ಬೆಳ್ತಂಗಡಿ ತಾಲೂಕಿನ ಸಾಂಸ್ಕೃತಿಕ ಸಂಘಟನೆ “ಸಮೂಹ ಉಜಿರೆ ” ಆಶ್ರಯದಲ್ಲಿ ಫೆ . 22 ಹಾಗೂ 23 ರಂದು ಎರಡು ವಿಭಿನ್ನ ನಾಟಕಗಳ ಪ್ರದರ್ಶನ ಉಜಿರೆಯ ವನ ರಂಗ ಬಯಲು ರಂಗಮಂದಿರದಲ್ಲಿ ನೆರವೇರಿತು.
ದಿನಾಂಕ 22 ರಂದು ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಅಭಿನಯಿಸಿದ ಜೀವನ್ ರಾಂ ಸುಳ್ಯ ನಿರ್ದೇಶನದ” ಮಕ್ಕಳ ಮಾಯಾಲೋಕ” ಹಾಗೂ ದಿನಾಂಕ 23ರಂದು ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಪರಿಕಲ್ಪನೆ ಮತ್ತು ಮಾರ್ಗದರ್ಶನದ ಸುನಿಲ್ ಕಲ್ಕೊಪ್ಪ ನಿರ್ದೇಶನದ ತುಳು ನಾಟಕ “ಶ್ರೀಕೃಷ್ಣ ಸಂಧಾನೊ ” ಪ್ರದರ್ಶನಗೊಂಡವು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ , ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್, ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ , ಸಮೂಹದ ಸದಸ್ಯರು ಹಾಗೂ ವಿದ್ಯಾರ್ಥಿಗಳು ನಾಟಕಗಳನ್ನು ವೀಕ್ಷಿಸಿ ಆನಂದಿಸಿದರು.
ಸಮೂಹ ಉಜಿರೆಯ ಅಧ್ಯಕ್ಷ ಡಾ.ಕುಮಾರ ಹೆಗ್ಡೆಸ್ವಾಗತಿಸಿ , ಪ್ರಾಸ್ತಾವಿಕವಾಗಿ ಮಾತನಾಡಿ ,ಕೊನೆಯಲ್ಲಿ ವಂದಿಸಿದರು. ಕ. ಸಾ .ಪ .ಜಿಲ್ಲಾಧ್ಯಕ್ಷ ಡಾ!. ಎಂ. ಪಿ ಶ್ರೀನಾಥ್, ಡಾ. ಮಹೇಶ್ ಶೆಟ್ಟಿ ಮತ್ತು ಸೋಮಶೇಖರ್ ಶೆಟ್ಟಿ ಸಹಕರಿಸಿದರು.