ಸಿಯೋಲ್: ಅಣ್ವಸ್ತ್ರ ದಾಳಿ ನಡೆಸುವುದಾಗಿ ಹಲವು ದೇಶಗಳಿಗೆ ಬೆದರಿಕೆಯೊಡ್ಡಿದ್ದ ಉತ್ತರ ಕೊರಿಯಾದಲ್ಲಿ ಆಹಾರ ಕೊರತೆ ತೀವ್ರಗೊಂಡಿದೆ. ಈ ನಿಟ್ಟಿನಲ್ಲಿ ಜಲನಿರೋಧಕ ತಳಿಯ ಭತ್ತ ಕೃಷಿ ಹೆಚ್ಚಿಸುವಂತೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಆದೇಶ ನೀಡಿದ್ದಾರೆ. ಅಲ್ಲದೆ ಜಲ ನಿರೋಧಕ ಭತ್ತದ ನಾಟಿಗೆ ಸಿದ್ಧರಾಗುವಂತೆ ಉತ್ತರ ಕೊರಿಯಾದ ರಾಜ್ಯ ಮಾಧ್ಯಮ ರೈತರಿಗೆ ಕರೆ ನೀಡಿದೆ.
ದೇಶದ ಮುಖ್ಯ ಪತ್ರಿಕೆಯಾದ ರೊಡಾಂಗ್ ಸಿನ್ಮುನ್ನ ಮೊದಲ ಪುಟದಲ್ಲಿ ಪ್ರಕಟವಾದ “ನೀರು ನಿರೋಧಕ ಭತ್ತದ ನಾಟಿಗೆ ಸಿದ್ಧರಾಗೋಣ” ಎಂಬ ಶೀರ್ಷಿಕೆಯ ಲೇಖನದಲ್ಲಿ, ಕೃಷಿ ಕಾರ್ಮಿಕರಿಗೆ ತಮ್ಮ ಕೆಲಸವನ್ನು ಹೆಚ್ಚಿಸುವಂತೆ ಸೂಚಿಸಿದೆ. ಕೃಷಿ ಉತ್ಪಾದನೆ ಹೆಚ್ಚಿಸಲು ಅಲ್ಲಿನ ದೇಶದ ಸರ್ಕಾರಿ ಪತ್ರಿಕೆ ಆರು ಲೇಖನಗಳನ್ನು ಪ್ರಕಟಿಸಿದೆ.
ಕೋವಿಡ್ -19 ಸಾಂಕ್ರಾಮಿಕ ಮತ್ತು ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳ ಮೇಲೆ ಜಾಗತಿಕ ನಿರ್ಬಂಧದಿಂದ ದೇಶದಲ್ಲಿ ಆಹಾರ ಕೊರತೆ ಹೆಚ್ಚಿದ್ದು, ಈ ನಿಟ್ಟಿನಲ್ಲಿ ಆಹಾರ ಉತ್ಪಾದನೆ ಹೆಚ್ಚಿಸಲು ಕಿಮ್ ಸರ್ಕಾರ ಸೂಚಿಸಿದೆ. ಕಳೆದ ವರ್ಷದ ಪ್ರಮುಖ ಪಕ್ಷದ ಸಭೆಯ ಸಂದರ್ಭದಲ್ಲಿ, 12 ಪ್ರಮುಖ ಆರ್ಥಿಕ ಆದ್ಯತೆಗಳಲ್ಲಿ ಧಾನ್ಯದ ಉತ್ಪಾದನೆಯ ಹೆಚ್ಚಳವನ್ನು ನಂ 1″ ನೀತಿಯಾಗಿ ರೂಪಿಸಿತ್ತು. ಅಲ್ಲದೆ ದೇಶದ್ಯಾಂತ ರೈತರು ಕೃಷಿ ಉತ್ಪಾದನೆ ಹೆಚ್ಚಿಸುವಂತೆ ಕಿಮ್ ಸೂಚಿಸಿದ್ದರು.
ಹೆಬ್ರಿ ಅಡಾಲ್ ಬೆಟ್ಟು ಶಿಶುಮಂದಿರದ ಸಮೀಪ ಇರುವ ಪರಿಸರದಲ್ಲಿ ಹಾದುಹೋದ ಚರಂಡಿಯಲ್ಲಿ ಕೊಳಚೆ ನೀರು ನಿಂತು ದುರ್ನಾಥ ಬೀರುತ್ತಿದ್ದು ಸಾಂಕ್ರಾಮಿಕ…
ವಿಶ್ವನಾಯಕ, ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿರುವ ವಿಕಸಿತ ಭಾರತ ನಿರ್ಮಾಣಕ್ಕಾಗಿ ಜಿಲ್ಲೆಯ ಮತದಾರರು ಈ ಸಲವೂ ಬಿಜೆಪಿಯ ಕೈ…
2024ನೇ ಸಾಲಿನ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ರೋಹಿತ್ ಶರ್ಮಾ…
ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿಯ (ಡಿಪಿಸಿಸಿ) ಅಧ್ಯಕ್ಷರನ್ನಾಗಿ ದೇವೇಂದ್ರ ಯಾದವ್ ಅವರನ್ನು ನೇಮಕ ಮಾಡಿ ಹೈಕಮಾಂಡ್ ಇಂದು ಆದೇಶ ಹೊರಡಿಸಿದೆ.
: ನಗರದಲ್ಲಿರುವ ಗೋಳ ಗುಮ್ಮಟವನ್ನು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಸಲು ಶತ ಪ್ರಯ tgತ್ನ ಮಾಡುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು…
ಇತ್ತೀಚೆಗೆ ರಶ್ಮಿಕಾ ಮಂದಣ್ಣಗೆ ಸಂಬಂಧಿಸಿದ ಡೀಪ್ ಫೇಕ್ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಈ ಸಂಬಂಧ…