News Karnataka Kannada
Monday, April 29 2024
ವಿದೇಶ

ಮಹಿಂದ ರಾಜಪಕ್ಸೆ ಮತ್ತು 16 ಮಂದಿಗೆ ಅಂತರಾಷ್ಟ್ರೀಯ ಪ್ರಯಾಣ ನಿರ್ಬಂಧ

Mahinda
Photo Credit :

ಶ್ರೀಲಂಕಾ: ಕೋಲಂಬೋದಲ್ಲಿ ಸರ್ಕಾರ ವಿರೋಧಿ ಪ್ರತಿಭಟನಾಕಾರರ ಮೇಲೆ ಮಾರಣಾಂತಿಕ ದಾಳಿಗೆ ಸಂಬಂಧಿಸಿದಂತೆ  ಶ್ರೀಲಂಕಾದ ನ್ಯಾಯಾಲಯವು ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ, ಅವರ ಪುತ್ರ ನಮಲ್ ರಾಜಪಕ್ಸೆ ಮತ್ತು ಇತರ 15 ಮಂದಿಗೆ ಅಂತರಾಷ್ಟ್ರೀಯ ಪ್ರಯಾಣ ನಿಷೇಧವನ್ನು ವಿಧಿಸಿದೆ.

ಗೊಟಗೋಗಾಮ ಮತ್ತು ಮೈನಾಗೋಗಾಮಾ ಪ್ರದೇಶದಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಗಳ ಮೇಲೆ ಮಹಿಂದಾ ರಾಜಪಕ್ಸೆ ಅವರ ಬೆಂಬಲಿಗರು ದಾಳಿ ನಡೆಸಿದ್ದರು. ಆ ನಂತರ ಶ್ರೀಲಂಕಾದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿನ್ನೆಲೆಯಲ್ಲಿ ಶ್ರಿಲಂಕಾದ ಅಟಾರ್ನಿ ಜನರಲ್‌ ಮಂಹಿದಾ ರಾಜಪಕ್ಸೆ ಸೇರಿದಂತೆ ಇತರ 16 ಮಂದಿಯ ಮೇಲೆ ಪ್ರಯಾಣ ನಿರ್ಬಂಧ ವಿಧಿಸುವಂತೆ ಕೋರಿದ್ದರು.

ವಿಚಾರಣೆ ನಡೆಸಿದ ಕೋರ್ಟ್‌ ಮಾಜಿ ಪ್ರಧಾನಿ ಮಹಿಂದ ರಾಜಪಕ್ಸೆ, ಅವರ ಪುತ್ರ ನಮಲ್‌ ರಾಜಪಕ್ಸೆ, ಸಂಸದರಾದ ಜಾನ್ಸ್ಟನ್ ಫೆರ್ನಾಂಡೋ, ಪವಿತ್ರಾ ವನ್ನಿಯಾರಚಿ, ಸಂಜೀವ ಎದಿರಿಮನ್ನೆ, ಕಾಂಚನಾ ಜಯರತ್ನ, ರೋಹಿತ ಅಬೇಗುಣವರ್ಧನ, ಸಿ.ಬಿ.ರತ್ನಾಯಕೆ, ಸಂಪತ್ ಆತುಕೋರಲ, ರೇಣುಕಾ ಪೆರೇರಾ, ಸನತ್ ನಿಶಾಂತ, ಹಿರಿಯ ಡಿಐಜಿ ದೇಶಬಂದು ತೆನ್ನಕೋನ್ ಮುಂತಾದವರ ಮೇಲೆ ಅಂತರಾಷ್ಟ್ರೀಯ ಪ್ರಯಾಣ ನಿರ್ಬಂಧ ಹೇರಿದೆ ಮತ್ತು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು