ಮಂಗಳೂರು :ಮಂಗಳಾ ಶಿಕ್ಷಣ ಸಮೂಹ ಸಂಸ್ಥೆಗಳ ವತಿಯಿಂದ ಮಂಗಳ ಕಾಲೇಜಿನಲ್ಲಿ ಕಲಿತ ಮಕ್ಕಳಿಗೆ ಪದಗ್ರಹಣ ಕಾರ್ಯಕ್ರಮ ಮತ್ತು ವಾರ್ಷಿಕೋತ್ಸವದ ದಿನವನ್ನು ಆಚರಿಸಲಾಯಿತು .
ಮಂಗಳೂರು ಹೊರವಲಯದ ನೀರುಮಾರ್ಗ ಬಳಿಯಿರುವ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು .ಈ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಕರ್ನಾಟಕ ಸರಕಾರ ,ಪದ್ಮಶ್ರೀ ಲಾಮಾ ಥುಪ್ಟನ್ ಫುನ್ಸ್ಕೋಕ್ ,ಇಫ್ತಿಕರ್ ಆಲಿ , ಡಾಕ್ಟರ್ ಗಣಪತಿ , ಪ್ರೊಫೆಸರ್ ಭರತ್ ಕೆ ಎಚ್ ,ಪಿ ರಾಜೇಶ್ ಮಳಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು .
ಈ ಪದಗ್ರಹಣ ಕಾರ್ಯಕ್ರಮವನ್ನು ನೆರದ ಅತಿಥಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು .ಬಳಿಕ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು .ಬಳಿಕ ಪದ್ಮಶ್ರೀ ಲಾಮಾ ಥುಪ್ಟನ್ ಫುನ್ಸ್ಕೋಕ್ ಇವರನ್ನ ಸಮಾಜಸೇವೆಯ ಕಾರ್ಯಕ್ಕೆ ಅಭಿನಂದಿಸಲಾಯಿತು .
ಬಳಿಕ ಶಿಕ್ಷಣ ಸಂಸ್ಥೆಯ ವತಿಯಿಂದ ಎರಡುಲಕ್ಷ ಐವತ್ತು ಸಾವಿರ ರುಪಾಯ್ಯ ಚೆಕ್ಕನ್ನು ನೀಡಲಾಯಿತ್ತು ,ಬಳಿಕ ಕರ್ನಾಟಕ ಸರಕಾರದ ಸ್ಪೀಕರರ ವಿಶ್ವೇಶರ ಹೆಗಡೆ ಕಾಗೇರಿಯನ್ನ ಕೂಡ ಅಭಿನಂದಿಸಲಾಯಿತು ಬಳಿಕ ಸಭೆಯನ್ನು ಉದ್ದೇಶಿಸಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಾತನಾಡಿದರು