ಕೊಲಂಬೊ: ಗೋಟ್ಬಯಾ ರಾಜಪಕ್ಸೆ ಮಾಲ್ಡೀವ್ಸ್ ಗೆ ಪಲಾಯನ ಮಾಡಿದ ನಂತರ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ಬುಧವಾರ ನೇಮಕ ಮಾಡಲಾಗಿದೆ.
ವರದಿಗಳ ಪ್ರಕಾರ, ಅಧ್ಯಕ್ಷ ರಾಜಪಕ್ಸೆ ಈ ವಿಷಯವನ್ನು ಸ್ಪೀಕರ್ ಮಹಿಂದಾ ಯಾಪಾ ಅಬೆವರ್ದನಾ ಅವರಿಗೆ ತಿಳಿಸಿದರು.
ಅಧಿಕಾರ ವಹಿಸಿಕೊಂಡ ಕೂಡಲೇ ವಿಕ್ರಮಸಿಂಘೆ ರಾಜಧಾನಿ ಕೊಲಂಬೋ ಇರುವ ಪಶ್ಚಿಮ ಪ್ರಾಂತ್ಯದಲ್ಲಿ ಕರ್ಫ್ಯೂ ವಿಧಿಸಿದರು ಮತ್ತು ದ್ವೀಪದಾದ್ಯಂತ ತುರ್ತು ನಿಬಂಧನೆಗಳನ್ನು ಘೋಷಿಸಿದರು.
ಪ್ರತಿಭಟನಾಕಾರರು ಪ್ರಧಾನಿ ಕಚೇರಿಯನ್ನು ಸುತ್ತುವರೆದಿದ್ದಾರೆ ಮತ್ತು ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದೆ, ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ ಮತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ತುರ್ತು ಪರಿಸ್ಥಿತಿ ಮತ್ತು ಕರ್ಫ್ಯೂ ನಡುವೆಯೂ ರಾಷ್ಟ್ರಪತಿಗಳ ನಿವಾಸ, ಅವರ ಕಚೇರಿ ಮತ್ತು ಪ್ರಧಾನ ಮಂತ್ರಿಯವರ ಅಧಿಕೃತ ನಿವಾಸವನ್ನುಪ್ರತಿಭಟನಾಕಾರರು ಆಕ್ರಮಿಸಿಕೊಂಡಿದ್ದಾರೆ.
ಗಲಭೆಯ ರೀತಿಯಲ್ಲಿ ವರ್ತಿಸುವ ಜನರನ್ನು ಮತ್ತು ಕೊಲಂಬೋಗೆ ಬರುವ ವಾಹನಗಳನ್ನು ನಿರ್ಬಂಧಿಸುವಂತೆ ಅವರು ಭದ್ರತೆಗೆ ಆದೇಶಿಸಿದ್ದಾರೆ. ಟೆಲಿವಿಷನ್ ಸ್ಟೇಷನ್ ಪ್ರಸರಣವನ್ನು ನಿಲ್ಲಿಸಿದೆ.