News Karnataka Kannada
Monday, May 06 2024
ಕ್ಯಾಂಪಸ್

ಎಕ್ಸೆಲೆಂಟ್ ಸಂಸ್ಥೆಯಲ್ಲಿ ತಾರ್ಕಿಕ ಚಿಂತನೆಗೆ ದೊಡ್ಡ ಅವಕಾಶ: ಮುಖ್ಯಮಂತ್ರಿ ಬೊಮ್ಮಾಯಿ

Untitled 114
Photo Credit : News Kannada

ಮಂಗಳೂರು: ಎಕ್ಸೆಲೆಂಟ್ ಸಂಸ್ಥೆಯಲ್ಲಿ ತಾರ್ಕಿಕ ಚಿಂತನೆಗೆ ದೊಡ್ಡ ಅವಕಾಶವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮೂಡಬಿದ್ರಿಯ ಇನ್ನೋವೇಟಿವ್ ಲರ್ನಿಂಗ್ ಫೌಂಡೇಶನ್ (ರಿ ) ಅವರು ನಡೆಸುತ್ತಿರುವ, ಎಕ್ಸಲೆಂಟ್ ಕಾಲೇಜಿನಲ್ಲಿ ನಿರ್ಮಿಸಿರುವ ಅನ್ನದಾಸೋಹ ಕಟ್ಟಡವನ್ನು ಹಾಗೂ ಶಿಕ್ಷಣ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಏಪ್ರಿಲ್ 27 ಬುಧವಾರ ಉದ್ಘಾಟಿಸಿ ಮಾತನಾಡಿದರು. ಒಮ್ಮೆ ವಿದ್ಯಾರ್ಥಿಯಾದರೆ ಸಾಯುವವರೆಗೂ ವಿದ್ಯಾರ್ಥಿಗಳೇ. ನಿರಂತರವಾಗಿ ಕಲಿಯಬೇಕು. ಶಾಲೆಗಳಲ್ಲಿ ಮೊದಲು ಪಾಠ ನಂತರ ಪರೀಕ್ಷೆ ಇದ್ದರೆ, ಬದುಕಿನಲ್ಲಿ ಪಾಠ, ವೇಳಾಪಟ್ಟಿ, ಪಠ್ಯಕ್ರಮವಿರುವುದಿಲ್ಲ. ಜೀವನದ ಪರೀಕ್ಷೆಗಳಿಂದ ಪಾಠ ಕಲಿಯಲು ಸಿದ್ದರಾಗಬೇಕು. ಯಾಕೆ, ಏನು, ಎಲ್ಲಿ ಎನ್ನುವ ಪ್ರಶ್ನೆಗಳು ತಾರ್ಕಿಕವಾಗಿ ಚಿಂತಿಸುವ ಶಕ್ತಿ ಬೆಳೆಸುತ್ತದೆ. ಪ್ರಶ್ನೆಗಳನ್ನು ಹಾಕಿಕೊಂಡು ಜ್ಞಾನಾರ್ಜನೆ ಮಾಡಬೇಕು ಎಂದರು. ಜ್ಞಾನದ ಯುಗದಲ್ಲಿ ಉತ್ತಮವಾಗಿ ಜ್ಞಾನ ಪಡೆದು ಯಶಸ್ವಿಯಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಎಕ್ಸೆಲೆಂಟ್ ಸಂಸ್ಥೆಯನ್ನು ನೋಡಿ ಬೆರಗಾಗಿದ್ದೇನೆ. ಗುರುಕುಲವನ್ನು ಇಷ್ಟು ಅಂದವಾಗಿ ನಿರ್ಮಿಸಿರುವುದು ಅತ್ಯಂತ ದೊಡ್ಡ ಸಾಧನೆ. ಗುರುವಾಗಿ ಕೆಲವು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿಸುವ ಧ್ಯೇಯದಿಂದ ಉತ್ತಮ ವಾತಾವರಣವನ್ನು ನಿರ್ಮಿಸಿದ್ದಾರೆ ಎಂದರು.

ಜೈನ ಸಂಸ್ಕ್ರುತಿ ಅತ್ಯಂತ ಶ್ರೇಷ್ಠವಾದ ಧಾರ್ಮಿಕ ಸಂಸ್ಕ್ರುತಿ ಜೈನರದ್ದು. ತ್ಯಾಗ ಮತ್ತು ಅಹಿಂಸೆ ಇವೆರಡೂ ಮನುಷ್ಯನಿಗೆ ಇರಬೇಕಾಗಿರುವ ನಿಜವಾದ ಗುಣಧರ್ಮಗಳು. ಆದರೆ ನಾವು ಇವೆಲ್ಲವನ್ನೂ ಬಿಟ್ಟು ಬದುಕುವ ಪ್ರಯತ್ನ ಮಾಡುತ್ತೇವೆ. ಈ ಮೂಲಕ್ಕೆ ನಮ್ಮನ್ನು ಸೆಳೆಯುವ ಸಂಸ್ಕೃತಿ ಜೈನ ಧರ್ಮ. ಯಾವುದನ್ನು ಪಡೆಯಲು ಸಾಧ್ಯವಿಲ್ಲವೋ ಅದನ್ನು ದಾನವಾಗಿ ಕೊಡುವುದು ತ್ಯಾಗ. ಎಕ್ಸೆಲೆಂಟ್ ಸಂಸ್ಥಾಪಕರದ ಯುವರಾಜ್ ಜೈನ್ ಅವರ ಬಳಿ ಜ್ಞಾನವಿತ್ತು. ಅವರಿಂದ ನೀವು ಅದನ್ನು ಪಡೆಯಲು ಸಾಧ್ಯವಿಲ್ಲ. ಅವರು ಕೊಟ್ಟಾಗ ಮಾತ್ರ ಆ ಜ್ಞಾನ ನಿಮಗೆ ಸಿಗುತ್ತದೆ. ಯುವರಾಜ್ ಮತ್ತು ಅವರ ಶ್ರೀಮತಿ ರಶ್ಮಿಕಾ ಜೈನ್ ವಿದ್ಯಾದಾನವನ್ನು ಮಾಡಿದ್ದಾರೆ. ಅವರ ಇಡೀ ಜೀವನವನ್ನೇ, ಸಮಯ, ಶಕ್ತಿ, ಹಣ, ವಿಚಾರವನ್ನು ತ್ಯಾಗವಾಗಿ ಧಾರೆ ಎರೆದಿದ್ದಾರೆ. ಸರ್ವಸ್ವವನ್ನೂ ತ್ಯಾಗ ಮಾಡಿದ ಮಹಾವೀರರ ಸಂಸ್ಕೃತಿಯಲ್ಲಿ ಬೆಳೆಯುತ್ತಿರುವುದು ಸಂತೋಷದ ಸಂಗತಿ ಎಂದರು.

ದಶಮಾನೋತ್ಸವ ಸಂಭ್ರಮದ ಸಂದರ್ಭದಲ್ಲಿ ‘ಸಂತೃಪ್ತಿ ಸರ್ವ- ರಕ್ಷ’ ಭೋಜನಾಲಯದ ಕಟ್ಟಡವನ್ನು ಸ್ಥಾಪಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇಂಧನ ಸಚಿವ ವಿ.ಸುನೀಲ್ ಕುಮಾರ್, ಮೂಡಬಿದ್ರಿ ಶಾಸಕ ಉಮಾನಾಥ ಕೋಟ್ಯಾನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಟ್ಟಾರು ರತ್ನಾಕರ ಹೆಗ್ಡೆ, ಉಪಆಯುಕ್ತರಾದ ಡಾ.ರಾಜೇಂದ್ರ ಕೆ.ವಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಹಾಗೂ ಎಕ್ಸಲೆಂಟ್ ಸಂಸ್ಥೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮೂಡಬಿದಿರೆಯ ಹೆಲಿಪ್ಯಾಡ್‌ಗೆ ಆಗಮಿಸಿದ ಮುಖ್ಯಮಂತ್ರಿ ಅವರನ್ನು ಇಂಧನ ಸಚಿವ ವಿ.ಸುನೀಲ್‌ಕುಮಾರ್ ಸ್ವಾಗತಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು