Categories: ವಿದೇಶ

ಬಲ್ಗೇರಿಯ ಹಾಗೂ ಪೋಲೆಂಡ್ ಗೆ ಅನಿಲ ಪೂರೈಕೆ ಸ್ಥಗಿತಗೊಳಿಸಿ ರಷ್ಯ

ಮಾಸ್ಕೊ : ರಷ್ಯಾವು ಉಕ್ರೇನ್ ಮೇಲಿನ  ಆಕ್ರಮಣವನ್ನು ಕಟುವಾಗಿ ವಿರೋಧಿಸುತ್ತಾ ಬಂದಿರುವ ಪೋಲ್ಯಾಂಡ್ ಮತ್ತು ಬಲ್ಗೇರಿಯಾಕ್ಕೆ ಅನಿಲ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ರಷ್ಯಾ ಬುಧವಾರ ಹೇಳಿದೆ.
ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ತನ್ನನ್ನು ವಿರೋಧಿಸುವವರ ವಿರುದ್ಧ ಅನಿಲವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವ ರಷ್ಯಾದ ಬೃಹತ್ ಇಂಧನ ಸಂಸ್ಥೆ ಗಾರ್ಪ್ರೋಮ್, ಬುಧವಾರದಿಂದ ಪೋಲ್ಯಾಂಡ್ ಮತ್ತು ಬಲ್ಗೇರಿಯಾಕ್ಕೆ ಅನಿಲ ಪೂರೈಸುವುದಿಲ್ಲ ಎಂದು ಹೇಳಿದೆ.

ಉಕ್ರೇನ್ ನೆರೆರಾಷ್ಟ್ರ ಮೊಲ್ದೋವಾದಲ್ಲಿ ಸರಣಿ ಸ್ಫೋಟ ಸಂಭವಿಸಿದ ಬಳಿಕ ಹೇಳಿಕೆ ನೀಡಿದ್ದ ಉಕ್ರೇನ್, ರಷ್ಯಾವು ಯುದ್ಧವನ್ನು ಯುರೋಪ್ ಗೆ ವಿಸ್ತರಿಸಲು ಬಯಸುತ್ತಿದೆ ಎಂದು ಹೇಳಿತ್ತು. ಮೊಲ್ದೋವಾದ ಟ್ರಾನ್ಸ್ನಿಸ್ಟ್ರಿಯಾ ಪ್ರದೇಶದಲ್ಲಿ ರಶ್ಯನ್ ಭಾಷೆ ಮಾತನಾಡುವವರನ್ನು ದಮನಿಸಲಾಗುತ್ತಿದೆ ಎಂದು ರಷ್ಯಾದ ಸೇನಾ ಮುಖಂಡರು ಹೇಳಿಕೆ ನೀಡಿದ ಬೆನ್ನಲ್ಲೇ ಮೊಲ್ಡೋವಾದ ರೇಡಿಯೊ ಟವರ್, ಸೇನಾ ನೆಲೆ ಮತ್ತು ಭದ್ರತಾ ಇಲಾಖೆಯ ಕಚೇರಿಯನ್ನು ಗುರಿಯಾಗಿಸಿ ಸರಣಿ ಸ್ಫೋಟ ಸಂಭವಿಸಿತ್ತು.

ಇದು ಮೊಲ್ಡೋವಾದ ಮೇಲಿನ ದಾಳಿಯ ಮುನ್ಸೂಚನೆಯಾಗಿದೆ. ಯುದ್ಧವನ್ನು ಯುರೋಪ್ ನತ್ತ ವಿಸ್ತರಿಸಲು ರಷ್ಯಾ ಉದ್ದೇಶಿಸಿದೆ. ಟ್ರಾನ್ಸ್ನಿಸ್ಟ್ರಿಯಾದಲ್ಲಿ ಅಸ್ಥಿರತೆ ತರಲು ರಷ್ಯಾ ಪ್ರಯತ್ನಿಸುತ್ತಿದೆ . ಉಕ್ರೇನ್ ಕೈವಶವಾದರೆ ಮರುದಿನವವೇ ರಷ್ಯಾದ ಸೇನೆ ಮೋಲ್ದೋವ ರಾಜಧಾನಿಯ ಬಾಗಿಲಲ್ಲಿ ಇರುತ್ತದೆ ಎಂದು ಉಕ್ರೇನ್ ಅಧ್ಯಕ್ಷರ ಸಲಹೆಗಾರ ಮಿಖಾಯ್ಲೋ ಪೊಡೊಲ್ಯಾಕ್ ಟ್ವೀಟ್ ಮಾಡಿದ್ದಾರೆ.

ಮೊಲ್ಡೋವಾದಲ್ಲಿ ಸಂಭವಿಸಿದ ಸ್ಫೋಟಕ್ಕೆ ರಷ್ಯಾಹೊಣೆ ಎಂದು ಆರೋಪಿಸಿರುವ ಅಮೆರಿಕ, ಮೋಲ್ಡೊವಾದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದೆ.

Ashika S

Recent Posts

ವಕೀಲ ದೇವರಾಜೆಗೌಡ ಮತ್ತೆ 2 ದಿನ ಎಸ್‌ಐಟಿ ಕಸ್ಟಡಿಗೆ

ಜಿಲ್ಲೆಯ 5ನೇ ಸಿವಿಲ್ ಕೋರ್ಟ್‌ನಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಧೀಶರು,…

3 mins ago

ಕೇರಳದಲ್ಲಿ ಭಾರೀ ಮಳೆ : ರೆಡ್ ಅಲರ್ಟ್ ಘೋಷಣೆ

ಮುಂಗಾರು ಪ್ರವೇಶಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ದೇವರನಾಡು ಕೇರಳದಲ್ಲಿ ಭಾರಿ ಮಳೆಯಾಗುತ್ತಿದ್ದು, ಶನಿವಾರ ಭಾರತೀಯ ಹವಾಮಾನ ಇಲಾಖೆ (IMD) ರೆಡ್ ಅಲರ್ಟ್…

18 mins ago

ವಿಧಾನಪರಿಷತ್ ಚುನಾವಣೆ : ನಾಮಪತ್ರ ಅಂಗೀಕಾರ,ತಿರಸ್ಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್

ರಾಜ್ಯ ವಿಧಾನ ಪರಿಷತ್​ಗೆ ನೈಋತ್ಯ, ಈಶಾನ್ಯ, ಬೆಂಗಳೂರು ಪದವೀಧರ ಕ್ಷೇತ್ರಗಳು ಹಾಗೂ ಆಗ್ನೇಯ, ನೈಋತ್ಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ…

40 mins ago

ಟಾಸ್​ ಗೆದ್ದ ಚೆನ್ನೈ ಸೂಪರ್​ ಕಿಂಗ್ಸ್​ : ಫೀಲ್ಡಿಂಗ್​ ಆಯ್ಕೆ

ಪ್ಲೇ ಆಫ್​ ಪ್ರವೇಶಕ್ಕೆ ಮಹತ್ವವಾದ ಶನಿವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್​ ಕಿಂಗ್ಸ್​​…

1 hour ago

ಶಿಕ್ಷಕ-ಪದವೀಧರ ಕ್ಷೇತ್ರದ ಅಭ್ಯರ್ಥಿಗಳ ಗೆಲುವು ನಿಶ್ಚಿತ : ಜಾರ್ಜ್

ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಮಾದರಿಯಂ ತೆ, ವಿಧಾನ ಪರಿಷತ್ ಚುನಾವಣೆಯಲ್ಲೂ ಕಾರ್ಯಕರ್ತರುಗಳು ಅಭ್ಯರ್ಥಿಗಳ ಪರವಾಗಿ ಬೂತ್‌ಮಟ್ಟ ದಿಂದ…

2 hours ago

ಆಸ್ಪತ್ರೆಯಲ್ಲಿ ಶುಶ್ರೂಷಕಿಯರ ಪಾತ್ರ ಮಹತ್ವದ್ದು ಡಾ.ಮೋಹನ್‌ಕುಮಾರ್

ಆಸ್ಪತ್ರೆಯಲ್ಲಿ ಶುಶ್ರೂ?ಕಿಯರ ಪಾತ್ರ ಮಹತ್ವದ್ದು, ದಾದಿಯರು ಯಾ ವಾಗಲೂ ಹಸನ್ಮುಖಿಯರಾಗಿ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಲ್ಲೇಗೌಡ ಜಿಲ್ಲಾ ಸ್ಪತ್ರೆ…

3 hours ago