ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಮದ್ಯ ವಾರ್ಷಿಕ ಪರೀಕ್ಷೆ-೨೦೨೧ರ ಮರು ವಿನ್ಯಾಸದ ಸುತ್ತೋಲೆ ಹೊರಡಿಸಿದ್ದು, ಅದರ ಪ್ರಕಾರ ಈಗ ನಡೆಯುವ ಮದ್ಯವಾರ್ಷಿಕ ಪರೀಕ್ಷೆಯನ್ನು ರಾಜ್ಯ ಬೋರ್ಡ್ ಪರೀಕ್ಷೇಯಾಗಿ ನಡೆಸಲಾಗುವುದು. ಈ ನೀತಿ ಪ್ರಕಾರ ಪ್ರಶ್ನೆ ಪತ್ರಿಕೆಗಳು ಕೇಂದ್ರ ಕಛೇರಿಯಿಂದ ಬರುತ್ತದೆ ಎನ್ನಲಾಗಿದೆ.
ನವೆಂಬರ್ ೨೯ರಂದು ಯಾವುದೇ ಪೂರ್ವ ಸೂಚನೆ ಇಲ್ಲದೆ ನಡೆಯಲಿರುವ ಈ ಪರೀಕ್ಷೆಗೆ ವಿದ್ಯಾರ್ಥಿಗಳು ಎದುರಿಸಲು ಸಿದ್ಧರಾಗಬೇಕಾಗಿದೆ. ಆದ್ದರಿಂದ ಈ ಹಠಾತ್ ಹೇರಿಕೆ ಹಿಂಪಡೆಯಲು ರಾಜ್ಯದ ವಿದ್ಯಾರ್ಥಿಗಳು, ಪೋಷಕರು ಉಪನ್ಯಾಸಕರು ಮನವಿ ಸಲ್ಲಿಸಿದ್ದಾರೆ.
ಕೊವೀಡ್ ಸಾಂಕ್ರಾಮಿಕದ ಹಿನ್ನೆಲೆ, ಪ್ರಸ್ತುತ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ಬಡ್ತಿ ಹೊಂದಿದ್ದರಿಂದ ಈ ವಿದ್ಯಾರ್ಥಿಗಳಿಗೆ ಕಲಿಕಾ ಪ್ರಕ್ರೀಯೆ ಹಾಗೂ ಕಲಿಕಾ ವಿಧಾನ ಸ್ವಲ್ಪ ಮಟ್ಟಿಗೆ ನಿಧಾನವಾಗಿದೆ ಆದ್ದರಿಂದ ಪರೀಕ್ಷೆಗೆ ಸಜ್ಜಾಗಲು ಹೆಚ್ಚಿನ ಸಮಯ ಅಗತ್ಯವಿದೆ.
ದ್ವಿತೀಯ ಪಿಯುಸಿ ವೇಳಾ ಪಟ್ಟಿ ಪ್ರಕಾರ, ಪತ್ರೀ ವರ್ಷ ಮೇ ೩ನೇ ವಾರ ತರಗತಿಗಳು ಆರಂಭವಾಗಿ, ಮಾಚ್ ಮೂರನೇ ವಾರಕ್ಕೆ ಪರೀಕ್ಷೆ ನಡೆಯುತ್ತದೆ. ಆದರೆ ಈಗ ಕೋವಿಡ್ ಹಿನ್ನೆಲೆ ತರಗತಿಗಳು ಆಗಸ್ಟ್ ತಿಂಗಳ ೩ನೇ ವಾರಕ್ಕೆ ಆರಂಭವಾಗಿದ್ದು, ಏಪ್ರಿಲ್ಗೆ ಅಂತಿಮ ಪರೀಕ್ಷೆಗಳು ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಹಾಗೂ ಪೋಷಕರಿಗೂ ಆತಂಕ ಸೃಷ್ಟಿಯಾಗಿದೆ.
ಈ ಹಠಾತ್ ನಿರ್ಧಾರದ ಬಗ್ಗೆ ಪಿಯುಸಿ ಮಂಡಳಿ ಮೊದಲೆ ತಿಳಿಸದೆ ಜಾರಿಮಾಡುವುದರಿಂದ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪಡಿಣಾಮ ಬೀರಲು ಕಾರಣವಾಗಬಹುದಾಗಿದೆ.