ಟೊರೊಂಟೊ: ಕೆನಡಾದಲ್ಲಿ ಖಲಿಸ್ತಾನಿ ಉಗ್ರರು ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ವಿರೂಪಗೊಳಿಸಿ ಬಣ್ಣ ಎರಚುವ ಮೂಲಕ ಭಾರತದ ವಿರುದ್ಧ ಅಡೆತಡೆಯಿಲ್ಲದೆ ಮುಂದುವರೆದಿದೆ.
ಒಂಟಾರಿಯೊದ ಹ್ಯಾಮಿಲ್ಟನ್ ಪಟ್ಟಣದ ಸಿಟಿ ಹಾಲ್ ಬಳಿ ಗುರುವಾರ ಮುಂಜಾನೆ ಈ ಘಟನೆ ವರದಿಯಾಗಿದೆ, ಅಲ್ಲಿ ಭಾರತ ಸರ್ಕಾರವು ಉಡುಗೊರೆಯಾಗಿ ನೀಡಿದ ಪ್ರತಿಮೆ ಇದಾಗಿತ್ತು ಎಂದು
ಡೈಲಿ ಹಂಟ್ ವರದಿ ಮಾಡಿದೆ.
ವಿಧ್ವಂಸಕ ಕೃತ್ಯದ ವೀಡಿಯೊದಲ್ಲಿರುವ ಪ್ರಕಾರ, ಆರು ಅಡಿ ಎತ್ತರದ ಕಂಚಿನ ಪ್ರತಿಮೆಗೆ ಖಲಿಸ್ತಾನಿ ಧ್ವಜವನ್ನು ಅಂಟಿಸಲಾಗಿದೆ. ಅದಕ್ಕೆ ಬಣ್ಣ ಮತ್ತು ಗೀಚುಬರಹದಿಂದ ವಿರೂಪ ಮಾಡಲಾಗಿದ್ದು, ಮಹಾತ್ಮಾ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸಲಾಗಿದೆ. ಹ್ಯಾಮಿಲ್ಟನ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಕೆನಾಡದಲ್ಲಿ ಭಾರತೀಯ ಸ್ಥಾಪನೆಗಳು ಮತ್ತು ದೇವಾಲಯಗಳ ಮೇಲೆ ಖಲಿಸ್ತಾನಿ ಬೆಂಬಲಿಗರ ದಾಳಿಗಳು ಹೆಚ್ಚುತ್ತಿವೆ.
2023 ರಿಂದ, ಕೆನಡಾದಾದ್ಯಂತ ಹಿಂದೂ ದೇವಾಲಯಗಳ ಮೇಲೆ ದಾಳಿಗಳ ಸರಮಾಲೆ ಹೆಚ್ಚುತ್ತಿದೆ. ಖಲಿಸ್ತಾನಿ ಉಗ್ರರು ಅರ್ಧ-ಡಜನ್ ಗೂ ಹೆಚ್ಚು ವಿಧ್ವಂಸಕ ಕೃತ್ಯ ನಡೆಸಿದ್ದಾರೆ. ಈ ವರ್ಷದ ಜನವರಿಯಲ್ಲಿ, ಬ್ರಾಂಪ್ಟನ್ನಲ್ಲಿರುವ ಗೌರಿ ಶಂಕರ ಮಂದಿರವನ್ನು ಗುರಿಯಾಗಿಟ್ಟುಕೊಂಡು ದೇವಾಲಯಗಳ ಗೋಡೆಗಳನ್ನು ‘ಖಾಲಿಸ್ತಾನ್ ಜಿಂದಾಬಾದ್, ಹಿಂದೂಸ್ತಾನ್ ಮುರ್ದಾಬಾದ್’ ಘೋಷಣೆ ಗೀಚಿದ್ದರು. ಫೆಬ್ರವರಿಯಲ್ಲಿ ಮಿಸ್ಸಿಸೌಗಾದ ರಾಮ ಮಂದಿರದ ಮೇಲೆ ದಾಳಿ ನಡೆಯಿತು.