ಟೆಲ್ ಅವಿವ್: ಇಸ್ರೇಲ್-ಗಾಜಾ ಸಂಘರ್ಷದ ಕುರಿತು ಮಾತನಾಡಿದ ಟರ್ಕಿಯ ಅಧ್ಯಕ್ಷ ತಯ್ಯಿಪ್ ಎರ್ಡೊಗನ್, “ಹಮಾಸ್ ಭಯೋತ್ಪಾದಕ ಸಂಘಟನೆಯಲ್ಲ, ಆದರೆ ಪ್ಯಾಲೆಸ್ತೀನ್ ಭೂಮಿ ಮತ್ತು ಜನರನ್ನು ರಕ್ಷಿಸಲು ಹೋರಾಡುತ್ತಿರುವ ವಿಮೋಚನಾ ಗುಂಪು” ಎಂದು ಹೇಳಿದ್ದಾರೆ.
ತನ್ನ ಆಡಳಿತಾರೂಢ ಎಕೆ ಪಾರ್ಟಿ ಶಾಸಕರೊಂದಿಗೆ ಮಾತನಾಡಿದ ತಯ್ಯಿಪ್ ಎರ್ಡೊಗನ್, ಇಸ್ರೇಲಿ ಮತ್ತು ಪ್ಯಾಲೆಸ್ತೀನ್ ಪಡೆಗಳ ನಡುವೆ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿದ್ದು ಈ ಪ್ರದೇಶದಲ್ಲಿ ಶಾಶ್ವತ ಶಾಂತಿಯನ್ನು ಪಡೆಯಲು ಮುಸ್ಲಿಂ ರಾಷ್ಟ್ರಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಹಮಾಸ್ ವಿರುದ್ಧ ಇಸ್ರೇಲ್ ಪ್ರತೀಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ ಪಾಶ್ಚಿಮಾತ್ಯ ಶಕ್ತಿಗಳನ್ನು ತರಾಟೆಗೆ ತೆಗೆದುಕೊಂಡ ಟರ್ಕಿ ಅಧ್ಯಕ್ಷರು, “ಪಶ್ಚಿಮ ಇಸ್ರೇಲ್ಗಾಗಿ ಸುರಿಸುವ ಕಣ್ಣೀರು ವಂಚನೆಯದ್ದು ಎಂದಿದ್ದಾರೆ.
ಇನ್ನು ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಇಟಲಿಯ ಉಪ ಪ್ರಧಾನ ಮಂತ್ರಿ ಮ್ಯಾಟಿಯೊ ಸಾಲ್ವಿನಿ, ಇವರು ಯುದ್ಧ ತೀವ್ರತೆ ತಗ್ಗಿಸವು ಸಹಾಯ ಮಾಡಲಿಲ್ಲ ಎಂದಿದ್ದಾರೆ. ನಾನು ನನ್ನ ಸಹೋದ್ಯೋಗಿ (ವಿದೇಶಿ ಸಚಿವ ಆಂಟೋನಿಯೊ) ತಜಾನಿಗೆ ಔಪಚಾರಿಕ ಪ್ರತಿಭಟನೆಯನ್ನು ವ್ಯಕ್ತಪಡಿಸಲು ಟರ್ಕಿಶ್ ರಾಯಭಾರಿಯನ್ನು ಕರೆಸುವಂತೆ ಪ್ರಸ್ತಾಪಿಸುತ್ತೇನೆ” ಎಂದು ಮ್ಯಾಟಿಯೊ ಸಾಲ್ವಿನಿ ಹೇಳಿದರು.
ತಯ್ಯಿಪ್ ಎರ್ಡೋಗನ್ ಹೇಳಿಕೆ ಖಂಡಿಸಿದ ಟೆಲ್ ಅವಿವ್, ಭಯೋತ್ಪಾದಕ ಸಂಘಟನೆ ಹಮಾಸ್ ಬಗ್ಗೆ ಟರ್ಕಿಯ ಅಧ್ಯಕ್ಷರ ಕಟುವಾದ ಮಾತುಗಳನ್ನು ನಾವು ತಿರಸ್ಕರಿಸುತ್ತೇವೆ. ಭಯೋತ್ಪಾದಕ ಸಂಘಟನೆಯನ್ನು ರಕ್ಷಿಸಲು ಟರ್ಕಿಯ ಅಧ್ಯಕ್ಷರ ಪ್ರಯತ್ನ ಮತ್ತು ಅವರ ಪ್ರಚೋದಿಸುವ ಮಾತುಗಳು ಸಹ ಇಡೀ ಜಗತ್ತು ಕಂಡ ಭಯಾನಕತೆಯನ್ನು ಬದಲಾಯಿಸುವುದಿಲ್ಲ ಎಂದು ಹೇಳಿದ್ದಾರೆ.