News Karnataka Kannada
Monday, April 29 2024
ಕ್ಯಾಂಪಸ್

ಯುದ್ಧಚರಿತ್ರೆಯ ಪಾಠಗಳ ಕಲಿಕೆ ಬಹುಮುಖ್ಯ: ಪ್ರೊ. ವೀರಭದ್ರಪ್ಪ

Film Festival
Photo Credit : News Kannada

ಶಂಕರಘಟ್ಟ : ಮಾನವ ಇತಿಹಾಸದಲ್ಲಿ ಯುದ್ಧಗಳ ಘಟಿಸುವಿಕೆ ಕೊನೆ ಮೊದಲೆನ್ನದೆ ನಡೆಯುತ್ತಿದ್ದು, ಅವುಗಳ ಅವಶ್ಯಕತೆ, ಹಾನಿ, ಪರಿಣಾಮಗಳ ಕುರಿತ ಅಧ್ಯಯನಿಸುವುದ ಭವಿಷ್ಯದ ಹಾದಿಯಕುರಿತು ಸ್ಪಷ್ಟತೆ ನೀಡಬಲ್ಲದ್ದುಎಂದು ಕುವೆಂಪು ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪಅಭಿಪ್ರಾಯಪಟ್ಟರು.

ಕುವೆಂಪು ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ವಿವಿಯ ಬಸವ ಸಭಾ ಭವನದಲ್ಲಿ ಮಾ. 28 ರಿಂದ ಏ. 01 ರ ವರೆಗೆ ಅಂತ್ಯವಿಲ್ಲದ ಯುದ್ಧ ವಿಷಯ ಕುರಿತು ಆಯೋಜಿಸಿರುವ ಸಹ್ಯಾದ್ರಿ ಸಿನಿಮೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. 12ನೇ ಸಹ್ಯಾದ್ರಿ ಸಿನಿಮೋತ್ಸವದಲ್ಲಿಅಂತ್ಯವಿಲ್ಲದಯುದ್ಧ ವಿಷಯಕುರಿತು ಚಲನಚಿತ್ರಗಳನ್ನು ಪ್ರದರ್ಶಿಸುತ್ತಿರುವುದು ಬಹಳ ಪ್ರಸ್ತುತವಾಗಿದೆ. ಎರಡು ಮಹಾಯುದ್ಧಗಳು ಘಟಿಸಿದ ನಂತರವೂ ನಿರಂತರವಾಗಿ ಯುದ್ಧಗಳು ಜರುಗುತ್ತಿರುವುದು ಮಾನವಚರಿತ್ರೆಯ ಪಾಠಕಲಿತಿಲ್ಲಎಂಬುದನ್ನು ಸಾರುತ್ತದೆಎಂದರು.

ದೇಶ-ದೇಶಗಳ ನಡುವೆ ರಾಷ್ಟ್ರೀಯತೆಗಾಗಿ, ಧರ್ಮಕ್ಕಾಗಿ, ಭಾಷೆ, ಸಮುದಾಯಗಳ ಮೇಲ್ಮೆಗಾಗಿ ಯುದ್ಧಗಳು ನಡೆಯುತ್ತಿವೆ. ಪರಿಣಾಮಗಳ ದೃಷ್ಟಿಯಿಂದ ಗಮನಿಸುವುದಾದರೆ, ಯುದ್ಧದಲ್ಲಿಗೆದ್ದದೇಶವು ಆರ್ಥಿಕವಾಗಿ, ನೈತಿಕವಾಗಿ ಸೋಲನುಭವಿಸಿರುತ್ತದೆ. ಅಂತ್ಯವಿಲ್ಲದ ಯುದ್ಧಗಳ ಕುರಿತ ಮಾಹಿತಿಯ ಮೂಲಕ ಮಾನವ ಸಮಾಜ ಪಾಠಕಲಿಯಬೇಕಿದ್ದು, ಚಲನಚಿತ್ರಗಳು ಅದರಒಂದು ಭಾಗವಾಗಿವೆ. ಈ ಅರಿವಿನ ಮೂಲಕ ಯುದ್ಧತಡೆದು, ಮಾನವೀಯತೆಯನ್ನು ವಿದ್ಯಾರ್ಥಿಗಳಾದ ನೀವು ಮೆರೆಸಬೇಕೆಂದುಕರೆ ನೀಡಿದರು.

12ನೇ ಸಿನಿಮೋತ್ಸವದಲ್ಲಿ ದಿ ಗ್ರೇಟ್‌ಡಿಕ್ಟೇಟರ್, ಲೈಫ್‌ಇಸ್ ಬ್ಯೂಟಿಫುಲ್, ಪ್ಲಟೂನ್, ಟರ್ಟಲ್ಸ್ಕೆನ್ ಫ್ಲೈ, ಮಂಗಲ್ ಪಾಂಡೆ ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ. ಉದ್ಘಾಟನಾ ಸಮಾರಂಭದಲ್ಲಿ ವಿಭಾಗದ ಅಧ್ಯಕ್ಷಡಾ. ಸತೀಶ್‌ಕುಮಾರ್, ಹಿರಿಯ ಪ್ರಾಧ್ಯಾಪಕಡಾ. ಪೂರ್ಣಾನಂದ ಡಿ. ಎಸ್., ಡಾ. ವರ್ಗೀಸ್, ಡಾ. ಸತೀಶ್‌ಕುಮಾರ ಹಾಜರಿದ್ದರು. ವಿವಿಯ ವಿವಿಧ ವಿಭಾಗಗಳ 500ಕ್ಕೂ ಅಧಿಕ ವಿದ್ಯಾರ್ಥಿಗಳು ಸಿನಿಮಾ ವೀಕ್ಷಣೆ ನೆರೆದಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು