ಮಂಗಳೂರು : ರಾಷ್ಟ್ರೀಯ ಟಾಲೆಂಟ್ ಸರ್ಚ್ ಪರೀಕ್ಷೆಯ ಫೈನಲ್ನಲ್ಲಿ ಸಿಎಫ್ಎಎಲ್ನ ನಾಲ್ವರು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಮುರುಳೀಧರ್ (155 ಅಂಕ), ಅಂಕಿತ್ ಕಿಣಿ (140 ಅಂಕ), ಕೇತನ್ ಸುಮನ್ (135 ಅಂಕ), ಮತ್ತು ಸುಮಂತ್ ಮಾರ್ಟಿಸ್ (123 ಅಂಕ) ಪಡೆದು ರಾಷ್ಟ್ರೀಯ ಟಾಲೆಂಟ್ ಸರ್ಚ್ ಸ್ಕಾಲರ್ ಶಿಪ್ಗೆ ಅರ್ಹರಾಗಿದ್ದಾರೆ.
ಭಾರತದಾದ್ಯಂತ ಸುಮಾರು 4000 ವಿದ್ಯಾರ್ಥಿಗಳು ಎರಡನೆ ಸುತ್ತಿಗೆ ಆಯ್ಕೆಯಾಗಿದ್ದು, ಅವರಲ್ಲಿ 2103 ವಿದ್ಯಾರ್ಥಿಗಳು ಮಾತ್ರ ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿದ್ದಾರೆ.
ಎನ್ಟಿಎಸ್ಇ ಅಂತಿಮ ಹಂತದ ಪರೀಕ್ಷೆಯನ್ನು ಅ. 24 ರಂದು ದೇಶದಾದ್ಯಂತ ಎಲ್ಲಾ ರಾಜ್ಯ ಪ್ರಧಾನ ಕಛೇರಿಗಳಲ್ಲಿ ನಡೆಸಲಾಯಿತು. ಸಿಎಫ್ಎಎಲ್ನ ವಿದ್ಯಾರ್ಥಿಗಳ ಫಲಿತಾಂಶ ತಂಡದ ಪರಿಶ್ರಮವನ್ನು ತೋರಿಸುತ್ತದೆ. ಯುವ ಸಾಧಕರು ತಮ್ಮ ಯಶಸ್ಸನ್ನು ಸಿಎಫ್ಎಎಲ್ನ ಮಾರ್ಗದರ್ಶಕರಿಗೆ ಸಲ್ಲಿಸುತ್ತಾರೆ.
ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಮಾರ್ಗದರ್ಶಕರ ಸಮರ್ಪಣೆಯು ಉತ್ತಮ ಫಲಿತಾಂಶ ನೀಡಿದೆ ಎಂದು ಸಿಎಫ್ಎಎಲ್ನ ಸಂಸ್ಥಾಪಕಿ ಸೆವೆರಿನ್ ರೊಸಾರಿಯೋ ಎಂದರು. ವಿದ್ಯಾರ್ಥಿಗಳ ಸಾಧನೆಗೆ ಅಭಿನಂದಿಸಿದರು.
ಎನ್ಟಿಎಸ್ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಲಿ ನಡೆಸುವ ಕಠಿಣವಾದ, ಹೆಚ್ಚು ಬೇಡಿಕೆ ಇರುವ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ಒಂದಾಗಿದೆ. ಎನ್ಟಿಎಸ್ಇ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಸ್ಟ್ರೀಮ್ನಲ್ಲಿ (ಡಾಕ್ಟರೇಟ್ ಹಂತದ ಅಧ್ಯಯನಗಳವರೆಗೆ) ಮತ್ತು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ದಂತಹ ವೃತ್ತಿಪರ ಕೋರ್ಸುಗಳನ್ನು (2ನೇ ಪದವಿ ಹಂತದವರೆಗೆ) ಮುಂದುವರೆಸಲು ಎರಡು ಸಾವಿರ ವಿದ್ಯಾರ್ಥಿ ವೇತನವನ್ನು ನೀಡುತ್ತದೆ.
ಸಿಎಫ್ಎಎಲ್ನಲ್ಲಿ, ನೀಟ್, ಎನ್ಟಿಎಸ್ಇ, ಕೆವಿಪಿವೈ, ಜೆಇಇ/ಅಡ್ವಾನ್ಸ್, ಒಲಂಪಿಯಾಡ್ ಅಂತಹ ವಿವಿಧ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ತರಬೇತಿ ನೀಡಲು ಸಿಎಫ್ಎಎಲ್ ಮಂಗಳೂರಿನ ಪ್ರಮುಖ ಸಂಸ್ಥೆಯಾಗಿದೆ. ಜೊತೆಗೆ 1-10 ನೇ ತರಗತಿಯ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ ಮೂಲ ಬುದ್ಧಿವಂತಿಕೆಯನ್ನು ಅಭಿವೃದ್ಧಿ ಪಡಿಸಲು ಅಡಿಪಾಯ ಕೋರ್ಸುಗಳನ್ನು ಒದಗಿಸುತ್ತದೆ.