News Karnataka Kannada
Monday, April 29 2024
ಕ್ಯಾಂಪಸ್

ಎಂಥದ್ದೇ ಸವಾಲು ಎದುರಿಸಲು ಭಾರತ ಸನ್ನದ್ಧ: ಡಾ.ನಾಗಭೂಷಣ

College
Photo Credit : News Kannada

ಶಿವಮೊಗ್ಗ:  ಸ್ವಾತಂತ್ರ್ಯೋತ್ಸದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುವ ನಮ್ಮ ದೇಶದ ಎದುರು ಇರುವ ಸವಾಲುಗಳನ್ನು ಸಮರ್ಥ ರೀತಿಯಲ್ಲಿ ಎದುರಿಸುವ ಶಕ್ತಿ ಪಡೆದುಕೊಂಡಿದೆ ಎಂದು ಕಮಲಾ ನೆಹರು ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಡಾ.ಎಚ್.ಎಸ್.ನಾಗಭೂಷಣ ಹೇಳಿದರು.
ಅವರು ತಮ್ಮ ಕಾಲೇಜಿನಲ್ಲಿ ಇಂದು ರಾಷ್ಟ್ರೀಯ ಸೇವಾ ಯೋಜನೆ, ಸಾಂಸ್ಕೃತಿಕ ಸಂಘ, ಕ್ರೀಡಾ ವಿಭಾಗ, ರೇಂಜರ್ಸಗಳು ಸಂಯುಕ್ತವಾಗಿ ಆಯೋಜಿಸಿದ್ದ ಭಾರತ ಸ್ವಾತಂತ್ರö್ಯ ಅಮೃತ ಮಹೋತ್ಸವದ ೭೩ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ಮಾಡಿ ಮಾತನಾಡುತ್ತಿದ್ದರು.

ಭಾರತ ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ದೇಶ. ಸಂವಿಧಾನ ಬಂದು ೭೩ ವರ್ಷಗಳು ಕಳೆದಿವೆ. ಅನೇಕ ಭಾಷೆ, ಜಾತಿ, ಸಮುದಾಯಗಳಿರುವಂಥಹ ದೇಶ. ಸಾಕಷ್ಟು ಸವಾಲುಗಳು ನಮ್ಮೆದುರಿಗಿವೆ. ಆದರೂ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಮತ್ತಿತರ ಕ್ಷೇತ್ರಗಳಲ್ಲಿ ಇಡೀ ಪ್ರಪಂಚವೇ ನಮ್ಮತ್ತ ಮುಖ ಮಾಡಿ ಗುರುತಿಸುವಂಥಹ ಕೆಲಸಗಳು ನಡೆಯುತ್ತಿರುವುದು ಸಂತಸಕರ ಸಂಗತಿ ಎಂದು ಅವರು ಭಾರತದ ಸಾಧನೆಯನ್ನು ಬಣ್ಣಿಸಿದರು.
ರಾಷ್ಟಿçÃಯ ಹಬ್ಬಗಳಾದ  ಸ್ವಾತಂತ್ರ್ಯೋತ್ಸ ಮತ್ತು ಗಣರಾಜ್ಯೋತ್ಸವಗಳನ್ನು ಸುಪ್ರೀಂ ಕೋರ್ಟ ಹೇಳಿದೆ ಎಂಬ ಕಾರಣಕ್ಕಾಗಿ ಆಚರಿಸದೆ ಇದು ನಾವು ನಮ್ಮ ದೇಶಕ್ಕೆ ಸಲ್ಲಿಸುವ ಗೌರವ ಎಂದು ತಿಳಿದು ಸಂಭ್ರಮೋತ್ಸಾಹಗಳಿಂದ ಆಚರಿಸಬೇಕು ಎಂದು ಯುವ ಸಮೂಹಕ್ಕೆ ಕಿವಿ ಮಾತು ಹೇಳಿದರು.
ಶಿವಮೊಗ್ಗದವರೇ ಆದ ಗಮಕ ಕಲಾವಿದರಾದ ಹೊಸಳ್ಳಿ ಎಚ್.ಆರ್.ಕೇಶವಮೂರ್ತಿ ಅವರು ಭಾರತ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಕಾಲೇಜಿನ ವತಿಯಿಂದ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.

ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿಗಳಾದ ಡಾ.ಬಾಲಕೃಷ್ಣ ಹೆಗಡೆ, ಶ್ರೀಮತಿ ದೀಪಿಕಾ ವಿ., ಉಪನ್ಯಾಸಕರಾದ ಆರಡಿ ಮಲ್ಲಯ್ಯ, ಎನ್.ಡಿ.ರಮೇಶ್, ವಿದ್ಯಾಶ್ರೀ ಬಿ.ಕೆ., ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು