ಸಿರಾ: ಕೌಶಲ್ಯದ ಅಭಿವೃದ್ದಿಯೇ ನಿರುದ್ಯೋಗ ನಿರ್ಮೂಲನದ ಅಸ್ತ್ರ. ಕೌಶಲ್ಯ ಅಭಿವೃದ್ಧಿ ಕೇಂದ್ರ ಎಲ್ಲೆಡೆ ತೆರೆಯಬೇಕು ಎಂದು ಚಿತ್ರದುರ್ಗದ ಶಿವಶರಣ ಮಾದಾರ ಗುರುಪೀಠದ ಸ್ವಾಮೀಜಿ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ತುಮಕೂರು ವಿವಿಯ ಸಿರಾ ಸ್ನಾತಕೋತ್ತರ ಕೇಂದ್ರ ಹಾಗೂ ಕನಕ ಜಯಂತಿಯನ್ನು ಸೋಮವಾರ ಉದ್ಘಾಟಿಸಿ ಮಾತಾನಾಡಿದ ಅವರು ಸವಲತ್ತುಗಳ ಹಾಗೂ ಉದ್ಯೋಗಗಳ ಕೊರತೆಯಿಂದ ಗ್ರಾಮೀಣ ಯುವಕರು ನಗರಗಳಿಗೆ ಗುಳೇ ಹೋಗುತ್ತಿದ್ದಾರೆ. ಪಿಎಚ್ಡಿ ಮಾಡಿಯೂ ಉದ್ಯೋಗ ಸಿಗದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಎಲ್ಲಕ್ಕೂ ಕೌಶಲ್ಯಗಳ ಕೊರತೆಯೇ ಕಾರಣ ಎಂದರು.
ಕಾಲೇಜು ಎಂಬುದು ಜ್ಞಾನದೇಗುಲವಿದ್ದಂತೆ, ಈ ವಿಭಾಗದ ಸದ್ಬಳಕೆ ಮಾಡಿಕೊಳ್ಳಿ. ನಿಮ್ಮ ಗುರಿಯೆಡೆಗೆ ನಿಮ್ಮ ದೃಷ್ಟಿಯಿರಬೇಕು ಎಂದರು. ಜಾತಿ-ಧರ್ಮದ ಎಲ್ಲೆಯನ್ನು ಮೀರಿದವರು ಕನಕದಾಸರು. ಅವರನ್ನು ಕೇವಲ ಒಂದೇ ಜಾತಿಗೆ ಮೀಸಲು ಮಾಡುವುದು ಬೇಡ. ಅವರ ಆದರ್ಶಗಳನ್ನು ಪಾಲಿಸೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿ.ವಿ ಕುಲಪತಿ ಕರ್ನಲ್(ಪ್ರೊ.) ವೈ.ಎಸ್. ಸಿದ್ದೇಗೌಡ ಮಾತಾನಾಡಿ ಸಮಗ್ರ ಭಾರತದ ಪ್ರಗತಿಗೆ ಶಿಕ್ಷಣ ಅಗತ್ಯ. ಗುಣಾತ್ಮಕ ಶಿಕ್ಷಣವೇ ಮುಖ್ಯ. ತುಮಕೂರು ವಿವಿಯ ಸಿರಾ ಕೇಂದ್ರ ಆರಂಭವಾಗುವುದರೊAದಿಗೆ ಉನ್ನತ ಶಿಕ್ಷಣ ಎಲ್ಲೆಡೆ-ಎಲ್ಲರಿಗಾಗಿ ಎಂಬ ತುಮಕೂರು ವಿವಿಯ ಘೋಷಣೆ ನಿಜವಾಗಿದೆ ಎಂದರು.
ಜ್ಞಾನವೆಂಬುದು ಪ್ರತಿದಿನ ವೃದ್ಧಿಯಾಗುತ್ತಿರಬೇಕು. ಸಂಕಲ್ಪರಹಿತ ಜೀವನ ಸಾರ್ಥಕ ಬದುಕು ನೀಡುವುದಿಲ್ಲ. ನಾವು ಸಮಸ್ಯೆಗಳನ್ನು ಎದುರಿಸಬೇಕೇ ಹೊರತು ಹೆದರಬಾರದು. ಮೌಲ್ಯದ ಆಧಾರದ ಮೇಲೆ ರಾಷ್ಟಿçÃಯ ಶಿಕ್ಷಣ ನೀತಿ ನಡೆಯಲಿದೆ ಎಂದರು.
ತುಮಕೂರು ವಿ.ವಿ ಕುಲಸಚಿವ ಪ್ರೊ. ಕೆ. ಶಿವಚಿತ್ತಪ್ಪ ಸ್ವಾಗತಿಸಿದರು. ಸಿಂಡಿಕೇಟ್ ಸದಸ್ಯ ಹಾಗೂ ಸಿರಾ ಸ್ನಾತಕೋತ್ತರ ಕೇಂದ್ರ ಉದ್ಘಾಟನಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಆರ್.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಸಿರಾ ಭಾಗದ ಜನತೆಯ ಬಹುದಿನಗಳ ಕನಸು ನನಸಾಗಿದೆ ಎಂದರು. ಕೇಂದ್ರದ ಸಂಯೋಜಕ ಡಾ. ಎಚ್. ಎಸ್. ಬೋರೇಗೌಡ ವಂದಿಸಿದರು. ಉಪಕುಲಸಚಿವರಾದ ಡಾ. ಎಂ. ಮಂಗಳಾಗೌರಿ ಪ್ರಾರ್ಥಿಸಿದರು. ಪತ್ರಿಕೋದ್ಯಮ ಸಹಾಯಕ ಪ್ರಾಧ್ಯಾಪಕ ಡಾ. ಸಿಬಂತಿ ಪದ್ಮನಾಭ ನಿರೂಪಿಸಿದರು.