News Karnataka Kannada
Wednesday, May 01 2024
ಕ್ಯಾಂಪಸ್

ಶಂಸುಲ್ ಉಲಮಾ ಅರೇಬಿಕ್ ಕಾಲೇಜ್ ಸಮಿತಿ ಅಧ್ಯಕ್ಷರಾಗಿ ಅಲಿ ಹಸನ್ ಫೈಝಿ ಆಯ್ಕೆ

Uae...
Photo Credit : News Kannada

ದುಬೈ : ಶಂಸುಲ್ ಉಲಮಾ ಅರೇಬಿಕ್  ಕಾಲೇಜ್ ತೋಡಾರ್ ಯು ಎ ಇ ಸಮಿತಿ ಅಧೀನದಲ್ಲಿ ನೂತನ ದುಬೈ ಸಮಿತಿ ರಚನಾ ಕಾರ್ಯಕ್ರಮವು  ಅಬ್ದುಲ್ ಸಲಾಂ ಬಪ್ಪಲಿಗೆ ಯವರ ನೇತೃತ್ವದಲ್ಲಿ ದೇರಾ ದುಬೈಯಲ್ಲಿ ನಡೆಯಿತು.

ಸಭಾ ಕಾರ್ಯಕ್ರಮವನ್ನು ಸುಲೈಮಾನ್ ಮೌಲವಿ ಕಲ್ಲೇಗ ರವರು  ಉದ್ಘಾಟಿಸಿ ಮಾತನಾಡುತ್ತಾ , ಪ್ರಸಕ್ತ ಸನ್ನಿವೇಶದಲ್ಲಿ ಶೈಕ್ಷಣಿಕ ವರ್ಷವು ಮುಸ್ಲಿಂ ಸಮುದಾಯಕ್ಕೆ ಅತೀ ಕಷ್ಟಕರ ಸನ್ನಿವೇಶವಾಗಿದ್ದು, ನಮ್ಮ ಸಮುದಾಯವು ಸಬಲೀಕರಣದತ್ತ ದಾಪುಗಾಲಿಡುತ್ತಿದ್ದು ಇದರಿಂದ ವಿಚಲಿತರಾದ ಕೆಲವೊಂದು ಮೂಲಭೂತ ವಾದಿಗಳು ನಮ್ಮನ್ನು ಹಲವಾರು ರೀತಿಯಲ್ಲಿ ತಡೆಯುತ್ತಿದ್ದು, ನಮ್ಮ ಸಹೋದರಿಯರ ರಕ್ಷಾ ಕವಚವಾದ ತಲೆ ಧಿರಿಸನ್ನು  ಪ್ರಶ್ನಿಸುವಂತಹ ಕಾಲಕ್ಕೆ ಬಂದು ನಿಂತಿದೆ. ಇಂದು ನ್ಯಾಯಾಲಯದಲ್ಲಿದ್ದು ನ್ಯಾಯವು ಎಂದೂ ಕಣ್ಮರೆಯಾಗದು ಎಂದು ಆಶಾಭಾವನೆಯನ್ನು ವ್ಯಕ್ತಪಡಿಸಿ,  ಶಂಸುಲ್ ಉಲಮಾ ಅರೇಬಿಕ್ ಕಾಲೇಜ್ ಕೇವಲ ತೋಡಾರಿನ ಅಭ್ಯುದಯವನ್ನು ಮಾತ್ರ ನಿರೀಕ್ಷಿಸದೆ ಇಂದು ಉತ್ತರ ಕರ್ನಾಟದತ್ತ ಇಸ್ಲಾಮ್ ನ್ನು ಪಸರಿಸುವಲ್ಲಿಯೂ ಮಹತ್ತರವಾದ ಪಾತ್ರವಹಿಸಿದೆ ಎಂದರು .

ನಂತರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಂಸುಲ್ ಉಲಮಾ ಅರೇಬಿಕ್  ಕಾಲೇಜ್ ತೋಡಾರ್ ಪೂರ್ವ ವಿದ್ಯಾರ್ಥಿಗಳೂ ಫೈಝಿ ಬಿರುದು ದಾರಿಗಲಾದ ಅಲಿ ಹಸನ್ ಫೈಝಿ ಹಾಗೂ ಬದರುಲ್ ಮುನೀರ್ ಫೈಝಿ ರವರು ಮಾತನಾಡಿ ತಮ್ಮ ವಿದ್ಯಾರ್ಥಿ ಜೀವನದ ಅನುಭವವನ್ನು ವಿವರಿಸಿ ತೋಡಾರಿನಲ್ಲಿ ಕಾರ್ಯಾಚರಿಸುತ್ತಿರುವ ವಿದ್ಯಾ ಸಂಸ್ಥೆಯನ್ನು ಪ್ರೋತ್ಸಾಹಿಸಿ ಬೆಳೆಸುವಂತೆ ಕೇಳಿಕೊಂಡರು.

ಇಲ್ಯಾಸ್ ಕಡಬ ರವರು ನೂತನ ದುಬೈ ಸಮಿತಿ ಪಧಾಧಿಕಾರಿಗಳನ್ನು ಆರಿಸಿ,  ಉತ್ತಮ ರೀತಿಯಲ್ಲಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.  ಕಾರ್ಯಕ್ರಮದಲ್ಲಿ ಅಝರ್ ಹಂಡೇಲ್ ಸ್ವಾಗತಿಸಿ  , ನಿಝಾಂ ತೋಡಾರ್ ವಂದಿಸಿದರು.

ನೂತನ ದುಬೈ ಸಮಿತಿ  ಪಧಾಧಿಕಾರಿಗಳು

ಗೌರವ ಸಲಹೆಗಾರರು :  ಅಶ್ರಫ್ ಷಾ ಮಾಂತೂರ್ , ಲತೀಫ್ ಮದರ್ ಇಂಡಿಯಾ , ಅಬ್ದುಲ್ ಸಲಾಂ ಬಪ್ಪಳಿಗೆ , ಅಶ್ರಫ್ ನಾಟೆಕಲ್ , ಯೂಸಫ್ ಈಶ್ವರಮಂಗಿಲ, ಶಬೀರ್ ಫೈಝಿ ,ಗೌರವಾಧ್ಯಕ್ಷರು : ಸುಲೈಮಾನ್ ಮೌಲವಿ ಕಲ್ಲೇಗ

ಅಧ್ಯಕ್ಷರು : ಅಲಿ ಹಸನ್ ಫೈಝಿ

ಉಪಾಧ್ಯಕ್ಷರು : ಬದರುಲ್ ಮುನೀರ್ ಫೈಝಿ , ನವಾಝ್ ಬಿಸಿ ರೋಡ್ , ಇಬ್ರಾಹಿಂ ಆತೂರ್

ಪ್ರಧಾನ ಕಾರ್ಯದರ್ಶಿ : ಜಾಬೀರ್ ಬೆಟ್ಟಂಪಾಡಿ

ಕಾರ್ಯದರ್ಶಿ : ಇಸಾಕ್ ಕುಡ್ತಮುಗೇರ್ , ತಾಹಿರ್ ಹೆಂತಾರ್

ಕೋಶಾಧಿಕಾರಿ : ಉಸ್ಮಾನ್ ಮರೀಲ್

ಲೆಕ್ಕ ಪರಿಶೋಧಕರು : ನಾಸೀರ್ ಬಪ್ಪಳಿಗೆ

ಸಂಘಟನಾ ಕಾರ್ಯದರ್ಶಿ : ಸಿರಾಜ್ ಬಿಸಿರೋಡ್ , ಅಝೀಝ್ ಸೊಂಪಾಡಿ , ಜಾಬೀರ್ ಬಪ್ಪಳಿಗೆ ,

ಸಂಚಾಲಕರು :  ಷರೀಫ್ ಕಾವು , ಲತೀಫ್ ಕೌಡಿಚ್ಚಾರ್ , ಅಶ್ರಫ್ ಅರ್ತಿಕೆರೆ , ಬದ್ರುದ್ದೀನ್ ಹೆಂತಾರ್ , ನೂರ್ ಮುಹಮ್ಮದ್ , ಅಬ್ಬಾಸ್ ಕೇಕುಡೆ ,ಇಸ್ಮಾಯಿಲ್ ತಿಂಗಳಾಡಿ,  ಶಬೀರ್ ಫರಂಗಿಪೇಟೆ , ಅನ್ವರ್ ಮಾಣಿಲ , ನಿಝಾಂ ತೋಡಾರ್,  ಅಝರ್ ಹಂಡೇಲ್.

ಕಾರ್ಯಕಾರಿ ಸಮಿತಿ :  ಇಲ್ಯಾಸ್ ಕಡಬ , ರಿಯಾಝ್ ಉಲ್ತೂರ್,  ನಿಝಾಂ ಮೂಡಬಿದ್ರೆ , ಮೂನಿಷ್ ತೋಡಾರ್ , ಜೌಹರ್  ಕುದ್ದುಪದವು ,   ಬಷೀರ್ ಕೆಮ್ಮಿಂಜೆ ,  ರಹ್ಮಾನ್ ಪೆರಾಜೆ , ಮಹಮ್ಮದ್ ಪಲ್ಲತ್ತೂರ್ ,  ಇಫ್ತಿಕಾರ್ ಅಡ್ಯಾರ್ ಕಣ್ಣೂರ್, ಶಾಹುಲ್ ಬಿಸಿ ರೋಡ್ , ಜಲೀಲ್ ಶಾನ್ ವಿಟ್ಲ, ಫರ್ವೀಝ್ ಹಳೆಯಂಗಡಿ , ಶಾರುಖ್ ಬಿಸಿ ರೋಡ್ , ಜಲೀಲ್ ಉಕ್ಕುಡ ,   ತಯ್ಯಿಬ್ ಹೆಂತಾರ್ ,

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು