ಮಂಗಳೂರು: ಆಗಸ್ಟ್ 29, 2022 ರಂದು ಮಂಗಳೂರು ಮಿಲಾಗ್ರಿಸ್ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಹಾಗೂ ವಾಣಿಜ್ಯ ವಿಭಾಗದ ವತಿಯಿಂದ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಮತ್ತು ಆಧುನಿಕ ಚಿಂತನೆಗಳನ್ನು ಅಭಿವೃದ್ಧಿ ಪಡಿಸುವುದು ಮತ್ತು ಪುಸ್ತಕ ಬಿಡುಗಡೆ : ಬಂಧ್ ಸುಮ್ರಾಟ್ – ಟೆಲ್ಸ್ ಆಫ್ ಎಕ್ಸ್ ಟರ್ನಲ್ ರೆಬೆಲ್ ಜಾರ್ಜ್ ಫೆರ್ನಾಂಡಿಸ್ ಎಂಬ ವಿಷಯದ ಮೇಲೆ ವಿದ್ಯಾರ್ಥಿಗಳಿಗಾಗಿ ಕೌಶಲಾಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿ ಯಾಗಿ ಎಫ್. ಐ. ಆರ್. ಎ ಅಧ್ಯಕ್ಷರಾದ ಪ್ರೊ. ನರೇಂದ್ರ ನಾಯಕ್ ವಿಷಯದ ಕುರಿತು ಮಾತನಾಡಿ ಇಂದಿರಾ ಗಾಂಧಿ ಯವರ ಇಂಡೆಲ್ಟೋರಿಯಲ್ ನಿಯಮಗಳನ್ನು ವಿರೋಧಿಸಿದ ತುರ್ತು ವ್ಯಕ್ತಿ, ಅವರು ಮಹತ್ವದ ರಾಜಕಾರಣಿ ಎಂದು ಹೇಳಿದರು.
ಪುಸ್ತಕ ಬಿಡುಗಡೆ ಕುರಿತು ಸಮಿತಿ ಚರ್ಚೆಯನ್ನು ಬಂದ್ ಸಾಮ್ರಾಟ್ ನ ಲೇಖಕರಾದ ಶ್ರೀಯುತ ಕ್ರೈಸ್ ಇಮ್ಮನುಲ್ , ಸಂಶೋಧನಾ ಮಾರ್ಗದರ್ಶಕರಾದ ಪ್ರೊ ಲೂರ್ದುಸಾಮಿ ವಹಿಸಿ ಕೊಂಡರು. ಸ್ಪೇನ್ ಸಂನ್ಸಿಗೋ ದವರಾದ ಡಾ ಜಾಕೋಬ್, ಮೈಸೂರ್ ಜೆ. ಎಸ್. ಎಸ್.ಕಾಲೇಜಿನ ಪ್ರೊ ಅಖಿಲ್, ಸಿಂಡಿಕೇಟ್ ಬ್ಯಾಂಕ್ ನ ಶ್ರೀಯುತ ಶ್ಯಾಮ್ ಸುಂದರ್ ರಾವ್, ನಟರಾದ ಶ್ರೀಯುತ ಪ್ರಭಕರ್ ಕಾಪೀಕಡ್, ನೈಜಿರಿಯಾ ದ ಶ್ರೀಯುತ ಅಫ್ರೆಡ್ ಮ್ಯಾಕ್ಸಿಮ್, ಹಾಗೂ ಬಿಸಿನೆಸ್ ಮ್ಯಾನ್ ಆದ ಗನ್ ಮಾನ್ ಸೊಲಂಕಿ ಮನೋಜ್ ಉಪಸ್ಥಿತರಿದ್ದರು.
ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ವಂ. ಗುರು. ಮೈಕಲ್ ಸಾಂತುಮಾಯೋರ್ ಅಧ್ಯಕ್ಷತೆಯನ್ನು ವಹಿಸುದರು.
ಮಿಲಾಗ್ರಿಸ್ ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀಯುತ ಕ್ಯಾಸ್ಸಿನ ರೊಡ್ರಿಗೆಸ್ ಅತಿಥಿಗಳನ್ನು ಸ್ವಾಗತಿಸಿದರು, ವಿದ್ಯಾರ್ಥಿ ಜೋಸ್ಟನ್ ಡಿ ಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು, ಉಪನ್ಯಾಸಕ ಶ್ರೀಯುತ ಡೆನ್ಜಿಲ್ ಪಿಂಟೋ ವಂದಿಸಿದರು.