ಮಂಗಳೂರು: ಮಿಲಾಗ್ರಿಸ್ ಕಾಲೇಜಿನಲ್ಲಿ ಸ್ಟೂಡೆಂಟ್ ಕೌನ್ಸಿಲ್, ಕಾಲೇಜು ಸಂಘಗಳು, ಯುಜಿಸಿ ವೃತ್ತಿ ಆಧಾರಿತ, ಉಚಿತ ಆಡ್-ಆನ್, ಕಾಲೇಜು ಡಿಪ್ಲೋಮಾ ಕೋರ್ಸ್ಗಳು ಉದ್ಘಾಟನ ಸಮಾರಂಭ ಮಿಲಾಗ್ರಿಸ್ ಕಾಲೇಜಿ ನಲ್ಲಿ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಫಾ| ಮೈಕಲ್ ಸಾಂತುಮಾಯೋ ವಿದ್ಯಾರ್ಥಿ ನಾಯಕನಿಗೆ ಹಾಗೂ ಇತರ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿದರು ಮಂಗಳೂರು ಬೆಂದೂರು,ಸೆಬಾಸ್ಟಿಯನ್ ಚರ್ಚ್ ನ ಧರ್ಮ ಗುರುಗಳು ಹಾಗೂ ವಿಕಾರ್ ವೀರ್ ಇಸಿಡೀನರಿ ವo.ಗುರು.ವಿನ್ಸೆಂಟ್ ಫ್ರಾನ್ಸಿಸ್ ಮೊಂತೇರೊ ಮುಖ್ಯ ಅಥಿತಿಯಾಗಿ ಆಗಮಿಸಿ ಮಾತನಾಡಿದ ಇವರು ವಿದ್ಯಾರ್ಥಿಗಳು ದೇಶದ ಯುವ ಶಕ್ತಿಗಳಾಗಿದ್ದು ಏಕಾಗ್ರಚಿತ್ತದಿಂದ ಧನಾತ್ಮಕ ವಿಚಾರಗಳ ಬಗ್ಗೆ ಮನಸ್ಸು ಕೇಂದ್ರಿಕರಿಸಿದ್ದಲ್ಲಿ ತಮ್ಮ ಅವಿರತ ಪರಿಶ್ರಮದಿಂದ ಬಹುದೊಡ್ಡ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯ ಎಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿರುವ ಮಿಲಾಗ್ರಿಸ್ ಕಾಲೇಜಿನ ಸಂಚಾಲಕರಾಗಿರುವ ವಂ. ಗುರು ಬೋನವೆಂಚೆರ್ ನಝರೆತ್ ಆಯ್ಕೆ ಆದ ಪದಾಧಿಕಾರಿಗಳು ಶುಭ ಹಾರೈಸಿದರು. ಗೌರವ ಅತಿಥಿಯಾಗಿ ಪರ್ಸನಲ್ ಇನ್ವೆಸ್ಟ್ ಮೆಂಟ್ ನ ತರಬೇತಿದಾರರಾಗಿರುವ ಸಪ್ನಾ ಶೆನೈ ಮಾತನಾಡಿ ವಿದ್ಯಾರ್ಥಿಗಳು ಬಾಲ್ಯದಲ್ಲಿ ನಾಯಕತ್ವ ಗುಣವನ್ನು ಮೈ ಗೂಡಿಸಿ ಕೊಂಡರೆ ಸಾಮಾಜದ ಏಳಿಗೆಗೆ ಕಾರಣವಾಗುವುದರಲ್ಲಿ ಸಂಶಯವಿಲ್ಲಎಂದು ಹೇಳಿದರು.
ಉಪನ್ಯಾಸಕರಾದ ಜೋಬಿನ್, ಹಾಗೂ ಅಖಿಲ್ , ಪದಾಧಿಕಾರಿಗಳಾದ ಜೋಸ್ಟನ್ ಡಿಸೋಜ,ಅನುಷಾ ಮೊನ್ತೆರೊ, ಅಶ್ವಿನ್ ಒರ್ನೆಲೋ, ಸೈಮಾ ರೈ ಮುಂತಾದವರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಫಾ| ಮೈಕಲ್ ಸಾಂತುಮಾಯೋ ಸ್ವಾಗತಿಸಿದರು. ವಿದ್ಯಾರ್ಥಿ ನಿಕ್ಸನ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪಪ್ರಾಂಶು ಪಾಲರಾದ ಕ್ಯಾಸಿನ್ ರೊಡಿಗೆಸ್ ವಂದಿಸಿದರು.