ನಂಜನಗೂಡು: ತಾಲೂಕಿನ ಸುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅರ್ಮಾನಿ ವಾಟರ್ ಏಡ್ ಸಂಸ್ಥೆಯ ವಿದೇಶಿಗರ ತಂಡ ಭೇಟಿ ನೀಡಿದೆ.
ಸಂಸ್ಥೆಯ ಸದಸ್ಯರಾದ ಫಿಲಿಫೈನ್ಸ್ ಆಸ್ಟ್ರೇಲಿಯಾ, ಅಮೇರಿಕಾ ರಾಷ್ಟ್ರಗಳನ್ನೊಳಗೊಂಡ ತಂಡ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಸ್ಥೆಯ ಸದಸ್ಯರು ಇಂದು ಗುರುವಾರ ಶಾಲೆಗೆ ಆಗಮಿಸಿ, ಮಳೆ ನೀರು ಕೊಯ್ಲು, ಕೈ ತೊಳೆಯುವ ಘಟಕ, ಶಾಲಾ ಶೌಚಾಲಯ, ತರಗತಿಗಳನ್ನು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಸುತ್ತೂರು ಗ್ರಾಪಂ ಅಧ್ಯಕ್ಷ ರವಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೃ ಪಾರ್ವತಿ, ಉಪಾಧ್ಯಕ್ಷ ರವಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.