News Karnataka Kannada
Thursday, May 02 2024
ವಿದೇಶ

ನಾವು ದೇಶವನ್ನು ಬದಲಿಸುತ್ತೇವೆ : ತಾಲಿಬಾನ್

Taliban
Photo Credit :

ಕಾಬೂಲ್‌  : ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ತಾಲಿಬಾನ್ ಸುದ್ದಿಗೋಷ್ಠಿ ನಡೆಸಿದ್ದು, ದೇಶವನ್ನು ಅಮೂಲಾಗ್ರವಾಗಿ ಬದಲಿಸಲು ನಾವು ಪಣತೊಟ್ಟಿದ್ದೇವೆ ಎಂದು ಹೇಳಿದೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತಾಲಿಬಾನ್ ವಕ್ತಾರ ಜಬಿಹುಲ್ಲಾಹ್ ಮುಜಾಹಿದ್, 20 ವರ್ಷಗಳ ನಿರಂತರ ಹೋರಾಟದಿಂದ ನಾವು ನಮ್ಮ ದೇಶವನ್ನು ವಿಮೋಚನೆಗೊಳಿಸಿದ್ದೇವೆ. ನಮಗೆ ಆಂತರಿಕ ಅಥವಾ ಬಾಹ್ಯ ಶತ್ರುಗಳು ಬೇಕಿಲ್ಲ.. ನಾವು ಐತಿಹಾಸಿಕ ಘಟ್ಟವೊಂದರಲ್ಲಿ ಇದ್ದು, ನಾವು ಎಲ್ಲಾ  ವಿಭಾಗಗಳನ್ನು ಒಳಗೊಂಡ ಸರ್ಕಾರ ಸ್ಥಾಪನೆ ಬಯಸುತ್ತಿದ್ದೇವೆ. ಆಫ್ಘಾನಿಸ್ತಾನ ದೇಶವನ್ನು ಖಂಡಿತಾ ಬದಲಿಸುತ್ತೇವೆ ಎಂದು ಹೇಳಿದರು.

ತಾಲಿಬಾನ್ ಆಡಳಿತದಲ್ಲಿ ಅಫ್ಘಾನಿಸ್ತಾನದಲ್ಲಿ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ನಾವು ಅಂತಾರಾಷ್ಟ್ರೀಯ ಸಮುದಾಯಕ್ಕೆ ಭರವಸೆ ನೀಡುತ್ತೇವೆ. ನಾವು ನಮ್ಮ ಧಾರ್ಮಿಕ ನಿಯಮಗಳಂತೆ ನಡೆದುಕೊಳ್ಳುವ ಹಕ್ಕು ನಮಗಿದೆ. ತಾಲಿಬಾನ್‌ನ ಉಪ ಸಂಸ್ಥಾಪಕ ಮುಲ್ಲಾಹ್ ಅಬ್ದುಲ್ ಗನಿ ಬರಾದ‌  ಅಫ್ಘಾನಿಸ್ತಾನಕ್ಕೆ ವಾಪಸ್ಸಾಗಿದ್ದು, ಈ ಹಿಂದೆ ನಮ್ಮ ವಿರುದ್ಧ ಹೋರಾಡಿದವರನ್ನೆಲ್ಲ ನಾವು ಸಾಮೂಹಿಕವಾಗಿ ಕ್ಷಮಿಸಿದ್ದೇವೆ. ಅಂತೆಯೇ ನಾವು ಎಲ್ಲಾ ವಿಭಾಗಗಳನ್ನು ಒಳಗೊಂಡ ಸರ್ಕಾರ ಸ್ಥಾಪನೆ ಬಯಸುತ್ತಿದ್ದು, ಶೀಘ್ರವೇ ನಾವು ನಮ್ಮ ದೇಶವನ್ನು ಬದಲಿಸುತ್ತೇವೆ. ಇದು ಖಂಡಿತಾ ಧನಾತ್ಮಕ  ಬದಲಾವಣೆಯಾಗಿರಲಿದೆ. ಪ್ರತಿಯೊಬ್ಬ ಆಫ್ಘನ್ ಪ್ರಜೆಯೂ ಉತ್ತಮ ಬದುಕು ನಡೆಸಲು ಬಯಸುತ್ತಾನೆಂದು ನಮಗೆ ತಿಳಿದಿದೆ. ನಮ್ಮ ದೇಶದ ಆರ್ಥಿಕತೆ ಬದಲಿಸಲು ಕೆಲವು ಮುಖ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು