ಮೆಲ್ಬೋರ್ನ್: ಸಿಡ್ನಿಯಿಂದ ದಕ್ಷಿಣಕ್ಕೆ 55 ಕಿಲೋಮೀಟರ್ ದೂರದಲ್ಲಿರುವ ಹೆಲೆನ್ಸ್ಬರ್ಗ್ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದ ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ವಿಶ್ವದಾದ್ಯಂತದ ಸಾವಿರಾರು ಭಕ್ತರು ಪಾಲ್ಗೊಂಡರು.
ಪ್ರತಿ ಎರಡು ದಶಕಗಳಿಗೊಮ್ಮೆ ನಡೆಯುವ ಮಹಾ ಕುಂಭಾಭಿಷೇಕದಲ್ಲಿ 15 ಪುರೋಹಿತರು ಮತ್ತು ಸಿಂಗಾಪುರ್, ಮಲೇಷಿಯಾ ಮತ್ತು ಮಾರಿಷಸ್ನ ಭಕ್ತರು ಸೇರಿದಂತೆ ಸೇರಿದಂತೆ 20,000 ಕ್ಕೂ ಹೆಚ್ಚು ಹಿಂದೂಗಳು ಭಾಗಿಯಾಗಿದ್ದರು ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ. ಪುರೋಹಿತರು ದೇವಾಲಯದ ಛಾವಣಿಯ ಮೇಲೆ ಪವಿತ್ರ ಕುಂಭಗಳಲ್ಲಿರುವ ನೀರನ್ನು ಪ್ರೋಕ್ಷಿಸಿದರು.
ಈ ಆಚರಣೆಯಿಂದ ದೇವಾಲಯ ಮತ್ತು ದೇವತೆಗಳು ಮಾತ್ರವಲ್ಲ ಭಕ್ತರ ಮನಸ್ಸು ಕೂಡ ಶುದ್ದಿಯಾಗುತ್ತದೆ ಎಂದು ದೇವಾಲಯದ ಮುಖ್ಯಸ್ಥ ಸುಬ್ರಾ ಅಯ್ಯರ್ ಎಬಿಸಿ ನ್ಯೂಸ್ಗೆ ತಿಳಿಸಿದರು.
ಕಳೆದ ವರ್ಷ ಜೂನ್ನಲ್ಲಿ ದೇವಾಯಲಯ ಜೀರ್ಣೋದ್ಧಾರ ಕಾರ್ಯ ಆರಂಭಿಸಲಾಗಿತ್ತು. ಭಾರತದಿಂದ ಕಲ್ಲಿನ ಶಿಲ್ಪಿಗಳು ಮತ್ತು ವರ್ಣಚಿತ್ರಕಾರರನ್ನು ಕೆತ್ತನೆಗಾಗಿ ಕರೆಸಲಾಗಿತ್ತು.
ಪ್ರಜ್ವಲ್ ಪ್ರಕರಣದ ತನಿಖೆ ನಡೆಯುತ್ತಿರುವ ರೀತಿ ಸರಿ ಇಲ್ಲ. ಎಸ್ಐಟಿಯ ತನಿಖೆಯ ದಿಕ್ಕು ತಪ್ಪುತ್ತಿದೆ. ಅಪರಾಧಿಗಳನ್ನ ಎಸ್ಐಟಿಯವರು ಬಂಧಿಸುತ್ತಿಲ್ಲ. ಎಂದು…
ತಾಯಿ ಎಂದರೆ ಮಮತೆಯ ಆಗರ, ತಾಯಿ ಎಂದರೆ ಕರುಣೆಯ ಕಡಲು, ತಾಯಿ ಎಂದರೆ ಪ್ರೀತಿಯ ಸೆಲೆ... ಹೀಗೆ ತಾಯಿಯ ಬಗ್ಗೆ…
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.
ಮಕ್ಕಳಿಗೆ ಆಸ್ತಿ ಮಾಡಿ ಇರಿಸುವುದರ ಬದಲು ಮಕ್ಕಳನ್ನು ವಿದ್ಯಾವಂತರನ್ನಾಗಿ ಸಂಸ್ಕಾರವಂತರನ್ನಾಗಿ ಮಾಡಿದರೆ ಅದುವೇ ದೊಡ್ಡ ಆಸ್ತಿ ಎಂದು ಶ್ರೀ ಕೃಷ್ಣ…
ಮಾಂಡ್ ಸೊಭಾಣ್ ಪ್ರಕಾಶನದ 22 ನೇ ಪುಸ್ತಕ ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ ʻರಿಕ್ಷಾ ಡೈರಿʼ ಉಲ್ಲಾಳ ಸೋಮೇಶ್ವರದಲ್ಲಿರುವ…
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಸೋಲಿಸದಿದ್ದರೆ ಮುಂದಿನ ದಿನಗಳಲ್ಲಿ ದೇಶವು ಕರಾಳ ದಿನಗಳನ್ನು ನೋಡಬೇಕಾಗಬಹುದು ಎಂದು ಶಿವಸೇನಾ…