ಮೆಲ್ಬೋರ್ನ್: ಸಿಡ್ನಿಯಿಂದ ದಕ್ಷಿಣಕ್ಕೆ 55 ಕಿಲೋಮೀಟರ್ ದೂರದಲ್ಲಿರುವ ಹೆಲೆನ್ಸ್ಬರ್ಗ್ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದ ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ವಿಶ್ವದಾದ್ಯಂತದ ಸಾವಿರಾರು ಭಕ್ತರು ಪಾಲ್ಗೊಂಡರು.
ಪ್ರತಿ ಎರಡು ದಶಕಗಳಿಗೊಮ್ಮೆ ನಡೆಯುವ ಮಹಾ ಕುಂಭಾಭಿಷೇಕದಲ್ಲಿ 15 ಪುರೋಹಿತರು ಮತ್ತು ಸಿಂಗಾಪುರ್, ಮಲೇಷಿಯಾ ಮತ್ತು ಮಾರಿಷಸ್ನ ಭಕ್ತರು ಸೇರಿದಂತೆ ಸೇರಿದಂತೆ 20,000 ಕ್ಕೂ ಹೆಚ್ಚು ಹಿಂದೂಗಳು ಭಾಗಿಯಾಗಿದ್ದರು ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ. ಪುರೋಹಿತರು ದೇವಾಲಯದ ಛಾವಣಿಯ ಮೇಲೆ ಪವಿತ್ರ ಕುಂಭಗಳಲ್ಲಿರುವ ನೀರನ್ನು ಪ್ರೋಕ್ಷಿಸಿದರು.
ಈ ಆಚರಣೆಯಿಂದ ದೇವಾಲಯ ಮತ್ತು ದೇವತೆಗಳು ಮಾತ್ರವಲ್ಲ ಭಕ್ತರ ಮನಸ್ಸು ಕೂಡ ಶುದ್ದಿಯಾಗುತ್ತದೆ ಎಂದು ದೇವಾಲಯದ ಮುಖ್ಯಸ್ಥ ಸುಬ್ರಾ ಅಯ್ಯರ್ ಎಬಿಸಿ ನ್ಯೂಸ್ಗೆ ತಿಳಿಸಿದರು.
ಕಳೆದ ವರ್ಷ ಜೂನ್ನಲ್ಲಿ ದೇವಾಯಲಯ ಜೀರ್ಣೋದ್ಧಾರ ಕಾರ್ಯ ಆರಂಭಿಸಲಾಗಿತ್ತು. ಭಾರತದಿಂದ ಕಲ್ಲಿನ ಶಿಲ್ಪಿಗಳು ಮತ್ತು ವರ್ಣಚಿತ್ರಕಾರರನ್ನು ಕೆತ್ತನೆಗಾಗಿ ಕರೆಸಲಾಗಿತ್ತು.