ಮಾಸ್ಕೊ: ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣ ಆರಂಭಿಸಿ 100 ದಿನ ಸಮೀಪಿಸುತ್ತಿರುವಂತೆಯೇ, ರಷ್ಯಾ ಸೇನೆಯು ಉಕ್ರೇನ್ನ ಸಣ್ಣಪುಟ್ಟ ನಗರಗಳನ್ನು ಒಂದೊಂದಾಗಿ ವಶಪಡಿಸಿಕೊಳ್ಳುತ್ತಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ. ಉಕ್ರೇನ್ನ ಪೂರ್ವ ಭಾಗದ ನಗರ ಸಿವಿರೊಡೊನೆಟ್ಸ್ಕ್ ಮೇಲೆ ರಷ್ಯಾದ ಪಡೆಗಳು ಮುತ್ತಿಗೆ ಹಾಕಿರುವುದಾಗಿ ಉಕ್ರೇನ್ ನ ಪ್ರಾದೇಶಿಕ ಅಧಿಕಾರಿಗಳು ವರದಿ ಮಾಡಿದ್ದಾರೆ.ರಶ್ಯ ಆಕ್ರಮಣದ ಬಳಿಕ ನಗರದಲ್ಲಿ ವಿದ್ಯುತ್ ಹಾಗೂ ಮೊಬೈಲ್ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿದೆ.
ನಾಗರಿಕರು ಭಯಭೀತರಾಗಿ ಪಲಾಯನ ಮಾಡುತ್ತಿದ್ದಾರೆ:
ಸಿವಿರೊಡೊನೆಟ್ಸ್ಕ್ ಸಮೀಪದ ನಗರ ಲಿಸಿಚಾನ್ಸ್ಕ್ ಅನ್ನು ಕೂಡಾ ವಶಪಡಿಸಿಕೊಳ್ಳಲು ರಷ್ಯಾ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿದೆಯೆಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ. ಒಟ್ಟಾಗಿ ಎರಡು ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಈ ಎರಡು ನಗರಗಳು ಲಿಸಿಚಾನ್ಸ್ಕ್ ಪ್ರಾಂತದಲ್ಲಿ ಉಕ್ರೇನ್ ನಿಯಂತ್ರಣದಲ್ಲಿರುವ ಕಟ್ಟಕಡೆಯ ಪ್ರದೇಶಗಳಾಗಿವೆ. ದೇಶಾದ್ಯಂತ ಉಕ್ರೇನ್ನ ಸೇನಾನೆಲೆಗಳನ್ನು ಗುರಿಯಿರಿಸಿ ನಡೆಸಿರುವ ದಾಳಿಗಳಿಂದಾಗಿ ನಾಗರಿಕ ವಸತಿ ಪ್ರದೇಶಗಳಲ್ಲೂ ಅಪಾರ ಸಾವುನೋವುಗಳು ಸಂಭವಿಸಿರುವುದಾಗಿ ಮೂಲಗಳು ತಿಳಿಸಿವೆ.
ಶನಿವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ವಿಡಿಯೋ ಭಾಷಣದಲ್ಲಿ ಪೂರ್ವ ಉಕ್ರೇನ್ನ ಪರಿಸ್ಥಿತಿ ಅತ್ಯಂತ ಸಂಕೀರ್ಣವಾಗಿದೆ ಹಾಗೂ ವರ್ಣಿಸಲೂ ಆಗದಷ್ಟು ಸಂಕಷ್ಟಕರವಾಗಿದೆ ಎಂದು ಹೇಳಿದ್ದರು. ಪೂರ್ವ ಉಕ್ರೇನ್ ಪ್ರಾಂತದ ಮೇಲೆಯೇ ತನ್ನ ದಾಳಿಗಳನ್ನು ಕೇಂದ್ರೀಕರಿಸುವ ಮೂಲಕ ರಷ್ಯಾ ಸೇನೆಯು ಕನಿಷ್ಠ ಮಟ್ಟದ ಫಲಿತಾಂಶವನ್ನಾದರೂ ಪಡೆಯಲು ಬಯಸುತ್ತಿದೆ ಎಂದವರು ವ್ಯಂಗ್ಯವಾಡಿದ್ದರು.
ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಆರ್ಸಿಬಿ ಮತ್ತು ಗುಜರಾತ್ ಟೈಟನ್ಸ್ ಮಧ್ಯೆ ನಡೆದ ರೋಚಕ ಪಂದ್ಯದಲ್ಲಿ 152 ರನ್ ಗಳಿಸುವ ಮೂಲಕ ಆರ್ಸಿಬಿ…
ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ರೋಚಕ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 19.3 ಓವರ್ಗಳಲ್ಲಿ 147…
ಪೇಟಿಎಂನ ಮಾತೃ ಸಂಸ್ಥೆಯಾಗಿರುವ ಒನ್ 97 ಕಮ್ಯುನಿಕೇಷನ್ಸ್ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವೇಶ್ ಗುಪ್ತಾ ಅವರು ತಮ್ಮ ಹುದ್ದೆಗೆ…
ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸತ್ತೇಗಾಲ ವಿವಿಧಡೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ…
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಇಂದು (ಶನಿವಾರ) ಭಾರತೀಯ ವಾಯುಪಡೆ ಬೆಂಗಾವಲು ಪಡೆ ವಾಹನದ ಮೇಲೆ ಭಯೋತ್ಪಾದಕರು ದಾಳಿ…
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರದಲ್ಲಿ ನಡೆದ ಬಿಜೆಪಿಯ ಬೃಹತ್ ರೋಡ್ ಶೋ ನಲ್ಲಿ ಮಂಗಳೂರು ನಗರ ದಕ್ಷಿಣದ ಶಾಸಕರಾದ ವೇದವ್ಯಾಸ್…