News Karnataka Kannada
Sunday, April 28 2024
ಕ್ಯಾಂಪಸ್

ರಾಷ್ಟ್ರೀಯ ಯುವ ಆಯೋಗ ಸ್ಥಾಪನೆಯಾಗಬೇಕು : ರೋಹಿತ್ ಕುಮಾರ್ ಸಿಂಗ್

New Project 2021 09 14t181820.323
Photo Credit :

ತುಮಕೂರು : ಯುವಕರ ಸಮಗ್ರ ಅಭಿವೃದ್ಧಿಗಾಗಿ ದೇಶದಲ್ಲಿ ರಾಷ್ಟ್ರೀಯ ಯುವ ಆಯೋಗ ಸ್ಥಾಪನೆಯಾಗಬೇಕಿದೆ ಎಂದು ಯುವಚೇತನ ನವದೆಹಲಿ ಇದರ ರಾಷ್ಟ್ರೀಯ ಸಂಚಾಲಕ ರೋಹಿತ್ ಕುಮಾರ್ ಸಿಂಗ್ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಯುವಕರ ಪಾತ್ರ’ ಕುರಿತು ಮಾತನಾಡಿದ ಅವರು, ನಾವು ಜಾತಿ, ವರ್ಗ, ವರ್ಣಗಳನ್ನು ಮೀರಿ ಬೆಳೆಯಬೇಕಿದೆ. ದೇಶವೇ ನಮ್ಮ ಮನೆ ಎಂದು ದುಡಿಯಬೇಕಿದೆ. ಈ ಪ್ರವೃತ್ತಿ ನಮ್ಮಲ್ಲಿ ಬೆಳೆದರೆ ಭಾರತ ವಿಶ್ವಗುರು ಆಗುವುದರಲ್ಲಿ ಅನುಮಾನವಿಲ್ಲ ಎಂದರು. ಭಾರತದ ಸ್ವಾತಂತ್ರ್ಯ ಚಳುವಳಿ, ನವನಿರ್ಮಾಣ ಚಳುವಳಿಯಲ್ಲಿ ಯುವಕರು ವಿಶೇಷ ಪಾತ್ರವಹಿಸಿದ್ದಾರೆ. ಅನೇಕ ವಿಧಗಳಲ್ಲಿ ದೇಶದ ಅಭಿವೃದ್ದಿಯಲ್ಲಿ ಪಾಲ್ಗೊಂಡಿದ್ದಾರೆ ಎಂದರು.

ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ. 65ರಷ್ಟು ಯುವಕರಿದ್ದಾರೆ. ದೇಶದ ಪ್ರಗತಿಯಲ್ಲಿ ಅವರ ಕೊಡುಗೆ ಅಪಾರ. ಕೋವಿಡ್‌ನ ಎರಡೂ ಅಲೆಗಳಲ್ಲಿ ವೈದ್ಯರು, ಪ್ಯಾರಾ ಮೆಡಿಕಲ್, ಪೋಲೀಸ್ ಇಲಾಖೆಯ ಯುವಕರು ದೇಶದ ಜನತೆಯ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಸ್ವಾಮಿ ಅಭಿಷೇಕ್ ಬ್ರಹ್ಮಾಚಾರಿಜೀ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮೊದಲು ಅಳವಡಿಸಿದ ರಾಜ್ಯ ಕರ್ನಾಟಕ, ಮೊದಲ ವಿಶ್ವವಿದ್ಯಾಲಯ ತುಮಕೂರು ವಿಶ್ವವಿದ್ಯಾನಿಲಯ ಎಂದು ಪ್ರಶಂಸಿಸಿದರು.

ಸ್ವಾಮಿ ವಿವೇಕಾನಂದ, ಭಗತ್‌ಸಿಂಗ್ ಮುಂತಾದ ಯುವಕರು ದೇಶಕ್ಕಾಗಿ ವಿಶೇಷ ಕೊಡುಗೆ ನೀಡಿದ್ದಾರೆ. ಪಾರಂಪರಿಕ ಸಾಂಸ್ಕೃತಿಕ ಚರಿತ್ರೆಯ ಹಿನ್ನೆಲೆಯಲ್ಲಿ ಭಾರತವನ್ನು ಕಟ್ಟಬೇಕಿದೆ ಎಂದು  ಹೇಳಿದರು.

ಅಧ್ಯಕ್ಷೀಯ ಭಾಷಣ ಮಾಡಿದ ತುಮಕೂರು ವಿವಿ ಕುಲಪತಿ ಕರ್ನಲ್ (ಪ್ರೊ) ವೈ.ಎಸ್. ಸಿದ್ದೇಗೌಡ, ರಾಷ್ಟ್ರೀಯ ಶಿಕ್ಷಣ ನೀತಿ ಮಕ್ಕಳಲ್ಲಿ ಹೊಸತನವನ್ನು ತಂದುಕೊಡುತ್ತದೆ. ಮಕ್ಕಳಲ್ಲಿ ಜ್ಞಾನದೊಂದಿಗೆ ಮೌಲ್ಯಗಳ ಅಳವಡಿಕೆ ಆಗಬೇಕಿದೆ. ಇಂದಿನ ಯುವಜನತೆ ಮಾರ್ಗದರ್ಶನವನ್ನು ಮಾತ್ರ ಬಯಸುತ್ತಾರೆ ಎಂದರು.

ಪ್ರೊ ಕೆ ಶಿವಚಿತ್ತಪ್ಪ, ಕುಲಸಚಿವರು, ತುಮಕೂರು ವಿಶ್ವವಿದ್ಯಾನಿಲಯ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಪ್ರೊ ಪಿ. ಪರಮಶಿವಯ್ಯ ವಂದನಾರ್ಪಣೆ ನೆರವೇರಿಸಿದರು. ಉಪ ಕುಲಸಚಿವ ಡಾ. ಸುರೇಶ್ ಡಿ. ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು