ಕೀವ್: ಉಕ್ರೇನ್ ರಾಜಧಾನಿ ಕೀವ್ನಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ಗಾಯಗೊಂಡಿದ್ದಾನೆ ಎಂದು ಕೇಂದ್ರ ಸಚಿವ ವಿಕೆ ಸಿಂಗ್ ಮಾಹಿತಿ ನೀಡಿದ್ದಾರೆ.
ಸಾಧ್ಯವಾದಷ್ಟು ಜನರನ್ನು ಸ್ಥಳಾಂತರಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಪ್ರಸ್ತುತ ಪೋಲೆಂಡ್ನಲ್ಲಿರುವ ವಿಕೆ ಸಿಂಗ್ ಅವರು ಹೇಳಿದರು. ವಿಕೆ ಸಿಂಗ್ ಅವರು ಉಕ್ರೇನ್ನಿಂದ ಬರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಸಹಾಯ ಮಾಡುತ್ತಿದ್ದಾರೆ.
ಇಂದು ಕೀವ್ನಿಂದ ಬರುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಗುಂಡು ಹಾರಿಸಲಾಗಿದೆ ಎಂದು ನನಗೆ ಮಾಹಿತಿ ಸಿಕ್ಕಿದ್ದು ಅವರನ್ನು ಮಧ್ಯದಲ್ಲಿ ವಾಪಸ್ ಕರೆದೊಯ್ದಿದ್ದಾರೆ ಎಂದು ಅವರು ಹೇಳಿದರು.
ನಾಳೆ ರೆಸ್ಜೋದಿಂದ 4 ವಿಮಾನಗಳು ಹೊರಡಲಿವೆ. ಒಂದು ವಿಮಾನ ವಾರ್ಶಾದಿಂದ ಹೊರಡಲಿದೆ ಎಂದು ವಿಕೆ ಸಿಂಗ್ ತಿಳಿಸಿದ್ದಾರೆ. ವಸತಿ ಸೌಕರ್ಯ ಇಲ್ಲದ ಕಾರಣ 800-900 ವಿದ್ಯಾರ್ಥಿಗಳನ್ನು ಕಳುಹಿಸಲು ಪ್ರಯತ್ನಿಸುತ್ತಿದ್ದೇವೆ. ಅವರಿಗೆ ಹೆಚ್ಚು ಆರಾಮದಾಯಕವಾಗಿರಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಕಳೆದ ಮೂರು ದಿನಗಳಲ್ಲಿ ನಾವು 7 ವಿಮಾನಗಳನ್ನು ಕಳುಹಿಸಿದ್ದೇವೆ. ಪ್ರತಿ ವಿಮಾನದಲ್ಲಿ ಸುಮಾರು 200 ವಿದ್ಯಾರ್ಥಿಗಳು ಇದ್ದರು ಎಂದು ವಿಕೆ ಸಿಂಗ್ ಹೇಳಿದರು. ಕೆಲವು ವಿದ್ಯಾರ್ಥಿಗಳು ತಮ್ಮ ಸ್ನೇಹಿತರು ತಮ್ಮ ಸಂಬಂಧಿಕರು ಇಲ್ಲಿರುವುದರಿಂದ ವಾರ್ಶಾದಲ್ಲಿ ಉಳಿದುಕೊಂಡಿದ್ದಾರೆ. ಈ ಜನರು ಪೋಲೆಂಡ್ನಲ್ಲಿ ಸುರಕ್ಷಿತವಾಗಿದ್ದಾರೆ ಎಂದಿದ್ದಾರೆ.