಸ್ ಸ್ತರಗಳು ಮತ್ತು ಅದರೊಳಗಿನ ವಿಭಾಗಗಳ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಸುದ್ದಿಗಾರರಾಗ ಬಯಸುವವರು ಹೇಗೆ ನ್ಯಾಯಾಂಗ ಮತ್ತು ಆಡಳಿತ ವ್ಯವಸ್ಥೆಯ ಬಗ್ಗೆ ತಿಳಿದು ಕೊಂಡಿರಬೇಕು, ಮತ್ತು ಮಾಹಿತಿ ಇಲ್ಲದೆ ಹೋದರೆ ಆಗುವ ಅಚಾತುರ್ಯಗಳ ಕುರಿತು ತಿಳಿಸಿದರು.

ಪತ್ರಿಕೋದ್ಯಮ ವೃತ್ತಿಯು ಅತೀ ಹೆಚ್ಚು ವೃತ್ತಿ ಪ್ರೀತಿಯನ್ನು ಹಾಗೂ ಹೆಚ್ಚು ತೋಡಗಿಸಿಕೊಳ್ಳುವಿಕೆಯನ್ನು ಬೇಡುತ್ತದೆ ವೃತ್ತಿಯೆಡೆಗೆ ಅತಿಯಾದ ಒಲವನ್ನು ಹೊಂದಿದ್ದರೆ ಮಾತ್ರ ಅಲ್ಲಿ ಯಶಸ್ಸು ಸಾಧ್ಯ ಎಂದು ತಿಳಿಸಿದರು.

ಸುದ್ದಿಗಾರರಿಗೆ ಅದರಲ್ಲಿಯೂ ಅಪರಾಧಗಳನ್ನು ವರದಿ ಮಾಡುವವರಿಗೆ ಸುದ್ದಿ ಮೂಲಗಳು ಅತೀ ಮುಖ್ಯವಾಗತ್ತದೆ, ಅವರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದರೆ ಮಾತ್ರ ಹೆಚ್ಚು ವಿಷಯ ಸಂಗ್ರಹ ಸಾಧ್ಯ ಎಂದರು. ಮಾಧ್ಯಮದಲ್ಲಿ ಕೆಲಸ ಮಾಡವವರಿಗೂ ವೃತ್ತಿ ಧರ್ಮವು ಮುಖ್ಯವಾಗುತ್ತದೆ, ವಿಶ್ವಾಸ ಅತೀ ಹೆಚ್ಚು ಲಾಭ ತಂದು ಕೊಡುತ್ತದೆ ಎಂದರು.

ಮಾತಿನ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ತೊಡಗಿದ ಅವರು ಅಪರಾಧಗಳಿಗೆ ಮುಖ್ಯಕಾರಣ, ಅಪರಾಧಗಳ ರೀತಿ, ಕೊಲೆ ಹಾಗೂ ಇತರೆ ಸನ್ನಿವೇಶಗಳನ್ನು ನೋಡುವಾಗ ಎದುರಿಸುವ ಕಷ್ಟಗಳು ಮತ್ತು ಹಲವು ವಿಷಯಗಳ ಕುರಿತು ತಮ್ಮ ಅನುಭವಗಳ ಸಹಿತ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿಭಾಗದ ಪ್ರಾಧ್ಯಾಪಕ ಸುನೀಲ್ ಹೆಗ್ಡೆ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು