ನವದೆಹಲಿ: ನನ್ನ ಕೆಲಸದ ಅವಧಿ ಮುಗಿದಿದೆ ಎಂದು ವಿಮಾನ ಚಾಲನೆಗೆ ಏರ್ ಇಂಡಿಯಾ ಪೈಲಟ್ ನಿರಾಕರಿಸಿದ ಘಟನೆ ಗುಜರಾತ್ ನ ರಾಜ್ ಕೋಟ್ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಮೂವರು ಬಿಜೆಪಿ ಸಂಸದರು ಸೇರಿದಂತೆ ಸುಮಾರು 100 ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ ಘಟನೆ ಭಾನುವಾರ ರಾತ್ರಿ ಜರುಗಿದೆ. ರಾಜ್ ಕೋಟ್ನಿಂದ ದೆಹಲಿಗೆ ಭಾನುವಾರ ರಾತ್ರಿ ಏರ್ ಇಂಡಿಯಾ ಪ್ರಯಾಣ ಬೆಳೆಸಬೇಕಿತ್ತು. ಆದರೆ ಪೈಲಟ್ ಹಾರಾಟ ವಿಮಾನ ನಡೆಸಲು ನಿರಾಕರಿಸಿದರು.
ರಾತ್ರಿ 8.30ಕ್ಕೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನವನ್ನು ಪ್ರಯಾಣಿಕರೆಲ್ಲರೂ ಏರಿದ್ದರು. ಪ್ರಯಾಣಿಕರ ಪೈಕಿ ರಾಜ್ಕೋಟ್ ಸಂಸದ ಮೋಹನ್ ಕುಂದರಿಯಾ, ಜಾಮ್ನಗರ ಸಂಸದೆ ಪೂನಂ ಮದಮ್ ಮತ್ತು ಹೊಸದಾಗಿ ಆಯ್ಕೆಯಾದ ರಾಜ್ಯಸಭಾ ಸಂಸದ ಕೇಸರಿದೇವಸಿಂಗ್ ಝಾಲಾ ಕೂಡ ಇದ್ದರು. ಆದರೆ ಪೈಲಟ್ ವಿಮಾನದ ಪೈಲಟ್ ನನ್ನ ಕೆಲಸದ ಅವಧಿ ಪೂರ್ಣಗೊಂಡಿದೆ. ಹೆಚ್ಚುವರಿಯಾಗಿ ಕೆಲಸ ಮಾಡುವುದು ಡಿಜಿಸಿಎ ನಿಯಮಗಳಿಗೆ ವಿರುದ್ಧ ಎಂದು ತಿಳಿಸಿದ್ದು, ವಿಮಾನ ಚಾಲನೆಗೆ ನಿರಾಕರಿಸಿದರು.
ತುರ್ತು ಆಧಾರದ ಮೇಲೆ ದೆಹಲಿಗೆ ತಲುಪಬೇಕಾದ ಕೆಲವು ಪ್ರಯಾಣಿಕರನ್ನು ಏರ್ ಇಂಡಿಯಾ, ಕೋಡ್ಶೇರ್ ವಿಮಾನವನ್ನು ಏರಲು ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ರಸ್ತೆ ಮೂಲಕ ಕರೆದೊಯ್ಯಲಾಗಿದೆ. ಉಳಿದ ಪ್ರಯಾಣಿಕರಿಗೆ ಹೋಟೆಲ್ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಅವರ ಟಿಕೆಟ್ ಹಣ ಮರುಪಾವತಿಸಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.