News Karnataka Kannada
Saturday, May 04 2024
ಕ್ಯಾಂಪಸ್

ವಿದ್ಯಾರ್ಥಿಯಲ್ಲಿನ ಪ್ರತಿಭೆಗಳನ್ನು ಶಿಕ್ಷಣ ಪ್ರೋತ್ಸಾಹಿಸಬೇಕು : ಡಾ ಎಚ್.ಮಾಧವ ಭಟ್

New Project 2021 09 09t190549.632
Photo Credit :

ಪುತ್ತೂರು: ಶಿಕ್ಷಣ ಎನ್ನುವುದು ವ್ಯಕ್ತಿಯಲ್ಲಿ ಅದಾಗಿಯೇ ಪರಂಪರೆಯಿOದ ಒಡಮೂಡಿಕೊಂಡು ಬಂದ ಜ್ಞಾನವನ್ನು ವಿಸ್ತರಿಸಿಕೊಳ್ಳುವುದಕ್ಕೆ ಸಹಾಯ ಮಾಡಬೇಕು. ಆದರೆ ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಅಂತಹ ಅವಕಾಶಗಳಿಲ್ಲ. ಹಾಗಾಗಿಯೇ ವ್ಯಕ್ತಿಯೊಳಗಿನ ವಿಶೇಷ ಪ್ರತಿಭೆ, ಕೌಶಲ್ಯಗಳು ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಅವನತಿಯತ್ತ ಸಾಗುತ್ತದೆ. ಈ ನೆಲೆಯಿಂದ ನೂತನ ಶಿಕ್ಷಣ ನೀತಿ ಹೊಸ ಭರವಸೆಯಾಗಿ ನಮ್ಮ ಮುಂದೆ ಕಾಣಿಸಿಕೊಳ್ಳಲಾರಂಭಿಸಿದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಡಾ.ಎಚ್.ಮಾಧವ ಭಟ್ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ನೂತನ ಶಿಕ್ಷಣ ನೀತಿಯ ಬಗೆಗಿನ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.

ಪ್ರಾಪಂಚಿಕ ನೆಲೆಯಲ್ಲಿ ಭಾರತ ಎದೆಯುಬ್ಬಿಸಿ ನಿಲ್ಲುವಂತಹ ಕಾಲಘಟ್ಟದಲ್ಲಿ ನೂತನ ಶಿಕ್ಷಣ ನೀತಿಯೂ ಜಾರಿಯಾಗುತ್ತಿರುವುದು ಸ್ವಾಗತಾರ್ಹ. ಈ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಜಾರಿಗೊಳಿಸಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ನಿಜಕ್ಕಾದರೂ ಒಂದು ವರ್ಷದ ಪೂರ್ವದಲ್ಲೇ ಶಿಕ್ಷಣ ಕ್ಷೇತ್ರದಲ್ಲಿ ನೂತನ ನೀತಿ ಜಾರಿಯಾಗುತ್ತಿರುವುದರ ಬಗೆಗೆ ಮಾಹಿತಿ ನೀಡಿ ಚರ್ಚಿಸಲು ಅವಕಾಶವನ್ನು ನೀಡಲಾಗಿತ್ತು. ಆದರೆ ಯಾವ ಚರ್ಚೆಗಳು, ವಿಚಾರ ಮಂಥನಗಳು ಈ ಒಂದು ವರ್ಷದ ಅವಧಿಯಲ್ಲಿ ಆಗಬೇಕಿತ್ತೋ ಅದಾಗದಿರುವುದು ಮತ್ತು ಈಗ ಒಮ್ಮಿಂದೊಮ್ಮೆಗೇ ಗಾಬರಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಖೇದಕರ ಎಂದು ನುಡಿದರು.

ಶಿಕ್ಷಣ ರಂಗದಲ್ಲಿ ಬೇಕಾಗಿರುವ ಬದಲಾವಣೆಯ ಮಾಹಿತಿ ಶಿಕ್ಷಕರ ಮೂಲಕ ವಿವಿಧ ಹಂತಗಳನ್ನು ದಾಟಿ ಸರ್ಕಾರಕ್ಕೆ ತಲಪಬೇಕು. ಆದರೆ ದುರದೃಷ್ಟವಶಾತ್ ಇಂದು ಸರ್ಕಾರವೇ ಶಿಕ್ಷಕರಿಗೆ ಬದಲಾವಣೆಗಳ ಬಗೆಗೆ ಹೇಳುವಂತಾಗಿದೆ. ನಾವು ಪ್ರತಿಬಾರಿಯೂ ಮೂಖ್ಯಮಂತ್ರಿಗಳು ಅಥವ ಶಿಕ್ಷಣ ಮಂತ್ರಿಗಳು ಹೇಳುವುದಕ್ಕಾಗಿ ಕಾಯುತ್ತಿದ್ದೇವೆ ಎಂದರಲ್ಲದೆ ಈ ಹಿಂದಿನ ಪದವಿ ಶಿಕ್ಷಣ ವ್ಯವಸ್ಥೆಯಲ್ಲಿ ಮೂರು ವರ್ಷಗಳ ಅಧ್ಯಯನ ಕಡ್ಡಾಯವಾಗಿತ್ತು. ಕೇವಲ ಕೊನೆಯ ಒಂದು ತಿಂಗಳು ಕಾರಣಾಂತರಗಳಿOದ ವಿದ್ಯಾರ್ಥಿ ಕಾಲೇಜಿಗೆ ಹಾಜರಾಗದಿದ್ದರೂ ಮೂರೂ ವರ್ಷಗಳ ಅಧ್ಯಯನಕ್ಕೆ ಮೌಲ್ಯವಿರುತ್ತಿರಲಿಲ್ಲ. ಆದರೆ ನೂತನ ಶಿಕ್ಷಣ ನೀತಿಯನ್ವಯ ವರ್ಷಂಪ್ರತಿ ವಿದ್ಯಾರ್ಥಿಗೆ ಪ್ರಮಾಣಪತ್ರ ಹಾಗೂ ಶೈಕ್ಷಣಿಕ ಅರ್ಹತೆ ಲಭ್ಯವಾಗುತ್ತಾ ಸಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ವಿದ್ಯಾರ್ಥಿಗಳು ಸರಿಯಾದ ಆಯ್ಕೆಯನ್ನು ಮಾಡಿ ಅಧ್ಯಯನಕ್ಕೆ ತೊಡಗಿದಾಗ ಮಾತ್ರ ಯಶಸ್ಸು ಅವರದಾಗುವುದಕ್ಕೆ ಸಾಧ್ಯ. ಈ ಹಿಂದಿನ ಶಿಕ್ಷಣ ವ್ಯವಸ್ಥೆಯಲ್ಲಿದ್ದಂತಹ ತಪ್ಪುಗಳನ್ನು ನೂತನ ಶಿಕ್ಷಣ ನೀತಿ ಸರಿಪಡಿಸಲಿದೆ. ಅವರವರ ಆಸಕ್ತಿಗೆ ಅನುಗುಣವಾಗಿ ಶಿಕ್ಷಣವನ್ನು ಪಡೆದುಕೊಳ್ಳುವ ಸೌಲಭ್ಯ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ. ವಿದ್ಯಾರ್ಥಿಗಳೊಳಗಿನ ಚೇತನವನ್ನು ಮತ್ತಷ್ಟು ಬೆಳಗಿಸುವ ಕಾರ್ಯ ಶಿಕ್ಷಣ ಸಂಸ್ಥೆಗಳಿOದ, ಶಿಕ್ಷಣ ವ್ಯವಸ್ಥೆಗಳಿಂದ ಆಗಬೇಕಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ, ಬೋಧಕ ಮತ್ತು ಬೋಧಕೇತರ ವೃಂದ ಉಪಸ್ಥಿತರಿದ್ದರು. ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಪ್ರಸ್ತಾವಿಸಿ ಸ್ವಾಗತಿಸಿದರು. ಭೌತಶಾಸ್ತ ವಿಭಾಗದ ಮುಖ್ಯಸ್ಥ ಅಭಿಷೇಕ್ ಎನ್ ವಂದಿಸಿದರು. ಗಣಿತಶಾಸ್ತç ವಿಭಾಗದ ಮುಖ್ಯಸ್ಥ ಅಕ್ಷಯ್ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಡಾ.ಎಚ್.ಮಾಧವ ಭಟ್ ಅವರಿಂದ ಮಾಹಿತಿ ಕಾರ್ಯಾಗಾರ ನಡೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು