ಮಂಗಳೂರು : ಹೊಸ ರಾಷ್ಟೀಯ ನೀತಿಯನ್ನು ಮಕ್ಕಳಲ್ಲಿ ಅಳವಡಿಸುವ ಉದ್ದೇಶದಿಂದ ಮಂಗಳೂರು ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದ
ಸ್ಡಸ್ತಿಕ ನ್ಯಾಷನಲ್ ಸ್ಕೂಲ್, ಉರ್ವಸ್ಟೋರ್, ಮಂಗಳೂರು, ಇದರ ಹೊಸ ಯೋಜನೆ (Start-Up) “ಸ್ವಸ್ತಿಕ ಡಿಜಿಟಲ್ ಮಾರ್ಕೆಟಿಂಗ್” ಸಂಸ್ಥೆಯ ಕಛೇರಿಯು ಡಿ.6 ರಂದು ಮಧ್ಯಾಹ್ನ 3 ಗಂಟೆಗೆ ಮಂಗಳೂರಿನ ಉರ್ವಸ್ಟೋರಿನ ಸ್ವಸ್ತಿಕ ನ್ಯಾಷನಲ್ ಸ್ಕೂಲ್ ನ ಆವರಣದಲ್ಲಿ ಉದ್ಘಾಟನೆಗೊಂಡಿತು.
ಈ ಸಂಸ್ಥೆಯನ್ನು ವಿದ್ಯಾರ್ಥಿಗಳೇ ನಡೆಸಲಿದ್ದು ಅವರಿಗೆ ಉದ್ಯಮಶೀಲತೆ ಗಳಿಸುವ ಮತ್ತು ಸ್ವ-ಉದ್ಯೋಗವನ್ನು ಅಭಿವೃದ್ಧಿಪಡಿಸುವ ಅವಕಾಶಗಳು ಸಿಗುತ್ತವೆ.
ಈ ಸಂಸ್ಥೆಯ ಕಚೇರಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ ಪಿ ಸುಬ್ರಮಣ್ಯ ಯಡಪಡಿತ್ತಾಯ ಉದ್ಘಾಟಿಸಿ, ಹೊಸ ಶಿಕ್ಷಣ ಯೋಜನೆಯನ್ನು ಅನುಷ್ಟಾನಕ್ಕೆ ತರುವಲ್ಲಿ ಈ ಶಿಕ್ಷಣ ಸಂಸ್ಥೆ ಮುಂಚೂಣಿಯಲ್ಲಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಈ ಕಾಲೇಜು ಹೊಸ ಶಿಕ್ಷಣ ನೀತಿಯನ್ನು ಮೊದಲು ಅನುಷ್ಟಾನಕ್ಕೆ ತಂದ ಬಗ್ಗೆ ಶ್ಲಾಘಿಸಿದರು.
ಗೌರವ ಅತಿಥಿಗಳಾದ ಆರ್ ಡಿ ಕಿಣಿಯವರು ಮಾತನಾಡುತ್ತಾ ಅವಕಾಶಗಳು ಎಲ್ಲೆಲ್ಲೂ ಇದೆ, ಆದರೆ ಅದನ್ನು ಸರಿಯಾದ ರೀತಿಯಲ್ಲಿ ಬಳಸಲು ವಿದ್ಯಾರ್ಥಿಗಳು ಶ್ರಮಿಸಬೇಕು. ಈ ಕಾಲೇಜು ಇಂಥಹ ಅವಕಾಶಗಳನ್ನು ಬಳಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿ ಕೊಟ್ಟಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಶ್ರೀ ನೆರಿಯ ರಾಧಾಕೃಷ್ಣ ಹೆಬ್ಬಾರರನ್ನು ಸ್ವಸ್ತಿಕ ಡಿಜಿಟಲ್ ಮಾರ್ಕೆಟಿಂಗ್ ಕಛೇರಿಗೆ ಅವರು ನೀಡಿರುವ ಅನುಧಾನಕ್ಕಾಗಿ ಸನ್ಮಾನಿಸಲಾಯಿತು. ಗ್ರಾಹಕರ ಒಳಿತನ್ನು ಅರಿತು ವ್ಯಾಪಾರ ಮಡಬೇಕಾದುದು ವ್ಯಾಪಾರಿಯ ಮನೋಧರ್ಮ ಸೇವೆ ಮುಖ್ಯ ಹೊರತು ಹಣ ಮುಖ್ಯವಲ್ಲ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷರಾದ ಡಾ ರಾಘವೇಂದ್ರ ಹೊಳ್ಳರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅತಿಥಿಗಳಿಗೆ ಕೃತಜ್ಙತೆ ಸಲ್ಲಿಸಿದರು. ಸಂಸ್ಥೆಯ ಪ್ರಾಂಶುಪಾಲೆ ಡಾ ಮಾಲಿನಿ ಹೆಬ್ಬಾರ್ ಅತಿಥಿಗಳನ್ನು ಸ್ವಾಗತಿಸಿದರು. ಡಿಜಿಟಲ್ ಮಾರ್ಕೆಟಿಂಗ್ ನ ವಿದ್ಯಾರ್ಥಿ ವ್ಯವಸ್ಥಾಪಕನಾದ ವರುಣ್ ಪ್ರಭು ಅವರು ಪ್ರಾಸ್ಥಾವಿಕ ಭಾಷಣ ಮಾಡಿದರು. ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಪೂಜಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಹರ್ಷಿತಾ ವಂದಿಸಿದರು.