ಬಂಟ್ವಾಳ : ವಿದ್ಯಾರ್ಥಿಗಳಿಗೆ ಅಪರಾಧ ಪ್ರಜ್ಞೆ ಕಾನೂನು ಎಚ್ಚರ ಅಗತ್ಯ ಇದೆ ಎಂದು ಕೆ ಎಸ್ ಆರ್ ಪಿ ಇನ್ಸ್ ಪೆಕ್ಟರ್ ಹಾಗೂ ಸ್ಟೂಡೆಂಟ್ ಪೋಲೀಸ್ ಕೆಡೆಟ್ ಇದರ ನೋಡೆಲ್ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಹೇಳಿದರು.
ಅವರು ಕೊಲ್ನಾಡು ಮಂಚಿ ಸರಕಾರಿ ಪ್ರೌಢಶಾಲೆಯಲ್ಲಿ ಸ್ಟೂಡೆಂಟ್ ಪೋಲೀಸ್ ಕೆಡೆಟ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಜಿಲ್ಲೆಯ ಕೆಲವೇ ಶಾಲೆಯ ವಿದ್ಯಾರ್ಥಿಗಳಿಗೆ ಈ ಉತ್ತಮ ಅವಕಾಶ ದೊರಕಿದ್ದು ಪೋಲೀಸ್ ಕರ್ತವ್ಯಗಳ ಬಗ್ಗೆ ತಿಳಿದುಕೊಂಡು ಸಮಾಜದಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತದೆ. ಭವಿಷ್ಯ ರೂಪಿಸಲೂ ಮಾರ್ಗದರ್ಶನ ಸಿಕ್ಕಂತಾಗುತ್ತದೆ ಎಂದು ಅವರು ಹೇಳಿದರು.
ಸ್ಟೂಡೆಂಟ್ ಪೋಲೀಸ್ ಕೆಡೆಟ್ ಗಳನ್ನು ವಿವಿಧ ಪೋಲೀಸ್ ಠಾಣೆ. ಅಗ್ನಿಶಾಮಕ ದಳ, ಬಾಲಮಂದಿರ ಸಂಚಾರಿ ಪೋಲೀಸ್ ಠಾಣೆಗಳಿಗೆ ಕರೆದೊಯ್ದು ಅಲ್ಲಿನ ಚಟುವಟಿಕೆಗಳ ಮಾಹಿತಿ ಪರಿಚಯಗಳನ್ನು ಈ ಶೈಕ್ಷಣಿಕ ವರುಷದಲ್ಲಿ ಮಾಡಲಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಶೀಲಾ ತಿಳಿಸಿದರು
ತರಬೇತುದಾರರಾದ ಶ್ರೀಧರ್ . ಶಾಲಾ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಪ್ರವೀಣ್ ಕೊಟ್ಟಾರಿ ಸದಸ್ಯರಾದ ನಾರಾಯಣ ಖ೦ಡಿಗ, ಶಾಲೆಯ ಸ್ಟೂಡೆಂಟ್ ಪೊಲೀಸ್ ಕೆಡೆಟ್ ನೋಡಲ್ ಶಿಕ್ಷಕರಾದ ರಾಜೇಶ್ ಹಾಗೂ ಶ್ರೀಮತಿ ವಿಜಯಲಕ್ಷ್ಮಿ ಉಪಸ್ಥಿತರಿದ್ದರು. ಶಿಕ್ಷಕ ವಾಝ್ ಮೊಂತೆರೋ ನಿರೂಪಿಸಿದರು.