ಹಾಸನ: ತಡರಾತ್ರಿ ತೋಟದ ಮನೆಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಉಂಟಾದ ಘಟನೆ ಹೊನ್ನಮ್ಮನ ಹಳ್ಳಿಯಲ್ಲಿ ನಡೆದಿದೆ.
ತಾಲ್ಲೂಕಿನ ದುದ್ದ ಹೋಬಳಿಯ ಹೊನ್ನಮ್ಮನ ಹಳ್ಳಿ ಗ್ರಾಮದ ಮರಿಗೇಗೌಡರ ತೋಟದ ಮನೆ ಯಲ್ಲಿ ದುರಂತ ಸಂಭವಿಸಿದ್ದು.
ಮನೆಯೊಳಗೆ ಸಂಗ್ರಹಿಸಿದ್ದ ನಾಲ್ಕು ಸಾವಿರ ಕೊಬ್ಬರಿ ಸೇರಿದಂತೆ ನಾಲ್ಕು ಹಸು, ಮೇಕೆಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ.
ಈ ಅಗ್ನಿ ಅವಘಡದಿಂದ ರೈತರಾದ ಮರಿಗೇಗೌಡ ಅವರಿಗೆ ತೀವ್ರ ಆಘಾತವಾಗಿದ್ದು ಅಪಾರ ಆರ್ಥಿಕ ನಷ್ಟ ಅನುಭವಿಸಿದ್ದು ಜಿಲ್ಲಾಡಳಿತ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಪರಿಹಾರ ಕ್ರಮವಹಿಸುವಂತೆ ಜೆಡಿಎಸ್ ವಕ್ತಾರ ಹೊಂಗೆರೆ ರಘು ಆಗ್ರಹಿಸಿದ್ದಾರೆ.
ಮಾಹಿತಿ ಪಡೆದ ಅಗ್ನಿ ಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ಅಕ್ಕಪಕ್ಕದ ಪ್ರದೇಶಗಳಿಗೆ ವ್ಯಾಪಿಸದಂತೆ ತಡೆದು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.