News Karnataka Kannada
Monday, April 29 2024
ವಿದೇಶ

ಮಸೀದಿಯಲ್ಲಿ ನೀರು ಕುಡದಿದ್ದಕ್ಕೆ ಹಲ್ಲೆ

Water
Photo Credit :

ಇಸ್ಲಮಾಬಾದ್‌ : ಹಿಂದೂ ಕುಟುಂಬವೊಂದು ಮಸೀದಿಯಲ್ಲಿ ನೀರು ತಂದು ಕುಡದಿದ್ದಕ್ಕೆ  ಥಳಿಸಿರುವ ಘಟನೆ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ನಡೆದಿದೆ. ಆನಂತರವೂ ಸ್ಥಳೀಯ ಜಮೀನ್ದಾರರು ಆ ಕುಟುಂಬವನ್ನು ಒತ್ತೆಯಾಗಿರಿಸಿಕೊಂಡು ಹಿಂಸೆ ನೀಡಿದ್ದಾರೆ ಎಂದು ತಿಳೋದು ಬಂದಿದೆ .

ಪಂಜಾಬ್‌ ಪ್ರಾಂತ್ಯದಲ್ಲಿ ಹತ್ತಿ ಕೀಳುವ ಕಾಯಕ ಮಾಡುವ ಅಲಾಂ ರಾಮ್‌ ಬೀಲ್‌ ಎನ್ನುವ ವ್ಯಕ್ತಿಯ ಕುಟುಂಬದ ಮೇಲೆ ಹಲ್ಲೆ ನಡೆಸಲಾಗಿದೆ. ‘ತುಂಬಾ ಬಾಯಾರಿದ್ದರಿಂದ ನೀರು ಕುಡಿಯಲು ಮಸೀದಿಯ ಒಳಗೆ ಹೋಗಿದ್ದೆವು, ಆಗ ಸ್ಥಳೀಯ ಜಮೀನ್ದಾರರು ಅವರ ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸಿದೆವು ಎಂದು ನಮ್ಮನ್ನು ಥಳಿಸಿದರು. ಹತ್ತಿ ಕೀಳುವ ಕೆಲಸ ಮುಗಿಸಿ ಹೋಗುವಾಗ ಮತ್ತೆ ಇದೇ ವಿಷಯಕ್ಕೆ ನಮ್ಮನ್ನು ಒತ್ತೆಯಾಗಿರಿಸಿಕೊಂಡು ಹಿಂಸೆ ನೀಡಿದರು’ ಎಂದು ಬೀಲ್‌ ಹೇಳಿದ್ದಾರೆ.

ದುಷ್ಕರ್ಮಿಗಳು ಸ್ಥಳಿಯ ಸಂಸದ, ಪ್ರಧಾನಿ ಇಮ್ರಾನ್‌ ಖಾನ್‌ಗೆ ಬೇಕಾದವರು ಎಂಬ ಕಾರಣಕ್ಕೆ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಈ ಘಟನೆಯ ಬಗ್ಗೆ ಪಂಜಾಬ್‌ ಪ್ರಾಂತ್ಯದ ಅಲ್ಪಸಂಖ್ಯಾತರ ನಿಗ​ಮ​ದ ಅಧ್ಯಕ್ಷರಿಗೆ ತಿಳಿದಿದ್ದರೂ, ಆಡಳಿತ ಪಕ್ಷಕ್ಕೆ ಹೆದರಿ ಪ್ರಕರಣದಿಂದ ದೂರ ಉಳಿದಿದ್ದಾರೆ ಎಂದು ಆರೋಪ ಮಾಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು