ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಆರ್ಎಸ್ಎಸ್ಗೆ ಹಿಂತಿರುಗಿ ನೋಡುವ ಅಭ್ಯಾಸವಿದೆ. ಅವರು ಎಂದಿಗೂ ಭವಿಷ್ಯದ ಬಗ್ಗೆ ಯೋಚಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಒಡಿಶಾದ ಬಾಲಸೋರ್ ರೈಲು ದುರಂತದ ಬಗ್ಗೆ ಬಿಜೆಪಿ ಸರ್ಕಾರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಸಚಿವರು ಅಧಿಕಾರದಲ್ಲಿರುತ್ತಿದ್ದರೆ, ಅಪಘಾತದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದರು ಎಂದು ಹೇಳಿದರು.
ಜಾವಿಟ್ಸ್ ಸೆಂಟರ್ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ರೈಲು ಅಪಘಾತ ಏಕೆ ಸಂಭವಿಸಿದೆ ಎಂದು ಬಿಜೆಪಿಯವರನ್ನು ಕೇಳಿ. ಇದು ಕಾಂಗ್ರೆಸ್ನ ಅವಧಿಯಲ್ಲೂ ನಡೆದಿದೆ ಎಂದು ಅವರು ಹೇಳುತ್ತಾರೆ. ಅದಕ್ಕಾಗಿಯೇ ನಾನು ಅವರಿಗೆ ಹಿಂದೆ ನೋಡುವ ಅಭ್ಯಾಸವಿದೆ ಎಂದು ಹೇಳಿದ್ದು ಎಂದರು.
ಪ್ರಧಾನಿ ಮೋದಿ ಅವರು ಕಾರು ಚಾಲನೆ ಮಾಡುವಾಗಯಾವಾಗಲು ಹಿಂಬದಿಯ ಕನ್ನಡಿಯಲ್ಲಿ ನೋಡುತ್ತಾರೆ. ಅದಕ್ಕಾಗಿ ಕಾರು ಅಪಘಾತಕ್ಕೆ ಈಡಾಗುತ್ತದೆ ಎಂದು ದೃಷ್ಟಾಂತಗಳ ಮೂಲಕ ವ್ಯಂಗ್ಯವಾಡಿದರು. ಅದೇ ರೀತಿ ಬಿಜೆಪಿ ಮತ್ತುಆರ್ಎಸ್ಎಸ್ ನವರು ಯಾವಾಗಲೂ ಯಾವಾಗಲೂ ಹಿಂದಿನದಕ್ಕಾಗಿ ಯಾರನ್ನಾದರೂ ದೂಷಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈಲು ಅಪಘಾತ ಸಂಭವಿಸಿತ್ತು ಆದರೆ ನಾವು ರೈಲು ಅಪಘಾತಕ್ಕೆ ಈ ಹಿಂದೆ ಆಡಳಿತದ ನಡೆಸಿದ ಬ್ರಿಟಿಷರ ತಪ್ಪು ಎಂದು ಹೇಳಲಿಲ್ಲ ಎಂದು ವ್ಯಂಗ್ಯವಾಡಿದರು. ರಾಹುಲ್ ಆರು ದಿನಗಳ ಅಮೆರಿಕ ಪ್ರವಾಸದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಮತ್ತು ವಾಷಿಂಗ್ಟನ್ ನಗರಗಳಲ್ಲಿ ಹಲವಾರು ಸಭೆಗಳಲ್ಲಿ ಭಾಗವಹಿಸಿದ್ದಾರೆ.
ಬಿಜೆಪಿ ಸರ್ಕಾರದ ಬಗ್ಗೆ ಅವರು ಮಾಡಿದ ಹೇಳಿಕೆಗಳು ದೇಶದಲ್ಲಿ ಮತ್ತೆ ಕೋಲಾಹಲವನ್ನು ಸೃಷ್ಟಿಸಿವೆ.