ಗ್ಲಾಸ್ಗೋ: ಖಲಿಸ್ತಾನಿ ಉಗ್ರರು ಭಾರತೀಯ ರಾಯಭಾರಿಯನ್ನು ಗುರುದ್ವಾರ ಪ್ರವೇಶಿಸದಂತೆ ತಡೆಯೊಡ್ಡಿದ ಘಟನೆ ಶನಿವಾರ ಗ್ಲಾಸೋದಲ್ಲಿ ನಡೆದಿತ್ತು. ಇಂದು ಗುರುದ್ವಾರ ಸಮಿತಿ ಈ ಘಟನೆ ಖಂಡಿಸಿ ಹೇಳಿಕೆ ನೀಡಿದ್ದು, ಗುರುದ್ವಾರ ಎಲ್ಲ ಸಮುದಾಯದ ಜನರಿಗೂ ಪ್ರವೇಶಕ್ಕೆ ಮುಕ್ತವಾಗಿದೆ ಎಂದು ಹೇಳಿದೆ.
ಸೆಪ್ಟೆಂಬರ್ 29ರಂದು ಭಾರತೀಯ ಹೈಕಮಿಷನರ್ ಗ್ಲಾಸೋದ ಗುರುದ್ವಾರಕ್ಕೆ ವೈಯಕ್ತಿಕ ಕಾರಣಗಳಿಂದ ಭೇಟಿ ನೀಡುವವರಿದ್ದರು. ಈ ವೇಳೆ ಕೆಲ ಅಪರಿಚಿತ ವ್ಯಕ್ತಿಗಳು ಅವರನ್ನು ಕಾರಿನಿಂದ ಇಳಿಯದಂತೆ ತಡೆಯೊಡ್ಡಿದರು ಎಂದು ಎಂದು ಗ್ಲಾಸ್ಗೋ ಗುರುದ್ವಾರ ಗುರು ಗ್ರಂಥ ಸಾಹಿಬ್ ಸಿಖ್ ಸಭಾದ ಹೇಳಿಕೆ ತಿಳಿಸಿದೆ.
ಭಾರತೀಯ ರಾಯಭಾರಿ ಕಾರಿನಲ್ಲಿ ಮರಳಿದ ನಂತರವೂ ಆಕ್ರಮಣಕಾರಿ ವರ್ತನೆಯನ್ನು ಮುಂದುವರಿಸಿದರು. ಸಿಖ್ ಆರಾಧನಾ ಸ್ಥಳದಲ್ಲಿ ಅಶಾಂತಿ ಉಂಟುಮಾಡುವ ವರ್ತನೆಯನ್ನು ಖಂಡಿಸುತ್ತದೆ ಸಭಾ ಖಂಡಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.