ಕುಂದಾಪುರ: ತಾಲೂಕಿನ ಕಾಡಂಚಿನ ಪ್ರದೇಶವಾದ ಆಲೂರು ಸರಕಾರಿ ಪ್ರೌಢಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹು ದೊಡ್ಡ ಸಮಸ್ಯೆ ಆಗಿದೆ ನವೆಂಬರ್ ತಿಂಗಳ ಮೊದಲ ವಾರದಲ್ಲೇ ಬಾವಿಯ ನೀರು ಬರಿದಾಗುತ್ತಿದೆ.
1 ರಿಂದ 10 ನೇ ತರಗತಿ ವರೆಗೆ ಶಿಕ್ಷಣವನ್ನು ನೀಡಲಾಗುತ್ತಿರುವ ಆಲೂರು ಶಾಲೆಯಲ್ಲಿ ಒಟ್ಟು-399 ಮಕ್ಕಳು ಒಂದೆ ಸೂರಿ ನಡಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ ನೂರಾರು ಸಂಖ್ಯೆಯಲ್ಲಿರುವ ವಿದ್ಯಾರ್ಥಿಗಳಿಗೆ ಕುಡಿಯುವ ನೀರನ್ನು ಒದಗಿಸಿಸುವುದೆ ಶಿಕ್ಷಕರಿಗೆ ದೊಡ್ಡ ಸವಾಲಿನ ಸಂಗತಿ ಆಗಿದೆ.
ಶಿಕ್ಷಕರ ಕೊರತೆ: ಪ್ರೌಢಶಾಲಾ ವಿಭಾಗದಲ್ಲಿ 02-ಶಿಕ್ಷಕರ ಕೊರತೆ ಸೇರಿದಂತೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೂ ಮಕ್ಕಳ ಅನುಪಾತಕ್ಕೆ ಅನುಗುಣವಾಗಿ ಶಿಕ್ಷಕರಿಲ್ಲ,ಪ್ರೌಢಶಾಲಾ ವಿಭಾಗಕ್ಕೆ ಒಟ್ಟು 03 ಕೊಠಡಿಗಳ ಅವಶ್ಯಕತೆ ಇದೆ,ಗ್ರಂಥಾಲಯ ನಿರ್ಮಾಣ,ಬಯಲು ರಂಗ ಮಂದಿರ,ಆಟದ ಮೈದಾನಕ್ಕೆ ಟ್ರ್ಯಾಕ್ ಅಳವಡಿಕೆಗೆ ಕೆಲಸ ಆಗಬೇಕಿದೆ, ಶಿಕ್ಷಕರ ಕೊರತೆಯನ್ನು ಪರಿಹರಿಸುವ ಕೆಲಸ ಶಿಕ್ಷಣ ಇಲಾಖೆ ಮುಂದಾಗಬೇಕಿದೆ.